ಬದುಕಲ್ಲಿ ಸಿಹಿ ಇದ್ದಷ್ಟೇ ಕಹಿಯೂ ಇರುತ್ತದೆ

ಕನ್ಯಾ ರಾಶಿ ಸ್ತ್ರೀ - ಕನ್ಯಾ ರಾಶಿ ಪುರುಷ : ಇವರ ಬಾಂಧವ್ಯ ಹೆಚ್ಚು ಗಟ್ಟಿಯಾಗಿರುವುದು ಪ್ರೇಮದ ಅಡಿಪಾಯಕ್ಕಿಂತ ನಂಬಿಕೆಯ ತಳಹದಿಯ ಮೇಲೆ. ಇಬ್ಬರೂ ಒಂದೇ ರಾಶಿಯವರು ಆದ ಕಾರಣ ಯೋಚನಾ ಶೈಲಿ ಒಂದೇ ರೀತಿಯಲ್ಲಿ ಇರುತ್ತದೆ. ಅದೂ ಸಹ ಸಾಕಷ್ಟು ಸರ್ತಿ ಇಬ್ಬರಲ್ಲಿ ಜಗಳ ಗಲಾಟೆ ತಂದಿಡುವುದಕ್ಕೆ ಕಾರಣ ಆಗುತ್ತದೆ. ಸಾಮಾನ್ಯವಾಗಿ ಇಬ್ಬರ ನಡುವೆ ಕಾಡುವುದು ಈಗೋ. ಅದನ್ನು ತಹಬಂದಿಗೆ ತಂದುಕೊಂಡರೆ ಸಾಕಷ್ಟು ಉತ್ತಮ ಫಲಿತಾಂಶವನ್ನು ಕಾಣಬಹುದಾಗಿದೆ. ಗಂಡ ತನಗೆ ತನ್ನ ಪತ್ನಿ ಹೆಚ್ಚಿನ ಗೌರವ ಮರ್ಯಾದೆ ನೀಡಬೇಕು ಎನ್ನುವ ಆಶಯ ಹೊಂದಿರುತ್ತಾನೆ. ಆದರೆ ಕೊಟ್ಟು ತೆಗೆದುಗೊಳ್ಳುವ ಮನೋಭಾವ ಇದ್ದಾಗ ಮಾತ್ರ ಎಲ್ಲವೂ ಸಾಧ್ಯ. ಏನೇ ಗಲಾಟೆ ಗದ್ದಲ ಇರಲಿ ಕ್ಷಮಿಸುವ ಗುಣ ಇಬ್ಬರಲ್ಲೂ ಇರುತ್ತದೆ. ಅದೇ ಅವರ ಬಾಳ ಪಯಣವು ಸುಗಮವಾಗಿ ನಡೆಯುವಂತೆ ಮಾಡುವ ಸಾಧನ.
ಕನ್ಯಾ ರಾಶಿ ಸ್ತ್ರೀ - ತುಲಾ ರಾಶಿ ಪುರುಷ : ಈ ಜೋಡಿ ಪ್ರೀತಿಸುವುದರಲ್ಲಿ ಅಳತೆ ಮೀರುತ್ತಾರೆ. ಇಷ್ಟು ಸಾಕು, ಅಷ್ಟು ಮಾತ್ರ ಬೇಕು ಎನ್ನುವ ಅಂಶಕ್ಕೆ ಪ್ರೀತಿಯಲ್ಲಿ ಆದ್ಯತೆ ಇರುವುದಿಲ್ಲ. ಇಬ್ಬರು ಸ್ಪರ್ಧೆಯ ಮೇಲೆ ಪ್ರೀತಿಸುತ್ತಾರೆ. ತಮ್ಮ ಬಾಳಸಂಗಾತಿಗಾಗಿ ಏನು ಬೇಕಾದರೂ ಕಷ್ಟ ಪಡಲು ಸಿದ್ಧರಾಗಿರುತ್ತಾರೆ. ಇಷ್ಟೊಂದು ಪ್ರೀತಿಸುವವರು ಆಗಾಗ ಬಿಟ್ಟು ಬೇರೆ ಆಗ್ತಾರೆ ಎನ್ನುವುದು ಸಹ ಇವರ ಬದುಕಿನ ಆಶ್ಚರ್ಯಕರ ಸಂಗತಿಗಳಲ್ಲೊಂದು. ಆಗ ಉಂಟಾಗುವುದು ಖೇದ. ಕನ್ಯಾ ರಾಶಿ ಸ್ತ್ರೀಯರು ಸ್ವಾತಂತ್ರ ಪ್ರಿಯರು, ಪತಿಯನ್ನು ಎಷ್ಟೇ ಪ್ರೀತಿಸಿದರೂ, ಅಷ್ಟೆ ಬೇಗ ಮುನಿದು ಬಿಡ್ತಾರೆ. ತಮಾಷೆ ಅಂದ್ರೆ ಆಕೆಗೆ ತಾನ್ಯಾಕೆ ಗಂಡನ ಮೇಲೆ ಜಗಳ ಆಡಿದೆ, ಯಾವ ಕಾರಣಕ್ಕೆ ಈ ಪರಿ ಕೋಪಿಸಿಕೊಂಡೆ ಎನ್ನುವ ಸಂಗತಿ ತಿಳಿದೇ ಇರುವುದಿಲ್ಲ. ದಾಂಪತ್ಯ ಬದುಕಲ್ಲಿ ಸಿಹಿ ಇದ್ದಷ್ಟೇ ಕಹಿಯೂ ಇರುತ್ತದೆ. ಅದನ್ನು ಅರಿತು ನಡೆಯುವುದು ಎಲ್ಲಾ ರೀತಿಯಿಂದಲೂ ಉತ್ತಮ. ಯಾವುದೋ ಕ್ಷುಲ್ಲಕ ಕಾರಣಕ್ಕೆ ಜಗಳ ಆಡಿ ಬೇರೆ ಆಗುವುದಕ್ಕಿಂತ ಯೋಚಿಸಿ, ಸಹನೆಯಿಂದ ಹೊಂದಿ ಕೊಂಡು ಹೋಗುವುದು ಎಲ್ಲಾ ರೀತಿಯಿಂದಲೂ ಉತ್ತಮ. (ಇತರ ರಾಶಿ ಭವಿಷ್ಯಗಳಿಗೆ ಇಲ್ಲಿ ಕ್ಲಿಕ್ಕಿಸಿ.)
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications