A1 Pavitra Gowda: ಪತ್ನಿ ಕಷ್ಟ ಹೇಳಿಕೊಂಡಿದ್ದಾಳೆ, ದರ್ಶನ್ ಕೊಲೆ ಮಾಡಿದ್ರೆ ಹೇಗೆ?: ಪವಿತ್ರಾ ಪರ ಮಾಜಿ ಪತಿ ಹೇಳಿಕೆ
ಬೆಂಗಳೂರು, ಜೂನ್ 13: ನಟ ದರ್ಶನ್ ಚಿತ್ರದುರ್ಗ ಮೂಲದ ಕೊಲೆ ಪ್ರಕರಣದಲ್ಲಿ ಬಂಧನವಾಗಿದೆ. ಮೃತ ವ್ಯಕ್ತಿ ಪವಿತ್ರಾಗೌಡಗೆ ಮರ್ಮಾಂಗದ ಫೋಟೋವನ್ನು ಕಳುಹಿಸಿದ್ದ ಎಂದು ಆತನನ್ನು ಕೊಲೆ ಮಾಡಲಾಗಿದೆ. ಪ್ರಕರಣದಲ್ಲಿ ದರ್ಶನ್ ಗೆಳತಿ ಪವಿತ್ರಾ ಗೌಡರನ್ನು ಮೊದಲ ಆರೋಪಿ (A1) ಮಾಡಲಾಗಿದೆ. ಇದೀಗ ಈಕೆಯಿಂದ ಡಿವೋರ್ಸ್ ಪಡೆದಿದ್ದ ಮಾಜಿ ಪತಿ ಸಂಜಯ್ ಸಿಂಗ್ ಪವಿತ್ರಾ ಪರ ಬ್ಯಾಟ್ ಬೀಸಿದ್ದಾರೆ.
ದರ್ಶನ್ ಮತ್ತು ಸಹಚರ ಗುಂಪು 'ಡಿ ಗ್ಯಾಂಗ್' ನಡೆಸಿರುವ ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ ಸಹ ಜೈಲಿನಲ್ಲಿದ್ದಾರೆ. ಈಕೆಯು ದರ್ಶನ್ ಸಂಪರ್ಕಕ್ಕೂ ಬರುವ ಮೊದಲೇ ತನ್ನ ಮೊದಲ ಪತಿ ಸಂಜಯ್ ಸಿಂಗ್ಗೆ ಡಿವೋರ್ಸ್ ನೀಡಿದ್ದಾಳೆ. ಇದೀಗ ಪ್ರಕರಣ ಕುರಿತು ಆ ಮಾಜಿ ಪತಿ ಸಿಂಗ್ ಪ್ರತಿಕ್ರಿಯಿಸಿದ್ದು, ಪವಿತ್ರಾ ಪರ ಪ್ರತಿಕ್ರಿಯಿಸಿದ್ದಾರೆ.

ಪತ್ನಿ ಪವಿತ್ರಾ ತಮಗೆ ಕಷ್ಟ ಬಂದಾಗ ಆಕೆ ಗಂಡ ದರ್ಶನ್ಗೆ ಹೇಳಿಕೊಂಡಿದ್ದಾಳೆ. ತನ್ನ ನೋವು ಗಂಡನಿಗೆ ಹೇಳಿಕೊಳ್ಳದೇ ಮತ್ಯಾರಿಗೆ ಹೇಳಿಕೊಳ್ಳಬೇಕು. ಸಾಮಾನ್ಯವಾಗಿ ಯಾವುದೇ ತೊಂದರೆಗಳು ಆದಾಗ ಯಾರೇ ಹೆಂಡಿತಿಯರು ಆಗಲಿ ಮೊದಲು ತಮ್ಮ ಪತಿಗೆ ಹೇಳಿಕೊಳ್ಳುತ್ತಾರೆ. ಇಲ್ಲೂ ಹಾಗೆ ಆಗಿದೆ. ಪವಿತ್ರಾ ಹೇಳಿಕೊಂಡ ಮೇಲೆ ಗಂಡ ದರ್ಶನ್ ಕೊಲೆ ಮಾಡಿದರೆ ಹೇಗೆ ಎಂದು ಸಿಂಗ್ ಪ್ರಶ್ನೆ ಮಾಡಿದ್ದಾರೆ. ಈ ಮೂಲಕ ಇದರಲ್ಲಿ ಪವಿತ್ರಾದ್ದೇನು ತಪ್ಪಿದೆ ಎಂಬಂತೆ ಮಾತನಾಡಿದ್ದಾರೆ.
ಪವಿತ್ರಾ ಜತೆಗಿನ ಮದುವೆ, ಡಿವೋರ್ಸ್ ವಿವರ
ನಾನು ಉತ್ತರ ಪ್ರದೇಶದ ಹುಡುಗ, ಬೆಂಗಳೂರಿಗೆ 2002ರಲ್ಲಿ ಬಂದಿದ್ದು, ವಿವಿಧ ಮಲ್ಟಿ ನ್ಯಾಷನಲ್ ಕಂಪನಿಗಳಲ್ಲಿ ಕೆಲಸ ಮಾಡಿದ್ದೇನೆ. ಈ ವೇಳೆ ನನಗೆ ಪವಿತ್ರಾ ಗೌಡ ಪರಿಚಯ ಆಗಿತ್ತು. ಬಳಿಕ ನಾವಿಬ್ಬರು ಮದುವೆ ಆದೆವು. ಮದುವೆ ಆದ ಮೂರು ವರ್ಷಗಳ ನಂತರ ಮಗಳು ಹುಟ್ಟಿದಳು. ಡಿವೋರ್ಸ್ ಆದ ಬಳಿಕ ನಾನು ಮಗಳೊಂದಿಗೆ ವರ್ಷಕ್ಕೊಮ್ಮೆ ಮಾತನಾಡುತ್ತೇನೆ.
ಸದ್ಯ ದರ್ಶನ್ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಮಗಳ ಬಳಿ ಮಾತನಾಡಲು ಹೋಗಿಲ್ಲ. ಮಗಳ ಕೋಪ ಬಂದರೆ ಏನು ಮಾಡಿಕೊಳ್ಳುತ್ತಾರೋ ಗೊತ್ತಿಲ್ಲ ಎಂದು ಸಿಂಗ್ ಕಳವಳ ವ್ಯಕ್ತಪಡಿಸಿದ್ದಾರೆ. ಮದುವೆ ಬಳಿಕ ಕ್ರಮೇಣ ಪವಿತ್ರಾಗೌಡ ಸಿನಿಮಾ ದತ್ತ ಒಲವು ಬೆಳೆಸಿಕೊಂಡರು. ನಂತರ ನಮ್ಮ ಅವಳ ಜೀವನದ ರೀತಿಯ ನನ್ನ ಜೀವನದ ರೀತಿ ಬೇರೆ ಆಯಿತು.

2013ರಲ್ಲಿ ಪವಿತ್ರಾ ಗೌಡರಿಂದ ಡಿವೋರ್ಸ್
ಹೀಗಾಗಿ ನಮ್ಮಿಬ್ಬರ ಮಧ್ಯೆ ವ್ಯತ್ಯಾಸ ಉಂಟಾದ ಬೆನ್ನೆಲ್ಲೆ 2013ರಲ್ಲಿ ಪವಿತ್ರಾ ಗೌಡ ಡಿವೋರ್ಸ್ ಗೆ ಅರ್ಜಿ ಸಲ್ಲಿಸಿದರು. ಅಷ್ಟೋತ್ತಿಗಾಗಲೇ ನಾವು ಇಬ್ಬರು ಪ್ರತ್ಯೇಕವಾಗಿದ್ದು, ಒಂದು ವರ್ಷವಾಗಿತ್ತು ಎಂದು ಮಾಧ್ಯಮದ ಎದುರು ಹಳೆಯ ಕೆಲವು ವಿಚಾರಗಳನ್ನು ಸಿಂಗ್ ಹಂಚಿಕೊಂಡಿದ್ದಾರೆ. ಪತ್ನಿ ಬಿಟ್ಟರು ಸಹಿತ ಆಕೆಯ ಪರ ಇದೀಗ ಸಿಂಗ್ ಮಾತನಾಡಿರುವುದು ಗಮನ ಸೆಳೆದಿದೆ.
ಇದೆಲ್ಲ ಆಗುತ್ತಿದ್ದಂತೆ ಪವಿತ್ರಾಗೌಡ ಒಂದೆರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟ ದರ್ಶನ್ ಪರಿಚಯವಾಗಿದೆ. ಬಳಿಕ ಇಬ್ಬರು ಸ್ನೇಹವಾಗಿ, ಸ್ನೇಹಿ ಪ್ರೀತಿಗೆ ತಿರುಗಿದೆ. ಇದೆಲ್ಲವನ್ನು ಕಳೆದ ಹತ್ತು ವರ್ಷಗಳಿಂದ ಗುಟ್ಟಾಗಿ ನಿರ್ವಹಣೆ ಮಾಡಲಾಗುತ್ತಿತ್ತು. ಕಳೆದ ಕೆಲವು ತಿಂಗಳ ಹಿಂದೆ ಪವಿತ್ರಾ ಗೌಡ ನಮ್ಮ ಪ್ರೀತಿಗೆ ಹತ್ತುವರ್ಷ ಎಂದು ದರ್ಶನ್ ಜೊತೆಗೆ ಫೋಟೋ ಹಂಚಿಕೊಂಡಿದ್ದರು. ಬಳಿಕ ಎಲ್ಲವು ಬಹಿರಂಗವಾಗಿತ್ತು.
-
April 10 Horoscope: 12 ರಾಶಿಗಳಿಗೆ ಇಂದು ಆರೋಗ್ಯ, ಹಣಕಾಸು ಮತ್ತು ಪ್ರೇಮದಲ್ಲಿ ಮಿಶ್ರ ಫಲ -
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
Bengaluru: ಬೆಂಗಳೂರು ನಗರದಲ್ಲಿ ಸ್ವಿಗ್ಗಿ, ಜೊಮ್ಯಾಟೋ ಡೆಲಿವರಿ ಬಾಯ್ಸ್ಗೆ ಸಂಕಷ್ಟ, ಅಮಾನವೀಯ ಲಿಫ್ಟ್ ಸಂಸ್ಕೃತಿ -
ಚಿಕ್ಕಮಗಳೂರಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶ್ರಿನಂದಾ ಸಾವು: 2 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆ -
Copra: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಮತ್ತೆ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ: ನಿರ್ಮಾಣವಾಯ್ತು ಹೊಸ ಇತಿಹಾಸ -
Mona Lisa: ಮಹಾಕುಂಭ ಮೇಳದ ಫೇಮಸ್ ಮೊನಾಲಿಸಾ ಪತಿಗೆ ಕಾನೂನು ಸಂಕಷ್ಟ: ಫರ್ಮಾನ್ ಖಾನ್ ಮೇಲೆ ಪೋಕ್ಸೋ ಪ್ರಕರಣ -
2nd PUC: ಬೆಂಗಳೂರು - ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 260 ವಿದ್ಯಾರ್ಥಿಗಳಿಗೆ 35,000 ರೂ. -
RBI New Rule: ಇನ್ಮುಂದೆ ಆನ್ಲೈನ್ ವಹಿವಾಟಿನಲ್ಲಿ ದೊಡ್ಡ ಬದಲಾವಣೆ: 10,000 ರೂ. ಹಣ ವರ್ಗಾವಣೆಗೂ ಹೊಸ ನಿಯಮ -
Gold Rate April 10: ಚಿನ್ನ - ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಬೆಳವಣಿಗೆ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
ದ್ವಿತೀಯ PUC ರಿಪೀಟರ್ಸ್ ಗಮನಕ್ಕೆ: ತಾಂತ್ರಿಕ ದೋಷ ಸರಿಪಡಿಸಿ ಪರಿಷ್ಕೃತ ಫಲಿತಾಂಶ ಪ್ರಕಟಿಸಿದ ಮಂಡಳಿ -
ಸಾಮಾಜಿಕ ಜಾಲತಾಣದ ಕರೆಗೆ ಓಗೊಟ್ಟ ಹೆಚ್.ಡಿ.ಕುಮಾರಸ್ವಾಮಿ: ನಂಜನಗೂಡಿನ ಹುಲ್ಲಳ್ಳಿಯ ನೊಂದ ಕುಟುಂಬಕ್ಕೆ ಅಭಯ












Click it and Unblock the Notifications