ನಟಿ ಸುಧಾರಾಣಿ ಕೊಲೆಗೆ ಗಂಡನಿಂದಲೇ ಸ್ಕೆಚ್, ಜೀವ ಉಳಿಸಿದ್ದು ಈ ಮಹಾನ್ ನಿರ್ಮಾಪಕಿ! Actress Sudharani
ನಟಿ ಸುಧಾರಾಣಿ ಅವರನ್ನ ನೋಡಿದರೆ ಎಂತಹವರಿಗೂ ಹೊಟ್ಟೆ ಕಿಚ್ಚು ಆಗೇ ಆಗುತ್ತದೆ. ಯಾಕಂದ್ರೆ, ನಟಿ ಸುಧಾರಾಣಿ ಅವರಿಗೆ 50 ವರ್ಷ ವಯಸ್ಸು ದಾಟಿದರೂ ಅವರ ನಟನೆ & ಸೌಂದರ್ಯ ಯಾವುದೇ ಕಾರಣಕ್ಕೂ ಹಿಂದೆ ಉಳಿದಿಲ್ಲ. ಈಗಲೂ ಎಲ್ಲಾ ಪಾತ್ರ ಮಾಡುತ್ತಾ, ಹೊಸ ನಟಿಯರಿಗೆ ಕೂಡ ಸವಾಲು ಹಾಕುವ ಹಂತಕ್ಕೆ ಬೆಳೆದು ನಿಂತಿದ್ದಾರೆ. ಆದರೆ, ನಟಿ ಸುಧಾರಾಣಿ ಕೊಲೆಗೆ ಗಂಡನಿಂದಲೇ ಸ್ಕೆಚ್, ಜೀವ ಉಳಿಸಿದ್ದು ಈ ಮಹಾನ್ ನಿರ್ಮಾಪಕಿ ಅನ್ನೋದು ನಿಮಗೆ ಗೊತ್ತೆ?
ನಟಿ ಸುಧಾರಾಣಿ ಅವರು ಈಗ ನಗುತ್ತಿರುವುದನ್ನು ಮಾತ್ರ ನಾವು ನೋಡುತ್ತಿದ್ದೇವೆ. ಆದರೆ ಅವರು ಕಣ್ಣೀರು ಹಾಕಿ, ಪ್ರಾಣ ಕಳೆದುಕೊಳ್ಳುವ ಪರಿಸ್ಥಿತಿಗೆ ಹೋಗಿದ್ದು ಎಲ್ಲರಿಗೂ ಗೊತ್ತಿಲ್ಲ. ನಟಿ ಸುಧಾರಾಣಿ ಅವರು ಮೊದಲ ಗಂಡ ಕೊಲೆ ಮಾಡುವುದಕ್ಕೂ ಪ್ರಯತ್ನ ಮಾಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಹೀಗೆ ದೂರದ ಅಮೆರಿಕದಲ್ಲಿ ಹೋಗಿ ಸಂಕಷ್ಟಕ್ಕೆ ಸಿಲುಕಿ ಪರದಾಡಿದ್ದ ನಟಿ ಸುಧಾರಾಣಿ ಅವರನ್ನು ಕನ್ನಡದ ಖ್ಯಾತ ನಿರ್ಮಾಪಕಿ ರಕ್ಷಣೆ ಮಾಡಿದ್ದರು!

ಸುಧಾರಾಣಿ ಸಾಯಿಸಲು ಗಂಡನ ಸ್ಕೆಚ್?
ಹೌದು, ನಟಿ ಸುಧಾರಾಣಿ 1996 ರಲ್ಲಿ ಡಾಕ್ಟರ್ ಒಬ್ಬರನ್ನ ಮದುವೆ ಆಗಿ ಅಮೆರಿಕಗೆ ಶಿಫ್ಟ್ ಆಗಿದ್ದರು. ಆದರೆ ಮೊದಲ ಗಂಡ ಸಿಕ್ಕಾಟಪಟ್ಟೆ ಟಾರ್ಚರ್ ಕೊಡುತ್ತಿದ್ದರಂತೆ. ಅಮೆರಿಕಗೆ ಶಿಫ್ಟ್ ಆದ ನಂತರ ನಟಿ ಸುಧಾರಾಣಿ ಅವರ ಗಂಡ ಈ ರೀತಿ ಟಾರ್ಚರ್ ಕೊಡುತ್ತಿದ್ದ ಕಾರಣ, ಗಂಡನಿಂದಲೇ ಸಾಯುವ ಹಂತಕ್ಕೆ ಹೋಗಿತ್ತಂತೆ ಅವರ ಪರಿಸ್ಥಿತಿ. ಖ್ಯಾತ ವೈದ್ಯನಾಗಿದ ನಟಿ ಸುಧಾರಾಣಿ ಅವರ ಮೊದಲ ಗಂಡ, ನಟಿ ಸುಧಾರಾಣಿ ಅವರಿಗೆ ಚುಚ್ಚಲು ವಿಷದ ಅಥವಾ ಕೆಮಿಕಲ್ ಇಂಜಕ್ಷನ್ ಕೂಡ ರೆಡಿ ಮಾಡಿದ್ದನಂತೆ...
ಪಾರ್ವತಮ್ಮ ರಾಜ್ಕುಮಾರ್ ಮಹತ್ವದ ಸಹಾಯ!
ನಟಿ ಸುಧಾರಾಣಿ ಅವರು ತಮ್ಮ ಮೊದಲ ಗಂಡನ ಟಾರ್ಚರ್ ತಡೆಯಲು ಆಗದೆ, ಅಮೆರಿಕದ ಮನೆಯಿಂದ ತಪ್ಪಿಸಿಕೊಂಡಿದ್ದರಂತೆ. ಹೀಗೆ ತಪ್ಪಿಸಿಕೊಂಡ ಅವರು ಪರಿಚಯ ಇದ್ದವರ ಮನೆಗೆ ಹೋಗಿ ಆಶ್ರಯ ಪಡೆದಿದ್ದರಂತೆ. ಆದ್ರೆ ನಟಿ ಸುಧಾರಾಣಿ ಅವರ ಪಾಸ್ಪೋರ್ಟ್ ಕಿತ್ತುಕೊಂಡು ಇಟ್ಟುಕೊಂಡಿದ್ದ ಮೊದಲ ಗಂಡ, ನಟಿ ಸುಧಾರಾಣಿ ಭಾರತಕ್ಕೆ ಹೋಗದಂತೆ ಕುತಂತ್ರ ಮಾಡಿ ಆಟ ಆಡಿದ್ದ. ಆದರೆ ಕೊನೆಗೆ ಕನ್ನಡದ ಹೆಮ್ಮೆ & ನಿರ್ಮಾಪಕಿ ಪಾರ್ವತಮ್ಮ ರಾಜ್ಕುಮಾರ್ ಅವರು ತಮಗೆ ಪರಿಚಯ ಇದ್ದವರ ಸಂಪರ್ಕ ಮಾಡಿ, ಕೊನೆಗೂ ನಟಿ ಸುಧಾರಾಣಿ ಅವರನ್ನ ಸೇಫ್ ಮಾಡಿದ್ದರು. ನಂತರ ರೆಬೆಲ್ ಸ್ಟಾರ್ ಅಂಬರೀಶ್ ಅವರು ನಟಿ ಸುಧಾರಾಣಿ ಅವರು ಭಾರತಕ್ಕೆ ಬರುವಂತೆ ಪಾಸ್ಪೋರ್ಟ್ ಸೇರಿ ಹಲವು ಸಹಾಯ ಮಾಡಿದ್ದರಂತೆ.
ಇಷ್ಟೆಲ್ಲಾ ಹಿಂಸೆ ಅನುಭವಿಸುತ್ತಿರುವ ವಿಚಾರ ತಿಳಿದು ಮರಳಿ ಭಾರತಕ್ಕೆ ಕರೆತಂದ ನಂತರ, ಇನ್ನೊಂದು ಮದುವೆ ಆಗಿ ಈಗ ಖುಷಿ ಖುಷಿಯಾಗೇ ಇದ್ದಾರೆ ಸುಧಾರಾಣಿ ಅವರು. 2000ನೇ ಇಸವಿಯಲ್ಲಿ ನಟಿ ಸುಧಾರಾಣಿ ಅವರು 2ನೇ ಮದುವೆ ಆದರು. ಅವರಿಗೆ ಒಬ್ಬರು ಪುತ್ರಿ ಇದ್ದು, 2ನೇ ಮದುವೆ ನಂತರ ಮತ್ತೊಮ್ಮೆ ಸಿನಿಮಾ ರಂಗದಲ್ಲಿ ಮಿಂಚು ಹರಿಸಿದ ಸುಧಾರಾಣಿ ಅವರು ಇದೀಗ ಪ್ಯಾನ್ ಇಂಡಿಯಾ ಸ್ಟಾರ್ ಅಗಿದ್ದಾರೆ.
-
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ












Click it and Unblock the Notifications