ಆ ವಿಡಿಯೋ ಮಾಡಿ ಅಂತಾರೆ: ನಟಿ ಸುಧಾರಾಣಿಗೆ ಸೋಷಿಯಲ್ ಮೀಡಿಯಾದಲ್ಲಿ ಏನೆಲ್ಲ ಕಾಮೆಂಟ್ಸ್ ಮಾಡ್ತಾರೆ?
ಸೋಷಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಮೆಸೇಜ್, ಕಾಮೆಂಟ್ ಮಾಡಿದ್ದಕ್ಕೆ ನಟಿ ರಮ್ಯಾ ಪೊಲೀಸರಿಗೆ ದೂರು ಕೊಟ್ಟಿದ್ದರು. ಈ ಸಂಬಂಧ ಹಲವರನ್ನು ಬಂಧಿಸಲಾಗಿದೆ. ಕನ್ನಡ ಚಿತ್ರರಂಗದ ಹಿರಿಯ ನಟಿ ಸುಧಾರಾಣಿ ಅವರು ಕೂಡ ಸೋಷಿಯಲ್ ಮೀಡಿಯಾದಲ್ಲಿ ಬರುವ ಕಾಮೆಂಟ್ಸ್, ಮೆಸೇಜ್ಗಳ ಬಗ್ಗೆ ಮಾತನಾಡಿದ್ದಾರೆ. 'ಕೆಲವರು ಆ ವಿಡಿಯೋ ಮಾಡಿ, ಈ ವಿಡಿಯೋ ಮಾಡಿ ಎಂದೂ ಕಾಮೆಂಟ್ ಮಾಡುತ್ತಿರುತ್ತಾರೆ. ಕೆಲವೊಮ್ಮೆ ಅವರಿಗೆ ಅನಿಸಿದ್ದೆಲ್ಲ ಹೇಳ್ತಾರೆ' ಎಂದು ಸುಧಾರಾಣಿ ಅಚ್ಚರಿ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.
'ಕಾಮೆಂಟ್ಗಳಲ್ಲಿ ಬರುವ ವಿಚಾರಗಳು ನನ್ನ ಬೆಳವಣಿಗೆಗೆ ಹೆಲ್ಪ್ ಆಗುತ್ತೆ ಅಂದಾಗ ಅದನ್ನ ತೆಗೆದುಕೊಳ್ಳುತ್ತೀನಿ. ಕೆಲವೊಮ್ಮೆ ಅವರಿಗೆ ಅನಿಸಿದ್ದು ಹೇಳ್ತಾರೆ. ಅದಕ್ಕೆಲ್ಲ ಏನ್ ಮಾಡೋದು? ಎಂದಿದ್ದಾರೆ. ಆಗ ನಾನು ಸುಮ್ಮನೇ ಇರುತ್ತೇನೆ. ಆದ್ರೆ ತುಂಬಾ ಬೇಜಾರಾದ್ರೆ ಪ್ರಶ್ನೆ ಮಾಡುತ್ತೇನೆ. ಸದ್ಯಕ್ಕೆ ಅಂತಹ ಪರಿಸ್ಥಿತಿ ಬಂದಿಲ್ಲ. ಬಂದರೆ ಸುಮ್ಮನೆ ಅಂತೂ ಇರಲ್ಲ' ಎಂದು ನಟಿ ಎಚ್ಚರಿಕೆ ಕೊಟ್ಟಿದ್ದಾರೆ.

'ನಾನು ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆಕ್ಟೀವ್ ಇರುತ್ತೇನೆ. ನನಗೆ ಅಲ್ಲಿ ಅಭಿಮಾನಿಗಳು ಬರೆಯುವುದಕ್ಕೆ ರಿಪ್ಲೈ ಮಾಡುವುದು ತುಂಬಾ ಖುಷಿ ಕೊಡುತ್ತೆ. ಅವರು ಎಷ್ಟೆಲ್ಲ ಪ್ರೀತಿ ಅಭಿಮಾನದಿಂದ ಇದ್ದಾರೆ ಎನ್ನುವುದು ಅದರಿಂದಲೇ ತಿಳಿಯುತ್ತೆ. ಕಾಮೆಂಟ್ಗಳಲ್ಲಿ ಒಮ್ಮೊಮ್ಮೆ ಒಳ್ಳೆಯ ಸಲಹೆಗಳನ್ನ ಕೊಡ್ತಾರೆ. ಮುಂದೆ ನೀವು ಈ ತರ ವಿಡಿಯೋ ಮಾಡಿ, ಯೂಟ್ಯೂಬ್ನಲ್ಲಿ ಹೀಗೆ ಮಾಡಿ ಅಂತಾರೆ. ಅವರು ಅದನ್ನೆಲ್ಲ ಹೇಳಬೇಕು ಅಂತೇನಿಲ್ಲ. ಆದರೆ ನಮ್ಮ ಮೇಲೆ ಅಷ್ಟೆಲ್ಲ ಕಾಳಜಿ ಇದೆ. ಒಳ್ಳೇದು, ಕೆಟ್ಟದ್ದು ಎಲ್ಲ ಕಡೆ ಇರುತ್ತೆ' ಎಂದು ಸುಧಾರಾಣಿ ಹೇಳಿದ್ದಾರೆ.
ಇನ್ನು ವಿಷ್ಣುವರ್ಧನ್ ಅವರ ಸಮಾಧಿ ನೆಲಸಮ ಮಾಡಿದ ಇತ್ತೀಚಿನ ಘಟನೆ ಬಗ್ಗೆಯೂ ಸುಧಾರಾಣಿ ಬೇಸರ ಹೊರಹಾಕಿದ್ದಾರೆ. 'ವಿಷ್ಣುವರ್ಧನ್ ಅವರ ಜೊತೆ "ಹಾಲುಂಡ ತವರು" ಸಿನಿಮಾದಲ್ಲಿ ನಟಿಸಲು ನನಗೆ ಆಗಲಿಲ್ಲ. ಆ ಬೇಜಾರು ಈಗಲೂ ಇದೆ. ನನಗೆ ಆ ಸಮಯದಲ್ಲಿ ಸರ್ಜರಿ ಆಗಿದ್ದರಿಂದ ಸಿನಿಮಾ ಕೈಬಿಡಬೇಕಾಯ್ತು. ಇನ್ನು ವಿಷ್ಣುವರ್ಧನ್ ಅವರಂತಹ ಕಲಾವಿದರಿಗೆ ಈ ತರ ಆಯ್ತಲ್ಲ ಅನ್ನೋ ಬೇಸರ ಇದೆ. ಈಗ ಅವರಿಗೆ ಕೊನೆಗೆ ಗೌರವಯುತ ಅಂತ್ಯ ಸಿಗುತ್ತಿರುವುದು ಸಮಾಧಾನ ತಂದಿದೆ' ಎಂದಿದ್ದಾರೆ.

ದರ್ಶನ್ ಬಗ್ಗೆ ಏನಂದ್ರು?
ನಟ ದರ್ಶನ್ ಜೈಲಿನಲ್ಲಿರುವುದು ಕನ್ನಡ ಚಿತ್ರರಂಗಕ್ಕೆ ನಷ್ಟ ಎಂಬ ವಿಚಾರವಾಗಿ ಮಾತನಾಡಿರುವ ಸುಧಾರಾಣಿ, 'ಖಂಡಿತವಾಗಿಯೂ ಹೌದು. ಒಬ್ಬರೇ ಎಲ್ಲ ಸ್ಥಾನ ತುಂಬೋಕಾಗಲ್ಲ. ಎಲ್ಲ ರೀತಿಯ ವಿಭಿನ್ನ ಪಾತ್ರಗಳನ್ನು ಮಾಡುವವರು ಬೇಕು. ಎಲ್ಲ ಕಲಾವಿದರೂ ಬೇಕು. ಫೈಟರ್ಸ್, ಡ್ಯಾನ್ಸರ್, ಪೋಷಕ ಪಾತ್ರ ಮಾಡುವವರು ಸೇರಿ ಚಿತ್ರರಂಗಕ್ಕೆ ಎಲ್ಲರೂ ಇರಬೇಕು. ಆಗಲೇ ಇಂಡಸ್ಟ್ರಿ ಚೆನ್ನಾಗಿ ನಡೆಯುತ್ತೆ' ಎಂದು ಅಭಿಪ್ರಾಯ ತಿಳಿಸಿದ್ದಾರೆ.
-
CinemaCon 2026: ಜಾಗತಿಕ ವೇದಿಕೆಯಲ್ಲಿ 'ರಾಮಾಯಣ' ಪ್ರಚಾರ ಶುರು; ಲಾಸ್ವೇಗಸ್ನಲ್ಲಿ ಬೀಡುಬಿಟ್ಟ ರಾಕಿಂಗ್ ಸ್ಟಾರ್ ಯಶ್ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ












Click it and Unblock the Notifications