ಕನ್ನಡ ಇಂಡಸ್ಟ್ರಿ ಗಂಡಸರು ಏನು ಬಳೆ ಹಾಕಿಕೊಂಡಿದ್ದಾರಾ? - ನಟಿ ಸಂಜನಾ ಗಲ್ರಾನಿ
ಸ್ಯಾಂಡಲ್ವುಡ್ ಡ್ರಗ್ ಕೇಸ್ನಲ್ಲಿ ನಟಿ ಸಂಜನಾ ಗಲ್ರಾನಿ ಅವರನ್ನು ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ನಟಿ ಸುಮಾರು ಮೂರು ತಿಂಗಳ ಕಾಲ ಜೈಲು ವಾಸ ಅನುಭವಿಸಿದ್ದರು. ಇದೀಗ ಈ ಪ್ರಕರಣದಲ್ಲಿ ನಟಿ ಸಂಜನಾ ಗಲ್ರಾನಿ ಅವರಿಗೆ ಕ್ಲೀನ್ ಚಿಟ್ ಸಿಕ್ಕಿದ್ದು, ಸಂಪೂರ್ಣವಾಗಿ ಪ್ರಕರಣದಿಂದ ಹೊರಬಂದಿದ್ದಾರೆ. ಆದರೆ ಈ ಕೇಸ್ನಲ್ಲಿ ಅವರನ್ನು ಸಿಲುಕಿಸಿದ ಬಗ್ಗೆ ತೀವ್ರ ನೋವು ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಇತ್ತೀಚಿಗೆ ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿದ ಅವರು, ನಾನೆಷ್ಟು ಕನ್ನಡತಿ ಅಂದರೆ ನಾನು ಸ್ಪಷ್ಟವಾಗಿ ಕನ್ನಡ ಮಾತನಾಡುತ್ತೇನೆ. ಕನ್ನಡ ಮಾತನಾಡುತ್ತೇನೆ. ಕನ್ನಡ ಚಿತ್ರರಂಗಕ್ಕೆ ಬಂದ ಮೇಲೆ ಕನ್ನಡ ಓದುವುದನ್ನು ಕಲಿತಿದ್ದೇನೆ. ಯಾಕೆಂದರೆ ನಾನು ಶಾಶ್ವತವಾಗಿ ಅಂದರೆ ನನ್ನ ಕೊನೆ ಉಸಿರು ಇರುವ ತನಕ ಕನ್ನಡದ ನಟಿಯಾಗಬೇಕು ಎಂದು, ಎಷ್ಟು ಕಷ್ಟಪಟ್ಟು ಸ್ಪಷ್ಟವಾಗಿ ಕನ್ನಡ ಕಲಿತಿದ್ದೇನೆ. ಆ ಕಷ್ಟ ನನಗೆ ಗೊತ್ತು.

ಇಷ್ಟು ಕನ್ನಡದ ಬಗ್ಗೆ ಕನ್ನಡದ ಹುಡುಗಿಯರು ಸಹ ಮಾತನಾಡಲ್ಲ. ಒಂದೂ ಇಂಗ್ಲಿಷ್ ಮಾತನಾಡದೇ ನಾವು ಅಷ್ಟು ಸ್ಪಷ್ಟವಾಗಿ ಅಷ್ಟು ಸರಿಯಾಗಿ ಕನ್ನಡ ಮಾತನಾಡುತ್ತೇವೆ ಎಂದರೆ ಅದು ನಮ್ಮ ಡೆಡಿಕೇಷನ್. ಕನ್ನಡ ಕಲಿಯುವ ನನ್ನ ಪ್ರಯತ್ನ ನಾನು ಮಾಡುತ್ತಲೇ ಇರುತ್ತೇನೆ. ಒಳ್ಳೆ ಪಾತ್ರ ಸಿಗಬೇಕು ಎಂದು ನಾನು ಮಾಡುತ್ತಲೇ ಇರುತ್ತೇನೆ ಎಂದರು.
ಹೀಗಿರುವಾಗ ಇಂತಹ ಪ್ರಕರಣದಲ್ಲಿ ಇಡೀ ಕರ್ನಾಟಕದಲ್ಲಿ ಸಿಕ್ಕಿದ್ದು ಇಬ್ಬರು ಹೆಣ್ಣು ಮಕ್ಕಳೆನಾ..? ಅದರಲ್ಲೂ ಉತ್ತರ ಭಾರತದವರು ಅಂತಾ ಮೂಲೆಗೆ ಹಾಕಿ ಚಚ್ಚಿ ಹಾಕಿದ್ದೀರಾ, ಬೇರೆ ಯಾರೂ ಸಿಗಲಿಲ್ವಾ..? ಎಲ್ಲಾ ಕನ್ನಡ ಇಂಡಸ್ಟ್ರಿ ಗಂಡಸರು, ವಿವಿಐಪಿಗಳ ಮಕ್ಕಳು, ಯಾರ್ಯಾರು ಪಾರ್ಟಿ ಮಾಡುತ್ತಾರೆ ಅವರೆಲ್ಲಾ ಏನು ಬಳೆ ಹಾಕಿಕೊಂಡಿದ್ದಾರಾ? ನಾನು ಮತ್ತೆ ರಾಗಿಣಿನೇ ಜಂಟ್ಸ್ ಆಗಿದ್ದೇವಾ ಇಲ್ಲಿ ಎಂದು ಬಹಳ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.

ಮಾತು ಮುಂದುವರಿಸಿದ ಅವರು, ನಮ್ಮ ಪಾಡಿಗೆ ನಾವು ಬದುಕುವವರು. ಕಷ್ಟ ಪಟ್ಟು ದುಡಿಯುವವರು. ಹತ್ತೊಂಬತ್ತು ವರ್ಷದಿಂದ ನಾನು ಈ ಚಿತ್ರರಂಗದಲ್ಲಿ ಇದ್ದೇನೆ. ನನ್ನನ್ನು ನೀವು ನೋಡಿದ್ದು ಪ್ರೆಸ್ಮೀಟ್ಗಳಲ್ಲಿ, ಕೆಲವು ಕಾರ್ಯಕ್ರಮಗಳಲ್ಲಿ ನೋಡಿದ್ದೀರಿ, ಫೇಸ್ಬುಕ್ ಲೈವ್ನಲ್ಲಿ ನೋಡಿದ್ದೀರಿ, ಯೋಗ ಮಾಡುತ್ತಿರುತ್ತೇನೆ, ಜಿಮ್ ಮಾಡುತ್ತಿರುತ್ತೇನೆ. ಡಾನ್ಸ್ ಏರೋಬಿಕ್ಸ್ ಮಾಡುತ್ತಿರುತ್ತೇನೆ. ಹೀಗಿರುವಾಗ ಯಾವಾಗಾದರೂ ಬಂದು ಸಿಗರೇಟು ಸೇದಿ ಅಂತಾ ಹೇಳಿದ್ದೇನಾ? ಒಂದು ಬಿಯರ್ ಬಾಟೆಲ್ ಆದ್ರೂ ನನ್ನ ಕೈಯಲ್ಲಿ ಯಾರಾದರೂ ನೋಡಿದ್ದೀರಾ..? ಏನೂ ಇಲ್ಲಾ. ಆದರೆ ಬರೀ ಆರೋಪ ಮಾಡಿದರು ಎಂದು ಸಂಜನಾ ಗಲ್ರಾನಿ ಬೇಸರ ವ್ಯಕ್ತಪಡಿಸಿದ್ದಾರೆ.
-
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
ಡಿವೋರ್ಸ್ವರೆಗೆ ಪತಿಯ ನಿವಾಸದಲ್ಲೇ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಿ: ನಟ ವಿಜಯ್ ಪತ್ನಿ ಕೋರ್ಟ್ಗೆ ಮನವಿ -
Yash: ಪತ್ನಿ ರಾಧಿಕಾ ಪಂಡಿತ್ ಹುಟ್ಟುಹಬ್ಬಕ್ಕೆ ಹೊಸ ಲುಕ್ನಲ್ಲಿ ಯಶ್ ಪ್ರತ್ಯಕ್ಷ -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
ಟಿ20 ವಿಶ್ವಕಪ್ 2026 ಫೈನಲ್ ನಂತರ ಎಲ್ಲಾ ಮಾದರಿಯ ಕ್ರಿಕೆಟ್ಗೆ ಸೂರ್ಯಕುಮಾರ್ ಯಾದವ್ ನಿವೃತ್ತಿ ಘೋಷಣೆ ವದಂತಿ -
Vijay Divorce: ಡಿವೋರ್ಸ್ ವದಂತಿ ನಡುವೆಯೇ ನಟಿ ತ್ರಿಶಾ ಜೊತೆ ಕಾಣಿಸಿಕೊಂಡ ದಳಪತಿ ವಿಜಯ್; ವಿಡಿಯೋ ವೈರಲ್ -
UPSC Results: ಯಾದಗಿರಿ ಜಿಲ್ಲೆ ಒಂದರಲ್ಲೇ 4 ಮಂದಿ ಯುಪಿಎಸ್ಸಿ ಪಾಸ್, ಯಾರವರು? ಹಿನ್ನೆಲೆ ಏನು -
Karnataka Weather: ಕಲಬುರಗಿಯಲ್ಲಿ 39 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿಸಿಲ ಬೇಗೆ -
ದುಬೈ ವಿಮಾನ ನಿಲ್ದಾಣಕ್ಕೆ ನುಗ್ಗಿದ ಡ್ರೋನ್, ಎಲ್ಲಾ ವಿಮಾನ ಹಾರಾಟ ದಿಢೀರ್ ಸ್ಥಗಿತ | Operation Roaring Lion -
LPG Price Hike: ಗೃಹಬಳಕೆ ಎಲ್ಪಿಜಿ ಸಿಲಿಂಡರ್ ಬೆಲೆ 60 ರೂಪಾಯಿ ಏರಿಕೆ, ವಾಣಿಜ್ಯ ಸಿಲಿಂಡರ್ ದರ 115 ರೂಪಾಯಿ ಹೆಚ್ಚಳ












Click it and Unblock the Notifications