ಬೇಸಿಗೆಯಲ್ಲಿ ಬೇಲದ ಹಣ್ಣು ಬಳಸಿ ಪಾನಕ ತಯಾರಿಸುವ ಸರಳ ವಿಧಾನ ಹಾಗೂ ಹಣ್ಣಿನ ಉಪಯೋಗ ಮಾಹಿತಿ ಇಲ್ಲಿದೆ...
Mahesh Malnad
ಸಂಸ್ಕೃತದಲ್ಲಿ ಕಪಿತ್ಥ, ಇಂಗ್ಲೀಷಲ್ಲಿ Wood Apple, ಬ್ಯಾಲ, ಮಳೂರ,ಮನ್ಮಥ-ಪುಷ್ಪಫಲ, ದಾದಿಫಲ, ದಂತಫಲ, ಗಂಧಫಲ, ಗೋಪಕರ್ಣ, ಗ್ರಾಹಿ, ಗ್ರಂಥಿಫಲ, ಕಪಿಪ್ರಿಯ, ಕರಂಜಫಲಕ ಎಂದು ಕರೆಯಲ್ಪಡುತ್ತದೆ.
ನಿಂಬೆ ಜಾತಿಗೆ ಸೇರಿದ ಮರ
ಬೂದಿ ಬಣ್ಣದ ಗಟ್ಟಿ ತೊಗಟೆ ಹೊಂದಿದ್ದು ಒಡೆದಾಗ ಅಂಟಂಟಾಗಿರುವ ಕಂದು ತಿರುಳು ಮತ್ತು ಸಣ್ಣ ಬಿಳಿ ಬೀಜವುಳ್ಳ ಹಣ್ಣು ಸಿಗುತ್ತದೆ, ಹುಳಿಮಿಶ್ರಿತ ಸಿಹಿಯ ರುಚಿ ಹೊಂದಿರುತ್ತದೆ.
ಉಪಯೋಗ
ಜೀರ್ಣಕ್ರಿಯೆ ಹೆಚ್ಚಳ, ಮಲಬದ್ಧತೆ ನಿವಾರಣೆ, ರೋಗ ನಿರೋಧಕ ಶಕ್ತಿವರ್ಧನೆ, ಹುಣ್ಣು, ಕರಳು ಬೇನೆ ನಿವಾರಣೆ, ನೆನಪಿನ ಶಕ್ತಿ ಹೆಚ್ಚಳ, ತ್ವಚೆ ಸಂರಕ್ಷಣೆ, ಗಂಟಲು, ಕಿವಿ, ಕಣ್ಣು ನೋವು, ಕೆಮ್ಮು, ಪಿತ್ತಶಮನ, ಮಧುಮೇಹ ನಿಯಂತ್ರಣ, ಅಧಿಕ ರಕ್ತದೊತ್ತಡ ತಗ್ಗಿಸಲು ಬಳಕೆ
ಅಪಕ್ವವಾದ ಹಣ್ಣಿನ ತಿರುಳನ್ನು ಒಣಗಿಸಿಕೊಳ್ಳಿ ಅಥವಾ ಹಸಿಯಾಗಿ ಬಳಸಬಹುದು ಅರ್ಧಚಮಚದಷ್ಟು ಪುಡಿಯನ್ನು ಒಂದು ಲೋಟದ ಮಜ್ಜಿಗೆಗೆ ಹಾಕಿ ಸೇವಿಸಿದರೆ ಜೀರ್ಣಶಕ್ತಿ ವೃದ್ಧಿಸುತ್ತದೆ. ಅತೀಸಾರ, ಆಮಶಂಕೆ ನಿಯಂತ್ರಣಕ್ಕೆ ಬರುತ್ತದೆ.
ಬಳಸುವ ವಿಧಾನ
ಬೇಲದ ಹಣ್ಣಿನ ಪಾನಕ
1 ಬೇಲದ ಹಣ್ಣಿನ ತೊಗಟೆ ಒಡೆದು, ತಿರುಳನ್ನು ತೆಗೆದು 4 ಲೋಟ ನೀರಿನ ಪಾತ್ರೆಗೆ ಹಾಕಿ, ನೆನಸಿ, ಸ್ವಲ್ಪ ಸಮಯದ ಬಳಿಕ ಹುಣಸೆ ಹಣ್ಣು ಕಿವುಚುವಂತೆ ಕಿವುಚಿ ರಸವನ್ನು ತೆಗೆದು, ಸೋಸಿ ಪಾತ್ರೆಗೆ ಸೇರಿಸಿ, 2-3 ಸಲ ರಸ ಹಿಂಡಿಕೊಳ್ಳಿ, ಅಗತ್ಯಕ್ಕೆ ತಕ್ಕಷ್ಟು ನೀರು, 1/2 ಕಪ್ ಬೆಲ್ಲದ ಪುಡಿ ಸೇರಿಸಿ, ಕಲಕಿ, ಕುಡಿಯಿರಿ.