ಬೇವು-ಬೆಲ್ಲ ಕಷ್ಟ-ಸುಖಗಳ ಸಿಹಿ-ಕಹಿ ಸಮ್ಮಿಲನ
ಬಾವುಟ
ಹಾರಿಸುವುದು, ಬೇವು-ಬೆಲ್ಲ ತಿನ್ನುವುದು, ಪಂಚಾಂಗ ಶ್ರವಣ, ವಸಂತ ನವರಾತ್ರಿ ಆರಂಭ ಇಷ್ಟದೇವತಾ ಪೂಜೆಯ ಜೊತೆಗೆ ಸೃಷ್ಟಿಕರ್ತನಾದ ಬ್ರಹ್ಮದೇವನ, ಕಾಲಪುರುಷನ ಮತ್ತು ವರ್ಷಾಧಿಪತಿಯ ಆರಾಧನೆಯೂ ನಡೆಯುತ್ತದೆ. ಹಬ್ಬದ ದಿನದಂದು ಹೋಳಿಗೆ, ಪಾಯಸ ಸೇರಿದಂತೆ ವಿವಿಧ ಸಿಹಿ ತಿನಿಸುಗಳನ್ನು ಮಾಡಿದರೂ ಬೇವು-ಬೆಲ್ಲ ಸೇವಿಸುವ ಮೂಲಕ ಜೀವನದಲ್ಲಿ ಬರುವ ಕಷ್ಟ-ಸುಖ ಎರಡನ್ನೂ ನಾವು ಸಮಾನವಾಗಿ ಸ್ವೀಕರಿಸಬೇಕು ಎಂಬ ಸಂದೇಶವಿದೆ. ಬದುಕಿನಲ್ಲಿ ಕಷ್ಟ ಬಂದಾಗ ಕುಗ್ಗದೆ, ಸುಖ ಬಂದಾಗ ಹಿಗ್ಗದೆ ಎರಡನ್ನೂ ಸಮಾನವಾಗಿ ಸ್ವೀಕರಿಸಿ ಬದುಕು ಎಂಬುವುದನ್ನು ಸಾರುವ ಸಂಕೇತವಾಗಿ ಬೇವು-ಬೆಲ್ಲವನ್ನು ಸೇವಿಸಲಾಗುತ್ತಿದೆ. id="toptextpromo">ವರ್ಷದ
ತೊಡಕು
:
ಯುಗಾದಿ
ಹಬ್ಬದ
ಮಾರನೆಯ
ದಿನವನ್ನು
ವರ್ಷ
ತೊಡಕು
ಎಂದು
ಆಚರಿಸಲಾಗುತ್ತದೆ.
ವರ್ಷ
ತೊಡಕು
ಎನ್ನುವುದು
ಹೊಸ
ಕಾರ್ಯಗಳಿಗೆ
ತೊಡಗಿಸಿಕೊಳ್ಳುವ
ದಿನವಾಗಿದ್ದು,
ಅಂದು
ವರ್ಷಪೂರ್ತಿ
ಯಾವುದೇ
ತೊಡಕುಗಳು
ಬಾರದಿರಲಿ
ಎಂದು
ದೇವರಲ್ಲಿ
ಪ್ರಾರ್ಥಿಸಿಕೊಳ್ಳಲಾಗುತ್ತದೆ.
ಹೀಗಾಗಿ
ವರ್ಷ
ತೊಡಕಿಗೂ
ಯುಗಾದಿ
ದಿನದಷ್ಟೇ
ಪ್ರಾಮುಖ್ಯತೆ.
ಈ
ದಿನ
ವಿವಿಧ
ಬಗೆಯ
ಕ್ರೀಡೆ,
ಸಾಂಸ್ಕೃತಿಕ
ಕಾರ್ಯಕ್ರಮಗಳು,
ವಿವಿಧ
ರೀತಿಯ
ಸ್ಪರ್ಧೆಗಳನ್ನು
ನಡೆಸುವ
ಮೂಲಕ
ಮನರಂಜನೆಯನ್ನು
ಪಡೆಯುತ್ತಾರೆ.
ಅಂದು
ಯಾವುದೇ
ವ್ಯಕ್ತಿ
ಒಳ್ಳೆಯ
ಕೆಲಸ
ಮಾಡಿದರೆ
ಅದನ್ನು
ವರ್ಷಪೂರ್ತಿ
ಮಾಡುತ್ತಾನೆ
ಹಾಗೂ
ಅಂದು
ದೊರೆತ
ಸಂಪತ್ತು
ವರ್ಷ
ಪೂರ್ತಿ
ದೊರೆಯುತ್ತಲೇ
ಇರುತ್ತದೆ
ಎಂಬ
ನಂಬಿಕೆ
ಇದೆ.
id='are-slot-1'
class='oiad
oi-axt
oiadv'>
id='top-searched-articles'>
ಒಂದೆಡೆ
ಹೊಸದಾಗಿ ಮದುವೆಯಾದ ಮಗಳು ಅಳಿಯನನ್ನು ಹಬ್ಬಕ್ಕೆ ಆಹ್ವಾನಿಸಿ ಸತ್ಕರಿಸಿದರೆ, ಮತ್ತೊಂದೆಡೆ ಅಕ್ಕ ತಂಗಿಯರು, ಅಣ್ಣ ತಮ್ಮಂದಿರನ್ನು ತಮ್ಮ ಮನೆಗಳಿಗೆ ಬರಮಾಡಿಕೊಂಡು ಹಬ್ಬದ ಅಡುಗೆ ಬಡಿಸಿ ಸತ್ಕರಿಸಿ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ. ಇತ್ತೀಚೆಗಿನ ಯಾಂತ್ರಿಕ ಯುಗದಲ್ಲಿ ಯುಗಾದಿ ಹಬ್ಬದ ಆಚರಣೆಗಳಲ್ಲಿ ಒಂದಷ್ಟು ವ್ಯತ್ಯಾಸಗಳು ಆಗಿರಬಹುದಾದರೂ ಹಬ್ಬದ ರಂಗು ಎಂದಿಗೂ ಕಳೆಗುಂದುವುದಿಲ್ಲ ಹಾಗಾಗಿಯೇ ಎಷ್ಟೇ ಯುಗ ಕಳೆದರೂ ಯುಗಾದಿ ಮರಳಿ ಬರುತ್ತಲೇ ಇರುತ್ತದೆ.











Click it and Unblock the Notifications