ಐಟಿ ದಾಳಿ : ಟೀ ಮಾರೋನ ಬಳಿ ಸಿಕ್ಕಿದ್ದು ಬರೊಬ್ಬರಿ 400 ಕೋಟಿ!
ಆಶ್ಚರ್ಯದ ವಿಷಯವೇನೆಂದರೆ ಅವರ ಬಳಿಯಿರುವ ನಗದು, ಚಿನ್ನ, ಆಸ್ತಿ ದಾಖಲೆ ಪತ್ರ ಎಲ್ಲವೂ ಸೇರಿ ತೆರಿಗೆ ಅಧಿಕಾರಿಗಳಿಗೆ ದಕ್ಕಿರುವುದು ಬರೋಬ್ಬರಿ 400ಕೋಟಿ.ಯೋಚಿಸಿದರೆ ಟೀ, ಬಜ್ಜಿ ಮಾರಾಟಗಾರ ನಂತರ ಬಂಡವಾಳಶಾಹಿಯಾಗಿ ಇಷ್ಟೆಲ್ಲಾ ಹೇಗೆ ಮಾಡಿದರು?
ನವದೆಹಲಿ, ಡಿಸೆಂಬರ್ 18: ಅಪನಗದೀಕರಣ ಕಾರಣದಿಂದಾಗಿ ದೇಶದಲ್ಲಿ ದೊಡ್ಡ ದೊಡ್ಡ ಕಪ್ಪು ತಿಮಿಂಗಿಲಗಳೇ ಬೀಳುತ್ತಿದ್ದು ಈ ಸಾಲಿನಲ್ಲಿ ಸೂರತ್ ಮೂಲದ ಟೀ,ಬಜ್ಜಿ ವ್ಯಾಪಾರಿ, ಬಂಡವಾಳಗಾರ ಕಿಶೋರ್ ಬಜಿಯಾವಾಲ ಐಟಿ ಅದಿಕಾರಿಗಳ ಗಾಳಕ್ಕೆ ಸಿಕ್ಕಿ ಬಿದ್ದಿದ್ದಾರೆ.
ಆಶ್ಚರ್ಯದ ವಿಷಯವೇನೆಂದರೆ ಅವರ ಬಳಿಯಿರುವ ನಗದು, ಚಿನ್ನ, ಆಸ್ತಿ ದಾಖಲೆ ಪತ್ರ ಎಲ್ಲವೂ ಸೇರಿ ತೆರಿಗೆ ಅಧಿಕಾರಿಗಳಿಗೆ ದಕ್ಕಿರುವುದು ಬರೋಬ್ಬರಿ 400 ಕೋಟಿ.
ಬಜಿಯಾವಾಲ ಸರಕಾರಕ್ಕೆ ತೆರೆಗೆಯನ್ನು ಪಾವತಿ ಮಾಡಿದ್ದರೂ ಅವರ ಬಳಿ ಇರುವ ಆಸ್ತಿಗೆ ಹೋಲಿಸಿದರೆ ಈಗ ಕಟ್ಟಿರುವ ತೆರಿಗೆಯ ಐದರಷ್ಟು ತೆರಿಗೆ ಕಟ್ಟಬೇಕಾಗುತ್ತದೆ. ಇದನ್ನು ಯೋಚಿಸಿದರೆ ಟೀ, ಬಜ್ಜಿ ಮಾರಾಟಗಾರ ನಂತರ ಬಂಡವಾಳಶಾಹಿಯಾಗಿ ಇಷ್ಟೆಲ್ಲಾ ಹೇಗೆ ಮಾಡಿದರು ಅನ್ನಿಸುತ್ತದೆ.[ಐಟಿ ದಾಳಿ: 6.7 ಕೋಟಿ ಹಣ, ಬಂದಿದ್ದೆಲ್ಲಿ? ತಂದವರಾರು?]

ಕಿಶೋರ್ ಬಜಿಯಾವಾಲಾ ಬಂಡವಾಳ ಹೂಡಿಕೆದಾರನಾಗಿ, ನಗರದ ಹಲವಾರು ಭಾಗಗಳಲ್ಲಿ ಕೋಟಿ, ಕೋಟಿ ಮೌಲ್ಯದ ಅಗಾಧವಾದ ಆಸ್ತಿ ಮಾಡಿದ್ದಾರೆ. ಹೆಚ್ಚಿನ ಹಣವನ್ನು ರಿಯಲ್ ಎಸ್ಟೇಟಿನಲ್ಲಿ ಹೂಡಿರುವುದು ಕಂಡು ಬಂದಿದೆ. ಈ ಸಂಬಂಧ ಐಟಿ ಅಧಿಕಾರಿಗಳು ಬೇರೆ ರಿಯಲ್ ಎಸ್ಟೇಟಿನ ಮಾಲೀಕರಿಂದ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ.
ಇದೇ ಮಾದರಿಯಲ್ಲಿ ಡಿಸೆಂಬರ್ ಹತ್ತರಂದು ಹುಬ್ಬಳ್ಳಿಯ ಹವಾಲ ಕಿಂಗ್ ಪಿನ್ ಕೆ.ಸಿ.ವೀರೇಂದ್ರ ಸಿಕ್ಕಿ ಬಿದ್ದಾಗಲೂ ಬಚ್ಚಲಿನ ಗೋಪ್ಯ ಕೊಠಡಿಯಲ್ಲಿ 5.7 ಕೋಟಿ ಹೊಸನಗದು, 32ಕೆಜಿ ಚಿನ್ನ, ಎಲ್ಲವೂ ಸೇರಿ ಒಟ್ಟು 152ಕೋಟಿ ಅಕ್ರಮ ಸಂಪಾದನೆಯನ್ನು ಅಧಿಕಾರಿಗಳು ಹೊರಗೆಳೆದಿದ್ದರು.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications