ರಮೇಶ್ ನಟನೆಯ 'ಪುಷ್ಪಕ ವಿಮಾನ' ವಿರುದ್ಧ ಕೇಸ್ ದಾಖಲು
ರಮೇಶ್ ಅರವಿಂದ್ ಅವರ ನೂರನೇ ಚಿತ್ರ 'ಪುಷ್ಪಕ ವಿಮಾನ' ಮತ್ತೆ ಸುದ್ದಿಯಲ್ಲಿದೆ. ರಿಮೇಕ್ ಹಕ್ಕು ಉಲ್ಲಂಘಿಸಿದ ಆರೋಪದ ಮೇಲೆ ಚಿತ್ರದ ನಿರ್ಮಾಪಕದ ವಿರುದ್ಧ ಕೋರ್ಟಿನಲ್ಲಿ ಕೇಸ್ ದಾಖಲಾಗಿದೆ.
ಮುಂಬೈ, ಮಾರ್ಚ್ 22: 'ಅಭಿನಯ ಚತುರ' ರಮೇಶ್ ಅರವಿಂದ್ ಅವರ ನೂರನೇ ಚಿತ್ರ 'ಪುಷ್ಪಕ ವಿಮಾನ' ಮತ್ತೆ ಸುದ್ದಿಯಲ್ಲಿದೆ. ರಿಮೇಕ್ ಹಕ್ಕು ಉಲ್ಲಂಘಿಸಿ, ಕಥೆ ಕದ್ದಿರುವ ಆರೋಪದ ಮೇಲೆ ಚಿತ್ರದ ನಿರ್ಮಾಪಕದ ವಿರುದ್ಧ ಕೋರ್ಟಿನಲ್ಲಿ ಕೇಸ್ ದಾಖಲಾಗಿದೆ.
ನಿರ್ದೇಶಕ ಪವನ್ ಒಡೆಯರ್ ಹಾಗೂ ವಿಖ್ಯಾತ್ ಚಿತ್ರ ಪ್ರೊಡೆಕ್ಷನ್ ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರದ ವಿರುದ್ಧ ಕ್ರೋಸ್ ಪಿಕ್ಚರ್ಸ್ ಇಂಡಿಯಾ ದಾವೆ ಹೂಡಿದೆ.[ವಿಮರ್ಶೆ: ಅದ್ಭುತ ಭಾವನಾತ್ಮಕ 'ಯಾನ', ಅಪ್ಪ-ಮಗಳ ಈ 'ಪುಷ್ಟಕ ವಿಮಾನ']
ಕನ್ನಡದಲ್ಲಿ ತೆರೆ ಕಂಡಿರುವ ಪುಷ್ಪಕ ವಿಮಾನ 2017 ಚಿತ್ರವು ಕೊರಿಯನ್ ಚಿತ್ರ 'ಮಿರಾಕಲ್ ಇನ್ ಸೆಲ್ ನಂ.7' ದ ರಿಮೇಕ್ ಆಗಿದೆ. ಈ ಮೂಲದ ಚಿತ್ರದ ರಿಮೇಕ್ ಹಕ್ಕುಗಳು ಕ್ರೋಸ್(Kross) ಪಿಕ್ಚರ್ಸ್ ಇಂಡಿಯಾ ಹಾಗೂ ಕ್ರೋಸ್ ಟೆಲಿವಿಷನ್ ಇಂಡಿಯಾ ಸಂಸ್ಥೆ ಬಳಿ ಇವೆ. ಆದರೆ, ಕೊರಿಯನ್ ಚಿತ್ರದ ಆಧಾರ ಮೇಲೆ(ಚಿತ್ರದ ನೋಡಿದವರ ಅನಿಸಿಕೆಯಂತೆ ಸೀನ್ ಟು ಸೀನ್ ಭಟ್ಟಿ ಇಳಿಸಿರುವುದು) ಪುಷ್ಪಕ ವಿಮಾನವನ್ನು ಕನ್ನಡದಲ್ಲಿ ನಿರ್ಮಿಸಲಾಗಿದೆ.

ಆದರೆ, ಚಿತ್ರ ನಿರ್ಮಿಸಲುಪವನ್ ಒಡೆಯರ್ ಹಾಗೂ ವಿಖ್ಯಾತ್ ಚಿತ್ರ ಪ್ರೊಡೆಕ್ಷನ್, ಸುಕ್ರುತ್ ದೇವೇಂದ್ರ, ದೀಪಕ್ ಕೃಷ್ಣ, ದೀಪಕ್ ಕಿಶೋರ್, ದೇವಂತ್ ಅವರು ಯಾವುದೇ ಅನುಮತಿ ಪಡೆದಿಲ್ಲ.
ಈ ಮೂಲಕ ರಿಮೇಕ್ ಹಕ್ಕು ಉಲ್ಲಂಘಿಸಿ ಚಿತ್ರ ನಿರ್ಮಿಸಿದ್ದಲ್ಲದೆ ಚಿತ್ರ ಪ್ರದರ್ಶಿಸಿದ್ದಾರೆ. ಟಿವಿ ರೈಟ್ಸ್ ಕೂಡಾ ಮಾರಾಟ ಮಾಡಿದ್ದು, ಇತ್ತೀಚೆಗೆ ಟಿವಿ ವಾಹಿನಿಯಲ್ಲಿ ಪ್ರಸಾರವಾಗಿದೆ.[ಕಮಲ್ -ರಮೇಶ್ ಜೋಡಿ ಉತ್ತಮ ವಿಲನ್ ನಿಷೇಧಕ್ಕೆ ಕರೆ]
ಈ ಕೂಡಲೇ ಚಿತ್ರದ ಪ್ರದರ್ಶನವನ್ನು ನಿಲ್ಲಿಸಬೇಕು ಹಾಗೂ ನ್ಯಾಯ ದೊರಕಿಸಿಕೊಡಬೇಕು ಎಂದು ಕ್ರೊಸ್ ಇಂಡಿಯಾ ಸಂಸ್ಥೆ ಈಗ ಬಾಂಬೆ ಹೈಕೋರ್ಟ್ ಮೊರೆ ಹೊಕ್ಕಿದೆ.
2004 ರಲ್ಲಿ ಸ್ಥಾಪನೆಯಾದ ಕ್ರೊಸ್ ಪಿಕ್ಚರ್ಸ್ ಒಂದು ಗಡಿಯಾಚೆಗಿನ ಸಿನಿಮಾ ಹಾಗೂ ಟೆಲಿವಿಷನ್ ಪ್ರೊಡೆಕ್ಷನ್ ಸಂಸ್ಥೆಯಾಗಿದೆ. ಸಿಯೋಲ್, ಲಾಸ್ ಏಂಜಲೀಸ್ ಹಾಗೂ ಮುಂಬೈನಲ್ಲಿ ಕಚೇರಿ ಹೊಂದಿದೆ. 2015ರಿಂದ ಭಾರತದಲ್ಲಿ ಈ ಸಂಸ್ಥೆ ಸಕ್ರಿಯವಾಗಿದ್ದು, ಸದ್ಯ ಸುಜೊಯ್ ಘೋಶ್ ನಿರ್ದೇಶನ 'ಸಸ್ಪೆಕ್ಟ್ X' ಚಿತ್ರದ ನಿರ್ಮಾಣದಲ್ಲಿ ತೊಡಗಿದೆ.
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ












Click it and Unblock the Notifications