ಸಿಎಂ ಕಾರಿನ ಮೇಲೆ ಕುಳಿತ ಕಾಗೆಗೆ ಮಾಧ್ಯಮಗಳ ರೆಕ್ಕೆ ಪುಕ್ಕ!
ಬೆಂಗಳೂರು, ಜೂನ್ 2: ಗುರುವಾರ ಸಿಎಂ ಸಿದ್ದರಾಮಯ್ಯಗಿಂತ ಜಾಸ್ತಿ ಮಾಡಿದ್ದು ಒಂದು ಕಾಗೆ ಮರಿ. ಸಿದ್ದರಾಮಯ್ಯ ಅವರ ಕಾರಿನ ಮೇಲೆ ಕುಳಿತ ಕಾಗೆ ಒಂದು ಐದು ನಿಮಿಷ ಅಲ್ಲೇ ವಿಶ್ರಾಂತಿ ತೆಗೆದುಕೊಂಡಿತು. ಸಿಬ್ಬಂದಿ ಓಡಿಸಲು ಯತ್ನಿಸಿದರು ಕದಲದೆ ಬಿಸಿಲಿಗೆ ಮೈಯೊಡ್ಡಿ ಕುಳಿತುಕೊಂಡಿತ್ತು.
ಆಹಾರವಿಲ್ಲದೇ ನಿತ್ರಾಣವಾಗಿದ್ದ ಕಾಗೆ ಮರಿಗೆ ಕೂರಲು ಒಂದು ಜಾಗ ಬೇಕಾಗಿತ್ತು ಅಷ್ಟೆ. ಅದಕ್ಕೆ ಸಿಎಂ ಕಾರಾದರೇನು, ಮರದ ಟೊಂಗೆಯಾದರೇನು? ಬೆಳಗ್ಗೆ ಸಿದ್ದರಾಮಯ್ಯ ಅವರಿಗೆ ಕಾಗೆ ದರ್ಶನ ನೀಡಿದ್ದು ಕೊಂಚ ಗಲಿಬಿಲಿ ತಂದಿದ್ದು ಮಾಧ್ಯಮಗಳಿಗೆ.[ಸಾಡೇಸಾತಿ ಎಂದರೇನು, ಏನಿದರ ಮರ್ಮ?]

ಈ ಘಟನೆ ನಡೆದ ಮೇಲೆ ಮಾಧ್ಯಮಗಳಲ್ಲಿ ಚರ್ಚೆಯೂ ಆರಂಭವಾಗಿದೆ. ಇದು ಅಪಶಕುನವೋ? ಕಾಕತಾಳೀಯವೋ ಎಂಬ ಚರ್ಚೆ ಶುರುವಾಗಿದೆ. ಸಿದ್ದರಾಮಯ್ಯನವರದು ವೃಶ್ಚಿಕ ರಾಶಿ, ವಿಶಾಖಾ ನಕ್ಷತ್ರ, ಅದರ ಮೇಲೆ ಕಾಗೆ ಬೀರುವ ಪರಿಣಾಮವೇನು ? ಎಂಬ ಚರ್ಚೆಯೂ ಜೋರಾಗಿದೆ. ಸರ್ಕಾರಿ ನೌಕರರ ಪ್ರತಿಭಟನೆ, ಪೊಲೀಸರ ಪ್ರತಿಭಟನೆ ಕಾವು ಏರಿದ್ದ ಸಮಯದಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಅತ್ತ ಕಾಂಗ್ರೆಸ್ ನಲ್ಲಿ ನಾಯಕತ್ವ ಬದಲಾವಣೆ ಕೂಗು ಎದ್ದಿದ್ದು ಸದ್ಯಕ್ಕೆ ಮಾಧ್ಯಮಗಳಲ್ಲಿ ಕಾಗೆಯದ್ದೇ ಸುದ್ದಿ.
ಹಾಗಾಗಿ ಕಾಗೆ ಮರಿ ಕಾಗೆ ಮರಿಯಾಗಿ ಉಳಿದುಕೊಂಡಿಲ್ಲ. ನಿತ್ರಾಣಗೊಂಡು ಹಾರಲು ಸಾಧ್ಯವಾಗದ ಕಾಗೆ ಮರಿಗೆ ರೆಕ್ಕೆ ಪುಕ್ಕಗಳು ಜೋರಾಗೆ ಬಂದಿವೆ. ಅಪಶಕುನದ ಆಗಸದಲ್ಲಿ ಹಾರಾಡುತ್ತಿದೆ. ಇದ್ಯಾವುದಕ್ಕೂ ತಲೆಕೆಡಿಸದೇ ಸಿಎಂ ಸಿದ್ದರಾಮಯ್ಯ ಮಾತ್ರ ತಮ್ಮ ಕೆಲಸದಲ್ಲಿ ತಲ್ಲೀನರಾಗಿದ್ದಾರೆ.[ವೃಶ್ಚಿಕ ರಾಶಿಗೆ ಕೈ ಕೊಟ್ಟ ಗುರುಬಲ, ಮುಂದೇನು?]

ವೃಶ್ಚಿಕ ರಾಶಿಗೆ ಸಾಡೇಸಾತಿ
ಕವಡೆಕಾಯಿ ಜ್ಯೋತಿಷಿಗಳ ಪ್ರಕಾರ ವೃಶ್ಚಿಕ ರಾಶಿಗೆ ಸಾಡೇಸಾತಿ ಆರಂಭವಾಗಿದೆಯಂತೆ. ಪ್ರತಿ ಶನಿವಾರ ಶನಿದೇವರ ದೇವಸ್ಥಾನದಲ್ಲಿಯೋ, ಆಂಜನೇಯನ ಗುಡಿಯಲ್ಲಿಯೋ ಎಳ್ಳೆಣ್ಣೆ ದೀಪ ಹಚ್ಚಿದರೆ ಸಾಡೇಸಾತಿಯ ಪ್ರಭಾವ ಅಷ್ಟಾಗಿರುವುದಿಲ್ಲ ಎಂಬ ಸಲಹೆಯನ್ನೂ ಅವರೇ ನೀಡುತ್ತಾರೆ.[ಕಾಗೆ ಅಪಶಕುನಕ್ಕೆ ಹೆದರಿ ಇಂಜಿನಿಯರ್ ಆತ್ಮಹತ್ಯೆ!]
ಕವಡೆಕಾಯಿ ಜ್ಯೋತಿಷ್ಯ ನಂಬದ ಸಿದ್ದರಾಮಯ್ಯ
ಆದರೆ, ನಮ್ಮ ಸಿದ್ದರಾಮಯ್ಯನವರು ಹೇಗಂತೀರಿ? ಮೂಢನಂಬಿಕೆಯನ್ನು ಅಜೀಬಾತ್ ನಂಬದ ಸಿದ್ದರಾಮಯ್ಯನವರು ಕವಡೆಕಾಯಿ ಜ್ಯೋತಿಷ್ಯಕ್ಕೆ ಕವಡೆಕಾಸಿನ ಕಿಮ್ಮತ್ತನ್ನೂ ನೀಡುವುದಿಲ್ಲ. ಯಾರಾದರೂ ಈ ಪ್ರಶ್ನೇಯೇನಾದರೂ ಕೇಳಿದರೆ ಅಲ್ಲೇ ರೇಗಿಬಿಡುತ್ತಾರೆ. ಅವರು ಹಾಗೆಯೇ ಇರಲಿ ಬಿಡಿ. ನಂಬಿಕೆ ಇಲ್ಲದಿದ್ದರೆ ಏನು ಮಾಡೋಕಾಗುತ್ತೆ?
ವಿವಾದಗಳ ಕಾಲ
ಇತ್ತೀಚೆಗೆ, 70 ಲಕ್ಷದ ವಾಚಿನ ವಿವಾದ ಅವರ ರಿಸ್ಟ್ ಏರಿತ್ತು. ವಾಚನ್ನು ಕಳಚಿಟ್ಟಂತೆ ವಿವಾದವನ್ನು ಕಳಚಿಕೊಂಡುಬಿಟ್ಟರು. ಅವರ ಮಗನ ಲ್ಯಾಬ್ ವಿವಾದವೂ ಅವರ ಬೆನ್ನಿಗೆ ಬಿದ್ದಿತ್ತು. ಈಗ ಆ ವಿವಾದದ ಕೆಂಡದ ಮೇಲೆ ಬೂದಿ ಕೂಡ ಕಟ್ಟಿಲ್ಲ. ಇದೀಗ, ಕಾಗೆ ಅವರ ಕಾರಿನ ಮೇಲೆ ಕುಳಿತ ಪ್ರಸಂಗ ಚರ್ಚೆಗೆ ಗ್ರಾಸವಾದರೂ ಅಚ್ಚರಿಯಿಲ್ಲ. ಆದರೆ, ಪಾಪ ಆ ಕಾಗೆಗೆ ಇದೆಲ್ಲ ಎಲ್ಲಿ ಗೊತ್ತು?
-
'ಗ್ಯಾರಂಟಿ ಸಮಿತಿ' ಸಿಬ್ಬಂದಿ ಮಾಸಿಕ ವೇತನ ಸರ್ಕಾರದ ಮುಖ್ಯ ಕಾರ್ಯದರ್ಶಿಗಿಂತಲೂ ಹೆಚ್ಚು! ವರ್ಷಕ್ಕೆ ಕೋಟಿ ಕೋಟಿ.. -
"5 ತಿಂಗಳಾದ್ರೂ ಸಿಗದ ದಸರಾ ಲೆಕ್ಕ: ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ'' -
"5 ತಿಂಗಳಾದ್ರೂ ಸಿಗದ ದಸರಾ ಲೆಕ್ಕ: ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ'' -
Viral Video: ತೆಂಗಿನ ಚಿಪ್ಪನ್ನು ಮಗುವಿನ ಶೌಚಾಲಯ ಮಾಡಿಕೊಂಡ ದಂಪತಿ, ವಿಡಿಯೋ ವೈರಲ್ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ












Click it and Unblock the Notifications