ಬದುಕಲ್ಲಿ ಸಿಹಿ ಇದ್ದಷ್ಟೇ ಕಹಿಯೂ ಇರುತ್ತದೆ

ಕನ್ಯಾ ರಾಶಿ ಸ್ತ್ರೀ - ಕನ್ಯಾ ರಾಶಿ ಪುರುಷ : ಇವರ ಬಾಂಧವ್ಯ ಹೆಚ್ಚು ಗಟ್ಟಿಯಾಗಿರುವುದು ಪ್ರೇಮದ ಅಡಿಪಾಯಕ್ಕಿಂತ ನಂಬಿಕೆಯ ತಳಹದಿಯ ಮೇಲೆ. ಇಬ್ಬರೂ ಒಂದೇ ರಾಶಿಯವರು ಆದ ಕಾರಣ ಯೋಚನಾ ಶೈಲಿ ಒಂದೇ ರೀತಿಯಲ್ಲಿ ಇರುತ್ತದೆ. ಅದೂ ಸಹ ಸಾಕಷ್ಟು ಸರ್ತಿ ಇಬ್ಬರಲ್ಲಿ ಜಗಳ ಗಲಾಟೆ ತಂದಿಡುವುದಕ್ಕೆ ಕಾರಣ ಆಗುತ್ತದೆ. ಸಾಮಾನ್ಯವಾಗಿ ಇಬ್ಬರ ನಡುವೆ ಕಾಡುವುದು ಈಗೋ. ಅದನ್ನು ತಹಬಂದಿಗೆ ತಂದುಕೊಂಡರೆ ಸಾಕಷ್ಟು ಉತ್ತಮ ಫಲಿತಾಂಶವನ್ನು ಕಾಣಬಹುದಾಗಿದೆ. ಗಂಡ ತನಗೆ ತನ್ನ ಪತ್ನಿ ಹೆಚ್ಚಿನ ಗೌರವ ಮರ್ಯಾದೆ ನೀಡಬೇಕು ಎನ್ನುವ ಆಶಯ ಹೊಂದಿರುತ್ತಾನೆ. ಆದರೆ ಕೊಟ್ಟು ತೆಗೆದುಗೊಳ್ಳುವ ಮನೋಭಾವ ಇದ್ದಾಗ ಮಾತ್ರ ಎಲ್ಲವೂ ಸಾಧ್ಯ. ಏನೇ ಗಲಾಟೆ ಗದ್ದಲ ಇರಲಿ ಕ್ಷಮಿಸುವ ಗುಣ ಇಬ್ಬರಲ್ಲೂ ಇರುತ್ತದೆ. ಅದೇ ಅವರ ಬಾಳ ಪಯಣವು ಸುಗಮವಾಗಿ ನಡೆಯುವಂತೆ ಮಾಡುವ ಸಾಧನ.
ಕನ್ಯಾ ರಾಶಿ ಸ್ತ್ರೀ - ತುಲಾ ರಾಶಿ ಪುರುಷ : ಈ ಜೋಡಿ ಪ್ರೀತಿಸುವುದರಲ್ಲಿ ಅಳತೆ ಮೀರುತ್ತಾರೆ. ಇಷ್ಟು ಸಾಕು, ಅಷ್ಟು ಮಾತ್ರ ಬೇಕು ಎನ್ನುವ ಅಂಶಕ್ಕೆ ಪ್ರೀತಿಯಲ್ಲಿ ಆದ್ಯತೆ ಇರುವುದಿಲ್ಲ. ಇಬ್ಬರು ಸ್ಪರ್ಧೆಯ ಮೇಲೆ ಪ್ರೀತಿಸುತ್ತಾರೆ. ತಮ್ಮ ಬಾಳಸಂಗಾತಿಗಾಗಿ ಏನು ಬೇಕಾದರೂ ಕಷ್ಟ ಪಡಲು ಸಿದ್ಧರಾಗಿರುತ್ತಾರೆ. ಇಷ್ಟೊಂದು ಪ್ರೀತಿಸುವವರು ಆಗಾಗ ಬಿಟ್ಟು ಬೇರೆ ಆಗ್ತಾರೆ ಎನ್ನುವುದು ಸಹ ಇವರ ಬದುಕಿನ ಆಶ್ಚರ್ಯಕರ ಸಂಗತಿಗಳಲ್ಲೊಂದು. ಆಗ ಉಂಟಾಗುವುದು ಖೇದ. ಕನ್ಯಾ ರಾಶಿ ಸ್ತ್ರೀಯರು ಸ್ವಾತಂತ್ರ ಪ್ರಿಯರು, ಪತಿಯನ್ನು ಎಷ್ಟೇ ಪ್ರೀತಿಸಿದರೂ, ಅಷ್ಟೆ ಬೇಗ ಮುನಿದು ಬಿಡ್ತಾರೆ. ತಮಾಷೆ ಅಂದ್ರೆ ಆಕೆಗೆ ತಾನ್ಯಾಕೆ ಗಂಡನ ಮೇಲೆ ಜಗಳ ಆಡಿದೆ, ಯಾವ ಕಾರಣಕ್ಕೆ ಈ ಪರಿ ಕೋಪಿಸಿಕೊಂಡೆ ಎನ್ನುವ ಸಂಗತಿ ತಿಳಿದೇ ಇರುವುದಿಲ್ಲ. ದಾಂಪತ್ಯ ಬದುಕಲ್ಲಿ ಸಿಹಿ ಇದ್ದಷ್ಟೇ ಕಹಿಯೂ ಇರುತ್ತದೆ. ಅದನ್ನು ಅರಿತು ನಡೆಯುವುದು ಎಲ್ಲಾ ರೀತಿಯಿಂದಲೂ ಉತ್ತಮ. ಯಾವುದೋ ಕ್ಷುಲ್ಲಕ ಕಾರಣಕ್ಕೆ ಜಗಳ ಆಡಿ ಬೇರೆ ಆಗುವುದಕ್ಕಿಂತ ಯೋಚಿಸಿ, ಸಹನೆಯಿಂದ ಹೊಂದಿ ಕೊಂಡು ಹೋಗುವುದು ಎಲ್ಲಾ ರೀತಿಯಿಂದಲೂ ಉತ್ತಮ. (ಇತರ ರಾಶಿ ಭವಿಷ್ಯಗಳಿಗೆ ಇಲ್ಲಿ ಕ್ಲಿಕ್ಕಿಸಿ.)
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications