ತರಕಾರಿ ಬೆಲೆ ಏರಿಕೆಗೆ ತರಾವರಿ ಕಾರಣಗಳು

ಅಯೋಧ್ಯಾ ಬಾಬ್ರಿ ಮಸೀದಿ ವಿವಾದದ ಪರಿಣಾಮ ಜನ ಸಾಮಾನ್ಯರ ಮೇಲಂತೂ ನೇರವಾಗಿ ಆಗುತ್ತದೆ ಅದನ್ನು ತಪ್ಪಿಸಲು ಸಾಧ್ಯವಿಲ್ಲ. ತೀರ್ಪು ವಿಳಂಬವಾಗಲಿ, ಮುಂದೂಡಲಿ ಜನ ಸಾಮಾನ್ಯರ ರಥ ಮಾತ್ರ ಸಾಗಲೇಬೇಕು. ಕಳೆದ ವಾರ ಆಹಾರದುಬ್ಬರ ಸುಮಾರು ಶೇ.15.16ಕ್ಕೆ ಏರಿಕೆ ಕಂಡ ಪರಿಣಾಮ ಆಹಾರ ಧಾನ್ಯ, ಹಾಲು, ಹಣ್ಣು, ತರಕಾರಿಗಳ ಬೆಲೆ ಪೈಪೋಟಿಯ ಮೇಲೆ ಏರಿಕೆ ಕಂಡವು.
ದೆಹಲಿ, ಹರ್ಯಾಣ, ಪಂಜಾಬ್, ಹಿಮಾಚಲ ಪ್ರದೇಶ, ಅಸ್ಸಾಂ, ರಾಜಸ್ತಾನ ಹಾಗೂ ಉತ್ತರ ಪ್ರದೇಶ ಸೇರಿದಂತೆ ಹಲವೆಡೆ ಸುರಿಯುತ್ತಿರುವ ಮಳೆಯ ಕಾರಣದಿಂದ ಆಹಾರ ಸರಂಜಾಮುಗಳನ್ನು ಹೊತ್ತು ತರುವ ಟ್ರಕ್ ಗಳು ನಿಂತಲ್ಲೇ ನಿಂತಿದ್ದವು. ಪರಿಣಾಮ ಬೆಂಗಳೂರು ಸೇರಿದಂತೆ ದಕ್ಷಿಣ ಭಾಗದ ತರಕಾರಿ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ, ಮತ್ತದೇ ಗೊಣಗಾಟ, ಮಾರಾಟಗಾರ ಪೇಚಾಟ.
ಧಾನ್ಯಗಳು ಶೇ.6.75, ಬೆಳೆ ಕಾಳುಗಳು ಶೇ. 4.01, ಗೋಧಿ ಶೇ 9.21, ಅಕ್ಕಿ ಶೇ 5.52ರಷ್ಟು ಏರಿಕೆ ಕಂಡಿವೆ. ಇದರ ಜೊತೆಗೆ ಕಳೆದ ವರ್ಷಕ್ಕೆ ಇದೇ ಅವಧಿಗೆ ಹೋಲಿಸಿದರೆ ಹಾಲಿನ ದರ ಶೇ. 23.41 ಏರಿದ್ದು, ಹಣ್ಣುಗಳು ಶೇ. 10.33ರಷ್ಟು ಏರಿಕೆ ಕಂಡಿವೆ. ಆದರೆ, ಅಲೂಗೆಡ್ಡೆ ಬೆಲೆ ಶೇ.48.56 ಮತ್ತು ಈರುಳ್ಳಿ ಶೇ. 1.97ರಷ್ಟು ಇಳಿಕೆಯಾಗಿರುವುದು ಸಮಾಧಾನದ ಸಂಗತಿ.
ಬೆಂಗಳೂರಿನಲ್ಲಿ ಕೆಜಿ ಈರುಳ್ಳಿ ಬೆಲೆ 15 ರು. ಹಾಗೂ ಆಲೂಗೆಡ್ಡೆ ಬೆಲೆ 20 ರು. ತಲುಪಿದೆ. ನಿಂಬೆಹಣ್ಣು ಒಂದಕ್ಕೆ ಬೆಲೆ 5 ರು. ದಾಟಿದ್ದು ಹುಳಿಯಿಲ್ಲದೆ ಅಡುಗೆ ಮಾಡುವಂತಾಗಿದೆ. ಟೊಮಾಟೋ 23ರಿಂದ 25ರ ಆಸುಪಾಸಿನಲ್ಲಿದೆ. ಕುಂಬಳಕಾಯಿ ಕೆಜಿಗೆ 6 ರು. ತಲುಪಿರುವುದರಿಂದ ವಾರದ ಎಲ್ಲಾ ದಿನಗಳಲ್ಲಿ ಕುಂಬಳಕಾಯಿ ಹುಳಿಗೆ ಜನ ಮೊರೆಹೋಗುವಂತಾಗಿದೆ. ಇಲ್ಲದಿದ್ದರೆ ದಂರೋಟೇ ಗತಿ!
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications