Shani Shapa: ಶನಿಯ ಕೆಟ್ಟ ಕಣ್ಣು ನಿಮ್ಮ ಮೇಲಿದೆ ಎಂದು ಗುರುತಿಸುವುದು ಹೇಗೆ?
ಶನಿಯ ದೃಷ್ಟಿಯು ರಾಜನನ್ನು ದರಿದ್ರನಾಗಿ ಮತ್ತು ದರಿದ್ರನನ್ನು ರಾಜನನ್ನಾಗಿ ಮಾಡುತ್ತದೆ. ಅಂದರೆ ಶನಿಯು ಶುಭ ಫಲಿತಾಂಶಗಳನ್ನು ನೀಡಿದರೆ, ಒಬ್ಬ ವ್ಯಕ್ತಿಯು ರಾಜನಂತೆ ಜೀವನವನ್ನು ಮಾಡುತ್ತಾನೆ. ಆದರೆ ಶನಿಯ ಕೆಟ್ಟ ಸ್ಥಾನ ರಾಜನನ್ನು ಸಹ ಭಿಕ್ಷುಕನನ್ನಾಗಿ ಮಾಡುತ್ತದೆ. ಇದೇ ಕಾರಣಕ್ಕೆ ಜಾತಕದಲ್ಲಿ ಶನಿಯ ಸ್ಥಾನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಹಾಗಾದರೆ ಶನಿಯ ಶುಭ ಅಶುಭ ಪರಿಣಾಮಗಳನ್ನು ಗುರುತಿಸುವುದು ಹೇಗೆ ಎಂದು ತಿಳಿಯೋಣ.
ಜ್ಯೋತಿಷ್ಯ ಶಾಸ್ತ್ರದ ಮೂಲಕ ಶನಿ ನಿಮ್ಮ ಮೇಲೆ ಯಾವ ದೃಷ್ಟಿ ಹೊಂದಿದ್ದಾನೆ ಎಂದು ತಿಳಿಯಬಹುದು. ಶನಿಯು ಕರ್ಮಗಳಿಗೆ ಅನುಗುಣವಾಗಿ ಫಲಿತಾಂಶಗಳನ್ನು ನೀಡುವುದರಿಂದ, ಶನಿಯ ಶುಭ ಮತ್ತು ಅಶುಭ ಫಲಿತಾಂಶಗಳು ಸಹ ವ್ಯಕ್ತಿಯ ಕಾರ್ಯಗಳಿಂದ ನಿರ್ಧರಿಸಲ್ಪಡುತ್ತವೆ. ಹಾಗಾದರೆ ಶನಿಯು ಮಂಗಳಕರವಾಗಿರುವ ಚಿಹ್ನೆಗಳನ್ನು ಗುರುತಿಸುವುದು ಹೇಗೆ?

ಶನಿಯು ಮಂಗಳಕರವಾಗಿರುವ ಚಿಹ್ನೆಗಳು
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿ ನ್ಯಾಯಯುತನಾಗಿದ್ದರೆ ಅಂತಹ ವ್ಯಕ್ತಿಯೊಂದಿಗೆ ಶನಿ ದೇವ ಯಾವಾಗಲೂ ಇರುತ್ತಾನೆ. ಅಂದರೆ ನೀವು ಯಾರಿಗಾದರೂ ಅನ್ಯಾಯವಾದರೆ ಅದನ್ನು ಸಹಿಸುವುದಿಲ್ಲ ಅಥವಾ ಯಾರಿಗೂ ಅನ್ಯಾಯ ಮಾಡುವುದಿಲ್ಲ. ಆಗ ಶನಿಯು ಜಾತಕದಲ್ಲಿ ಮಂಗಳಕರವಾಗಿದೆ ಎಂದರ್ಥ. ಅಂತಹ ವ್ಯಕ್ತಿಯು ತಾನು ಆಯ್ಕೆ ಮಾಡಿದ ಯಾವುದೇ ಕ್ಷೇತ್ರದಲ್ಲಿ ಯಶಸ್ಸನ್ನು ಸಾಧಿಸುತ್ತಾನೆ. ಅಲ್ಲದೆ ಸಂಪತ್ತು ಮತ್ತು ಗೌರವವನ್ನು ಪಡೆಯುತ್ತಾನೆ. ಅಲ್ಲದೆ ಶನಿ ದೇವ ಕಷ್ಟಪಡುವ ವ್ಯಕ್ತಿಗಳೊಂದಿಗೆ ಸದಾ ನೆಲೆಸುತ್ತಾನೆ. ಕಷ್ಟಪಟ್ಟು ದುಡಿಯುವ ಜನರನ್ನು ಸಂತೋಷವಾಗಿಡುತ್ತಾನೆ.
ಶನಿ ದೃಷ್ಟಿ ಕೆಟ್ಟದಾಗಿರುವ ಲಕ್ಷಣಗಳು
ಶನಿಯ ದೃಷ್ಟಿ ಕೆಟ್ಟದಾಗಿದ್ದರೆ ವ್ಯಕ್ತಿಯ ಮನೆಯು ಅಶುದ್ಧವಾಗಿರುತ್ತದೆ. ಮನೆ ಅಥವಾ ಛಾವಣಿಯ ಭಾಗವೂ ಕುಸಿಯುವಂತೆ ಕಾಣಿಸುತ್ತದೆ ಅಥವಾ ದುರಸ್ಥಿಗೆ ಬರುತ್ತದೆ. ಮನೆಯಲ್ಲಿ ಸದಾ ಜಗಳ ಇರುತ್ತದೆ. ಕೈಯಲ್ಲಿ ಹಣ ಇರುವುದಿಲ್ಲ. ಅಲ್ಲದೆ ಶನಿ ಕೆಟ್ಟದ ದೃಷ್ಟಿ ಇರುವ ವ್ಯಕ್ತಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಎಷ್ಟೇ ಕಷ್ಟಪಟ್ಟರೂ ಯಶಸ್ಸು ಸಿಗುವುದಿಲ್ಲ. ಆರ್ಥಿಕ ಮುಗ್ಗಟ್ಟು ಎದುರಿಸಬೇಕಾಗುತ್ತದೆ.
ಶನಿಯ ದುಷ್ಪರಿಣಾಮಗಳನ್ನು ತಡೆಯುವ ಕ್ರಮಗಳು
ಶನಿಯು ಅಶುಭವಾಗಿದ್ದರೆ ಅದು ಬಹಳಷ್ಟು ತೊಂದರೆಗಳನ್ನು ಉಂಟುಮಾಡುತ್ತದೆ. ಆದ್ದರಿಂದ ಶನಿಯ ಅಶುಭ ಫಲಗಳಿಂದ ಪರಿಹಾರ ಪಡೆಯಲು ಕೆಲವು ಕ್ರಮಗಳನ್ನು ಕೈಗೊಳ್ಳಬೇಕು.

- ಶನಿಯ ಶಾಂತಿಗಾಗಿ ಮಹಾಮೃತ್ಯುಂಜಯ ಮಂತ್ರವನ್ನು ಪಠಿಸಿ. 'ಓಂ ಶಂ ಶನೈಶ್ಚರಾಯ ನಮಃ' ಅಥವಾ 'ಓಂ ಭೈರವಾಯ ನಮಃ' ಎಂಬ ಮಂತ್ರವನ್ನು ಪಠಿಸುವುದರಿಂದ ತುಂಬಾ ಪ್ರಯೋಜನವಾಗುತ್ತದೆ.
- ಶನಿವಾರದಂದು ಕಪ್ಪು ಎಳ್ಳು, ಉಂಡೆ, ಕಬ್ಬಿಣ, ಎಣ್ಣೆ, ಕಪ್ಪು ಬಟ್ಟೆ, ಕಪ್ಪು ಹಸು ಮತ್ತು ಪಾದರಕ್ಷೆಗಳನ್ನು ದಾನ ಮಾಡಿ.
- ಕಾಗೆಗಳಿಗೆ, ಕಪ್ಪು ನಾಯಿಗಳಿಗೆ ಪ್ರತಿದಿನ ಆಹಾರ ನೀಡಿ,
- ಶನಿಯ ಅಶುಭ ಪರಿಣಾಮಗಳಿಂದ ತಕ್ಷಣ ಪರಿಹಾರ ಪಡೆಯಲು ಕಪ್ಪು ಎಣ್ಣು ದಾನ ಮಾಡಿ. ಇಲ್ಲದಿದ್ದರೆ ಒಂದು ಪಾತ್ರೆಯಲ್ಲಿ ಸಾಸಿವೆ ಎಣ್ಣೆಯನ್ನು ತೆಗೆದುಕೊಂಡು ಅದರಲ್ಲಿ ನಿಮ್ಮ ಮುಖವನ್ನು ನೋಡಿ. ನಂತರ ಶನಿ ದೇವಸ್ಥಾನದಲ್ಲಿ ಬಟ್ಟಲಿನೊಂದಿಗೆ ಎಣ್ಣೆಯನ್ನು ಇಟ್ಟುಬಿಡಿ ಮತ್ತು ಶನಿದೇವನ ಪೂಜೆ ಮಾಡಿ.
- ನಿಮ್ಮ ಮಾಥುಗಳನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳಿ. ಅಂಧರು, ಅಂಗವಿಕಲರು, ಕಾರ್ಮಿಕರು ಮತ್ತು ನೈರ್ಮಲ್ಯ ಕಾರ್ಮಿಕರೊಂದಿಗೆ ಒಳ್ಳೆಯವರಾಗಿರಿ. ಬಡವರಿಗೆ ಸಹಾಯ ಮಾಡಿ.
ಈ ವಿಷಯಗಳು ಶನಿಯನ್ನು ಅಸಮಾಧಾನಗೊಳಿಸುತ್ತವೆ:-
ಶನಿಯ ಕೋಪದಿಂದ ದೂರವಿರಲು ಶನಿಯನ್ನು ಮೆಚ್ಚಿಸದ ಕೆಲಸಗಳನ್ನು ಎಂದಿಗೂ ಮಾಡಬೇಡಿ. ಉದಾಹರಣೆಗೆ, ಜೂಜಾಡುವ, ಸುಳ್ಳು ಹೇಳುವುದು, ಮದ್ಯಪಾನ ಮಾಡುವ, ವಂಚನೆಯಿಂದ ಯಾರೊಬ್ಬರಿಂದ ಹಣವನ್ನು ತೆಗೆದುಕೊಳ್ಳುವ, ಇತರ ಮಹಿಳೆಯರ ಮೇಲೆ ಕೆಟ್ಟ ಕಣ್ಣುಗಳನ್ನು ಇಡುವುದು, ಮೋಸ ಮಾಡುವುದು, ಹೆತ್ತವರನ್ನು ಗೌರವಿಸದಿರುವ ಜನರನ್ನು ಶನಿ ದೇವ ಇಷ್ಟಪಡುವುದಿಲ್ಲ. ಇದಲ್ಲದೆ ಶನಿಯು ಮೂಕ ಪ್ರಾಣಿಗಳನ್ನು ಹಿಂಸಿಸುವವರನ್ನು ಬಿಡುವುದಿಲ್ಲ, ಬದಲಿಗೆ ಅವನು ಕಠಿಣ ಶಿಕ್ಷೆಯನ್ನು ನೀಡುತ್ತಾನೆ. ಹೀಗಾಗಿ ಇಂತಹ ಕಾರ್ಯಗಳನ್ನು ಮಾಡಬೇಡಿ.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ












Click it and Unblock the Notifications