Shani Shapa: ಶನಿಯ ಕೆಟ್ಟ ಕಣ್ಣು ನಿಮ್ಮ ಮೇಲಿದೆ ಎಂದು ಗುರುತಿಸುವುದು ಹೇಗೆ?
ಶನಿಯ ದೃಷ್ಟಿಯು ರಾಜನನ್ನು ದರಿದ್ರನಾಗಿ ಮತ್ತು ದರಿದ್ರನನ್ನು ರಾಜನನ್ನಾಗಿ ಮಾಡುತ್ತದೆ. ಅಂದರೆ ಶನಿಯು ಶುಭ ಫಲಿತಾಂಶಗಳನ್ನು ನೀಡಿದರೆ, ಒಬ್ಬ ವ್ಯಕ್ತಿಯು ರಾಜನಂತೆ ಜೀವನವನ್ನು ಮಾಡುತ್ತಾನೆ. ಆದರೆ ಶನಿಯ ಕೆಟ್ಟ ಸ್ಥಾನ ರಾಜನನ್ನು ಸಹ ಭಿಕ್ಷುಕನನ್ನಾಗಿ ಮಾಡುತ್ತದೆ. ಇದೇ ಕಾರಣಕ್ಕೆ ಜಾತಕದಲ್ಲಿ ಶನಿಯ ಸ್ಥಾನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಹಾಗಾದರೆ ಶನಿಯ ಶುಭ ಅಶುಭ ಪರಿಣಾಮಗಳನ್ನು ಗುರುತಿಸುವುದು ಹೇಗೆ ಎಂದು ತಿಳಿಯೋಣ.
ಜ್ಯೋತಿಷ್ಯ ಶಾಸ್ತ್ರದ ಮೂಲಕ ಶನಿ ನಿಮ್ಮ ಮೇಲೆ ಯಾವ ದೃಷ್ಟಿ ಹೊಂದಿದ್ದಾನೆ ಎಂದು ತಿಳಿಯಬಹುದು. ಶನಿಯು ಕರ್ಮಗಳಿಗೆ ಅನುಗುಣವಾಗಿ ಫಲಿತಾಂಶಗಳನ್ನು ನೀಡುವುದರಿಂದ, ಶನಿಯ ಶುಭ ಮತ್ತು ಅಶುಭ ಫಲಿತಾಂಶಗಳು ಸಹ ವ್ಯಕ್ತಿಯ ಕಾರ್ಯಗಳಿಂದ ನಿರ್ಧರಿಸಲ್ಪಡುತ್ತವೆ. ಹಾಗಾದರೆ ಶನಿಯು ಮಂಗಳಕರವಾಗಿರುವ ಚಿಹ್ನೆಗಳನ್ನು ಗುರುತಿಸುವುದು ಹೇಗೆ?

ಶನಿಯು ಮಂಗಳಕರವಾಗಿರುವ ಚಿಹ್ನೆಗಳು
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿ ನ್ಯಾಯಯುತನಾಗಿದ್ದರೆ ಅಂತಹ ವ್ಯಕ್ತಿಯೊಂದಿಗೆ ಶನಿ ದೇವ ಯಾವಾಗಲೂ ಇರುತ್ತಾನೆ. ಅಂದರೆ ನೀವು ಯಾರಿಗಾದರೂ ಅನ್ಯಾಯವಾದರೆ ಅದನ್ನು ಸಹಿಸುವುದಿಲ್ಲ ಅಥವಾ ಯಾರಿಗೂ ಅನ್ಯಾಯ ಮಾಡುವುದಿಲ್ಲ. ಆಗ ಶನಿಯು ಜಾತಕದಲ್ಲಿ ಮಂಗಳಕರವಾಗಿದೆ ಎಂದರ್ಥ. ಅಂತಹ ವ್ಯಕ್ತಿಯು ತಾನು ಆಯ್ಕೆ ಮಾಡಿದ ಯಾವುದೇ ಕ್ಷೇತ್ರದಲ್ಲಿ ಯಶಸ್ಸನ್ನು ಸಾಧಿಸುತ್ತಾನೆ. ಅಲ್ಲದೆ ಸಂಪತ್ತು ಮತ್ತು ಗೌರವವನ್ನು ಪಡೆಯುತ್ತಾನೆ. ಅಲ್ಲದೆ ಶನಿ ದೇವ ಕಷ್ಟಪಡುವ ವ್ಯಕ್ತಿಗಳೊಂದಿಗೆ ಸದಾ ನೆಲೆಸುತ್ತಾನೆ. ಕಷ್ಟಪಟ್ಟು ದುಡಿಯುವ ಜನರನ್ನು ಸಂತೋಷವಾಗಿಡುತ್ತಾನೆ.
ಶನಿ ದೃಷ್ಟಿ ಕೆಟ್ಟದಾಗಿರುವ ಲಕ್ಷಣಗಳು
ಶನಿಯ ದೃಷ್ಟಿ ಕೆಟ್ಟದಾಗಿದ್ದರೆ ವ್ಯಕ್ತಿಯ ಮನೆಯು ಅಶುದ್ಧವಾಗಿರುತ್ತದೆ. ಮನೆ ಅಥವಾ ಛಾವಣಿಯ ಭಾಗವೂ ಕುಸಿಯುವಂತೆ ಕಾಣಿಸುತ್ತದೆ ಅಥವಾ ದುರಸ್ಥಿಗೆ ಬರುತ್ತದೆ. ಮನೆಯಲ್ಲಿ ಸದಾ ಜಗಳ ಇರುತ್ತದೆ. ಕೈಯಲ್ಲಿ ಹಣ ಇರುವುದಿಲ್ಲ. ಅಲ್ಲದೆ ಶನಿ ಕೆಟ್ಟದ ದೃಷ್ಟಿ ಇರುವ ವ್ಯಕ್ತಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಎಷ್ಟೇ ಕಷ್ಟಪಟ್ಟರೂ ಯಶಸ್ಸು ಸಿಗುವುದಿಲ್ಲ. ಆರ್ಥಿಕ ಮುಗ್ಗಟ್ಟು ಎದುರಿಸಬೇಕಾಗುತ್ತದೆ.
ಶನಿಯ ದುಷ್ಪರಿಣಾಮಗಳನ್ನು ತಡೆಯುವ ಕ್ರಮಗಳು
ಶನಿಯು ಅಶುಭವಾಗಿದ್ದರೆ ಅದು ಬಹಳಷ್ಟು ತೊಂದರೆಗಳನ್ನು ಉಂಟುಮಾಡುತ್ತದೆ. ಆದ್ದರಿಂದ ಶನಿಯ ಅಶುಭ ಫಲಗಳಿಂದ ಪರಿಹಾರ ಪಡೆಯಲು ಕೆಲವು ಕ್ರಮಗಳನ್ನು ಕೈಗೊಳ್ಳಬೇಕು.

- ಶನಿಯ ಶಾಂತಿಗಾಗಿ ಮಹಾಮೃತ್ಯುಂಜಯ ಮಂತ್ರವನ್ನು ಪಠಿಸಿ. 'ಓಂ ಶಂ ಶನೈಶ್ಚರಾಯ ನಮಃ' ಅಥವಾ 'ಓಂ ಭೈರವಾಯ ನಮಃ' ಎಂಬ ಮಂತ್ರವನ್ನು ಪಠಿಸುವುದರಿಂದ ತುಂಬಾ ಪ್ರಯೋಜನವಾಗುತ್ತದೆ.
- ಶನಿವಾರದಂದು ಕಪ್ಪು ಎಳ್ಳು, ಉಂಡೆ, ಕಬ್ಬಿಣ, ಎಣ್ಣೆ, ಕಪ್ಪು ಬಟ್ಟೆ, ಕಪ್ಪು ಹಸು ಮತ್ತು ಪಾದರಕ್ಷೆಗಳನ್ನು ದಾನ ಮಾಡಿ.
- ಕಾಗೆಗಳಿಗೆ, ಕಪ್ಪು ನಾಯಿಗಳಿಗೆ ಪ್ರತಿದಿನ ಆಹಾರ ನೀಡಿ,
- ಶನಿಯ ಅಶುಭ ಪರಿಣಾಮಗಳಿಂದ ತಕ್ಷಣ ಪರಿಹಾರ ಪಡೆಯಲು ಕಪ್ಪು ಎಣ್ಣು ದಾನ ಮಾಡಿ. ಇಲ್ಲದಿದ್ದರೆ ಒಂದು ಪಾತ್ರೆಯಲ್ಲಿ ಸಾಸಿವೆ ಎಣ್ಣೆಯನ್ನು ತೆಗೆದುಕೊಂಡು ಅದರಲ್ಲಿ ನಿಮ್ಮ ಮುಖವನ್ನು ನೋಡಿ. ನಂತರ ಶನಿ ದೇವಸ್ಥಾನದಲ್ಲಿ ಬಟ್ಟಲಿನೊಂದಿಗೆ ಎಣ್ಣೆಯನ್ನು ಇಟ್ಟುಬಿಡಿ ಮತ್ತು ಶನಿದೇವನ ಪೂಜೆ ಮಾಡಿ.
- ನಿಮ್ಮ ಮಾಥುಗಳನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳಿ. ಅಂಧರು, ಅಂಗವಿಕಲರು, ಕಾರ್ಮಿಕರು ಮತ್ತು ನೈರ್ಮಲ್ಯ ಕಾರ್ಮಿಕರೊಂದಿಗೆ ಒಳ್ಳೆಯವರಾಗಿರಿ. ಬಡವರಿಗೆ ಸಹಾಯ ಮಾಡಿ.
ಈ ವಿಷಯಗಳು ಶನಿಯನ್ನು ಅಸಮಾಧಾನಗೊಳಿಸುತ್ತವೆ:-
ಶನಿಯ ಕೋಪದಿಂದ ದೂರವಿರಲು ಶನಿಯನ್ನು ಮೆಚ್ಚಿಸದ ಕೆಲಸಗಳನ್ನು ಎಂದಿಗೂ ಮಾಡಬೇಡಿ. ಉದಾಹರಣೆಗೆ, ಜೂಜಾಡುವ, ಸುಳ್ಳು ಹೇಳುವುದು, ಮದ್ಯಪಾನ ಮಾಡುವ, ವಂಚನೆಯಿಂದ ಯಾರೊಬ್ಬರಿಂದ ಹಣವನ್ನು ತೆಗೆದುಕೊಳ್ಳುವ, ಇತರ ಮಹಿಳೆಯರ ಮೇಲೆ ಕೆಟ್ಟ ಕಣ್ಣುಗಳನ್ನು ಇಡುವುದು, ಮೋಸ ಮಾಡುವುದು, ಹೆತ್ತವರನ್ನು ಗೌರವಿಸದಿರುವ ಜನರನ್ನು ಶನಿ ದೇವ ಇಷ್ಟಪಡುವುದಿಲ್ಲ. ಇದಲ್ಲದೆ ಶನಿಯು ಮೂಕ ಪ್ರಾಣಿಗಳನ್ನು ಹಿಂಸಿಸುವವರನ್ನು ಬಿಡುವುದಿಲ್ಲ, ಬದಲಿಗೆ ಅವನು ಕಠಿಣ ಶಿಕ್ಷೆಯನ್ನು ನೀಡುತ್ತಾನೆ. ಹೀಗಾಗಿ ಇಂತಹ ಕಾರ್ಯಗಳನ್ನು ಮಾಡಬೇಡಿ.
-
Horoscope March 15; ಈ ರಾಶಿಯವರಿಗಿದೆ ಧನ ಲಾಭ ಮತ್ತು ಯಶಸ್ಸಿನ ಸೂಚನೆ -
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Ajith Kumar: ನಟ ಅಜಿತ್ ಕುಮಾರ್ಗೆ ಮಹೀಂದ್ರಾದಿಂದ ರೇಸಿಂಗ್ ಕಾರ್ ಗಿಫ್ಟ್; ಇದರ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಿ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ -
Viral Video: ಮಗನ ಸಾಧನೆ ಕಂಡು ಭಾವುಕರಾದ ಪೋಷಕರು; ಕ್ಯೂಟ್ ವಿಡಿಯೋ ವೈರಲ್ -
ಸರ್ಕಾರಿ ಜಮೀನು ಒತ್ತುವರಿ ತಡೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಸ್ಥಳಕ್ಕೆ ಭೇಟಿ ನೀಡುತ್ತಿರಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ












Click it and Unblock the Notifications