Home / Photos
ಸಂಕ್ರಾಂತಿ: ಕಬ್ಬು-ಕಿಚ್ಚಿನ ಸೊಬಗು, ಗಾಳಿಪಟದ ಮೆರುಗು
By Reshma P
ಭಾರತದಾದ್ಯಂತ ಮಕರ ಸಂಕ್ರಾಂತಿಯನ್ನು ತ್ರಿವೇಣಿ ಸಂಗಮ ನದಿಗಳಲ್ಲಿ ಪವಿತ್ರ ಸ್ನಾನಗಳೊಂದಿಗೆ, ಜೈಪುರದಲ್ಲಿ ಬಣ್ಣಬಣ್ಣದ ಗಾಳಿಪಟ ಹಬ್ಬದೊಂದಿಗೆ ಹಾಗೂ ಗಂಗಾಸಾಗರ ಮತ್ತು ಹರಿದ್ವಾರದಲ್ಲಿ ಗಾಢ ಭಕ್ತಿಭಾವದೊಂದಿಗೆ ಆಚರಿಸಲಾಯಿತು.
1/10
Share
ಹರಿದ್ವಾರ: ಹರಿದ್ವಾರದ ‘ಹರ್ ಕಿ ಪೌರಿ’ ಘಾಟ್ನಲ್ಲಿ ಮಕರ ಸಂಕ್ರಾಂತಿ ಪ್ರಯುಕ್ತ ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡಲು ಸಾವಿರಾರು ಜನರು ಸೇರಿದ್ದರು.
2/10
Share
ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ಮಕರ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಜನರು ಸಂಭ್ರಮದಿಂದ ಕಬ್ಬು ಖರೀದಿಯಲ್ಲಿ ತೊಡಗಿದ್ದರು.
3/10
Share
ಜೈಪುರ: ಮಕರ ಸಂಕ್ರಾಂತಿಯ ಸಂಭ್ರಮದಲ್ಲಿ ಜೈಪುರದ ಆಕಾಶವು ಪಟಾಕಿಗಳಿಂದ ಮಿನುಗಿತು.
4/10
Share
ಗಂಗಾಸಾಗರ: ಪಶ್ಚಿಮ ಬಂಗಾಳದ ಸಾಗರ್ ದ್ವೀಪದಲ್ಲಿ ನಡೆಯುತ್ತಿರುವ ಗಂಗಾಸಾಗರ ಮೇಳ 2026ರ ಸಂದರ್ಭದಲ್ಲಿ, ಭಕ್ತರು ಅಸ್ತಮಿಸುವ ಸೂರ್ಯನಿಗೆ ಭಕ್ತಿಪೂರ್ವಕವಾಗಿ ಪ್ರಾರ್ಥನೆ ಸಲ್ಲಿಸಿದರು.
5/10
Share
ಗಾಳಿಪಟದ ಹಬ್ಬ: ಜೈಪುರದಲ್ಲಿ ಮಕರ ಸಂಕ್ರಾಂತಿಯ ಅಂಗವಾಗಿ ಆಕಾಶದಾದ್ಯಂತ ಬಣ್ಣಬಣ್ಣದ ಗಾಳಿಪಟಗಳು ಕಂಡುಬಂದವು.
6/10
Share
ಅಮೃಸರ: ಅಮೃತಸರದ ಸ್ವರ್ಣ ಮಂದಿರದಲ್ಲಿ, ಮಂಜು ಮುಸುಕಿದ ಮುಂಜಾನೆ ಸಿಖ್ ಸಮುದಾಯದ ಭಕ್ತರು ‘ಅಮೃತ ಸರೋವರ’ದಲ್ಲಿ ಪವಿತ್ರ ಸ್ನಾನ ಮಾಡಿದರು.
7/10
Share
ಕೊಲ್ಕತ್ತಾ: ಸಂಕ್ರಾಂತಿಯ ಪವಿತ್ರ ದಿನದಂದು ಹೂಗ್ಲಿ ನದಿಯಲ್ಲಿ ಪುಣ್ಯಸ್ನಾನ ಮಾಡಲು ಕೊಲ್ಕತ್ತಾದ ಬಾಬುಘಾಟ್ನಲ್ಲಿ ಅಪಾರ ಜನಸ್ತೋಮ ಸೇರಿತ್ತು.
8/10
Share
ಪ್ರಯಾಗರಾಜ್ (ಮಾಘ ಮೇಳ): ಪ್ರಯಾಗರಾಜ್ನಲ್ಲಿ ನಡೆಯುತ್ತಿರುವ ಮಾಘ ಮೇಳದ ಸಂದರ್ಭದಲ್ಲಿ, ಬುಧವಾರ ಮಕರ ಸಂಕ್ರಾಂತಿಯ ಅಂಗವಾಗಿ ಭಕ್ತರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು.
9/10
Share
ಸಂಗಮ ಸ್ನಾನ: ಪ್ರಯಾಗರಾಜ್ನ ಸಂಗಮದಲ್ಲಿ ಜನರು ಶ್ರದ್ಧಾಭಕ್ತಿಗಳಿಂದ ಮಕರ ಸಂಕ್ರಾಂತಿಯ ಪುಣ್ಯಸ್ನಾನವನ್ನು ನೆರವೇರಿಸಿದರು.


Click it and Unblock the Notifications