ದೇಶದ ಮೊದಲ ಅಂಡರ್ ವಾಟರ್ ಮೆಟ್ರೋ ಸುರಂಗ ಪೂರ್ತಿ
ಕೋಲ್ಕತಾದ ಹೂಗ್ಲಿ ನದಿಯ ಕೆಳಗೆ ನಡೆಯುತ್ತಿದ್ದ ಮೆಟ್ರೋ ಸುರಂಗ ಕಾಮಗಾರಿ ಪೂರ್ಣ. ದೇಶದ ಮೊಟ್ಟಮೊದಲ ಅಂಡರ್ ವಾಟರ್ ಮೆಟ್ರೋ ಸುರಂಗವಿದು.
ಕೋಲ್ಕತಾ, ಜೂನ್ 23: ಭಾರೀ ನಿರೀಕ್ಷೆಯ ಯೋಜನೆಯಾಗಿದ್ದ ಹೂಗ್ಲಿ ನದಿಯ ಕೆಳಗಿನ ಮೆಟ್ರೋ ಸುರಂಗ ಮಾರ್ಗದ ಕಾಮಗಾರಿ ಪೂರ್ತಿಯಾಗಿದೆ.
ಕೋಲ್ಕತಾ ಮೆಟ್ರೋ ರೈಲು ನಿಗಮವು ಈ ಯೋಜನೆಯನ್ನು ಎತ್ತಿಕೊಂಡಿತ್ತು. ಇದೀಗ, ಈ ಯೋಜನೆ ಪೂರ್ತಿಯಾಗಿದೆ. 1984ರಲ್ಲೇ ಕೋಲ್ಕತಾಕ್ಕೆ ಮೆಟ್ರೋ ರೈಲು ಬಂದಿದ್ದು.
ಆ ಮೂಲಕ ದೇಶದಲ್ಲಿ ಮೊದಲ ಬಾರಿಗೆ ಮೆಟ್ರೋ ರೈಲು ಸೌಕರ್ಯ ಪಡೆದ ಹೆಗ್ಗಳಿಕೆ ಹೊಂದಿರುವ ಕೋಲ್ಕತಾ ಈಗ ದೇಶದ ಮೊದಲ ಅಂಡರ್ ವಾಟರ್ ಮೆಟ್ರೋ ಸುರಂಗ ಮಾರ್ಗ ಹೊಂದಿರುವ ಮೊದಲ ರಾಜ್ಯವೆಂಬ ಮತ್ತೊಂದು ಗರಿಯನ್ನು ತನ್ನದಾಗಿಸಿಕೊಂಡಿದೆ.
ಕಾಮಗಾರಿ ಯಶಸ್ವಿಯಾಗಿ ಪೂರ್ತಿಯಾಗಿರುವುದಕ್ಕೆ ಆನಂದ ವ್ಯಕ್ತಪಡಿಸಿರುವ ಕೋಲ್ಕತಾ ಮೆಟ್ರೋ ರೈಲು ನಿಗಮದ ಮುಖ್ಯಸ್ಥ ಸತೀಶ್ ಕುಮಾರ್, ''ದೇಶ ವಿದೇಶಗಳ ಇಂಜಿನಿಯರ್ ಗಳು ನೂರಾರು ಕೂಲಿ ಕಾರ್ಮಿಕರ ಸತತ ಪರಿಶ್ರಮದಿಂದ ಈ ಯೋಜನೆ ಸಿದ್ಧವಾಗಿದೆ. ಹೂಗ್ಲಿ ನದಿಯ ಕೆಳಗೆ ಇಂಥ ಸುರಂಗ ನಿರ್ಮಿಸುವುದು ಖಂಡಿತವಾಗಿಯೂ ನಮ್ಮ ಪಾಲಿಗೆ ದೊಡ್ಡದೊಂದು ಸವಾಲು ಆಗಿತ್ತು. ಈಗ ಅದನ್ನು ಸಾಧಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ'' ಎಂದು ತಿಳಿಸಿದ್ದಾರೆ.
ಹಾಗಾಗರೆ, ಈ ಯೋಜನೆಯ ವಿಶೇಷ, ವೈಶಿಷ್ಟ್ಯ ಏನು ಎಂಬಿತ್ಯಾದಿ ಮಾಹಿತಿಗಳು ಇಲ್ಲಿ ನಿಮಗಾಗಿ...

ಹೌರಾ-ಕೋಲ್ಕತಾ ಬೆಸುಗೆ
ಈ ಸುರಂಗದ ಉದ್ದ 16.4 ಕಿ.ಮೀ. ಆಗಿದ್ದು, ಇದು ಹೌರಾ ಮತ್ತು ಕೋಲ್ಕತಾ ನಗರಗಳನ್ನು ಬೆಸೆಯುತ್ತದೆ. ಈ ಸುರಂಗ ನಿರ್ಮಾಣಕ್ಕಾಗಿ ಸುಮಾರು 9 ಸಾವಿರ ಕೋಟಿ ರು. ವ್ಯಯಿಸಲಾಗಿದೆ.

ಜೂನ್ 20ರಂದು ಸುರಂಗ ಕೊರೆತ ಪೂರ್ಣ
ಇದೇ ವರ್ಷ ಏಪ್ರಿಲ್ ನ ಕೊನೆಯ ವಾರದಲ್ಲಿ ಈ ಸುರಂಗ ಯೋಜನೆ ಆರಂಭವಾಗಿತ್ತು. ಹೌರಾ ಕಡೆಯಿಂದ ಈ ಸುರಂಗ ಆರಂಭಿಸಲಾಗಿತ್ತು. ಸುರಂಗ ಕೊರೆಯುತ್ತಿದ್ದ ಬೃಹತ್ ಯಂತ್ರವು ಜೂನ್ 20ರಂದು ಕೋಲ್ಕತಾ ಕಡೆಗಿನ ಭೂಭಾಗದಿಂದ ಆಚೆ ಬಂದಿದೆ.

ಸಿದ್ಧವಾಗಿವೆ ಎರಡು ಟನೆಲ್ ಗಳು
ಅಂದಹಾಗೆ, ಇಲ್ಲಿ ಎರಡು ಟನೆಲ್ ಗಳನ್ನು ನಿರ್ಮಿಸಲಾಗಿದೆ . ಇದು ಎರಡು ಮುಖದ ಪ್ರಯಾಣಕ್ಕೆ ಅನುಕೂಲ ಕಲ್ಪಿಸಲಿದೆ. ಎರಡೂ ಟನೆಲ್ ಗಳು ಏಕಕಾಲದಲ್ಲಿ ನಿರ್ಮಾಣವಾಗಿರುವುದು ಹೆಗ್ಗಳಿಕೆ.

ಜನಸಾಮಾನ್ಯರ ಫೇವರಿಟ್ ಆಗಲಿರುವ ಯೋಜನೆ
ಈ ಸುರಂಗ ಮಾರ್ಗ ನಿರ್ಮಾಣದಿಂದಾಗಿ ಹೌರಾ ಹಾಗೂ ಕೋಲ್ಕತಾ ನಡುವಿನ ಪ್ರಯಾಣ ಕೇವಲ 2.5 ನಿಮಿಷಗಳದ್ದಾಗಲಿದೆ. ಹಾಗಾಗಿ, ಜನಸಾಮಾನ್ಯರಿಗೆ ಇದು ದೊಡ್ಡ ಮಟ್ಟದ ನೆರವು ನೀಡಲಿದೆ ಎಂದು ಹೇಳಲಾಗಿದೆ.

ಮುಂದಿನ ಕಾಮಗಾರಿಗೆ ಉತ್ಸಾಹ
ಈ ಸುರಂಗ ಮಾರ್ಗದ ಯಶಸ್ವಿ ನಿರ್ಮಾಣದಿಂದ ಸ್ಫೂರ್ತಿಗೊಂಡಿರುವ ಕೋಲ್ಕತಾ ಮೆಟ್ರೋ ಸಂಸ್ಥೆ, ಮುಂದಿನ ವರ್ಷ ಕಾಮಗಾರಿ ಆರಂಭವಾಗಬೇಕಿರುವ ಸಾಲ್ಟ್ ಲೇಕ್ ಹಾಗೂ ಪೂಲ್ ಬಗಾನ್ ನಡುವಿನ ಮತ್ತೊಂದು ಮಹತ್ವದ ಮೆಟ್ರೋ ಕಾಮಗಾರಿಯಲ್ಲಿ ಉತ್ಸಾಹದಿಂದ ತೊಡಗಿಸಿಕೊಂಡಿದೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications