ಈ ದೇವಾಲಯದಲ್ಲಿ ಇಂದಿಗೂ ಮಿಡಿಯುತ್ತಿದೆ ಶ್ರೀಕೃಷ್ಣನ ಹೃದಯ: ಪ್ರತಿ ವರ್ಷ ವಿಗ್ರಹದಿಂದ ಹೊರ ತೆಗೆಯುವ ಕ್ರಮವೂ ಇಲ್ಲಿದೆ


ಭಾರತದಲ್ಲಿ ಸಾವಿರಾರು ದೇವಲಯಗಳಿವೆ. ಒಂದೊಂದು ದೇವಾಲಯದ ಬಗ್ಗೆ ಒಂದೊಂದು ವಿಶೇಷ ನಂಬಿಕೆ ಅಡಗಿದೆ. ಅವುಗಳಲ್ಲಿ ಒಂದು ಒಡಿಶಾದ ಪುರಿಯಲ್ಲಿರುವ ಜಗನ್ನಾಥ ದೇವಾಲಯ. ಈ ದೇವಾಲಯವನ್ನು ಚಾರ್ ಧಾಮ್‌ಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ಪ್ರತಿ ವರ್ಷ ಲಕ್ಷಾಂತರ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಜಗನ್ನಾಥ ದೇವಾಲಯವು ತನ್ನ ಭವ್ಯ ರಥಯಾತ್ರೆಗೆ ಹೆಸರು ವಾಸಿಯಾಗಿದೆ. ಇದರ ಜೊತೆಗೆ ಶ್ರೀಕೃಷ್ಣನ ದೈವಿಕ ಹೃದಯವು ಇನ್ನೂ ಜಗನ್ನಾಥನ ವಿಗ್ರಹದೊಳಗೆ ಸಂರಕ್ಷಿಸಲ್ಪಟ್ಟಿದೆ ಎಂಬ ನಂಬಿಕೆಯೂ ಇಲ್ಲಿನ ಭಕ್ತರಲ್ಲಿದೆ. ಈ ನಂಬಿಕೆ ಶತಮಾನಗಳಿಂದ ಮುಂದುವರೆದುಕೊಂಡು ಬಂದಿದ್ದು, ದೇವಾಲಯದ ಅತ್ಯಂತ ಪವಿತ್ರ ಸಂಪ್ರದಾಯಗಳಲ್ಲಿ ಒಂದಾಗಿದೆ. ಪ್ರತಿ ನವಕಳೆವರದಲ್ಲಿ, ಈ ದೈವಿಕ ಅಂಶವನ್ನು ಒಳಗೊಂಡ ವಿಶೇಷ ಆಚರಣೆಯನ್ನು ನಡೆಸಲಾಗುತ್ತದೆ.

Advertisement

ಶ್ರೀ ಕೃಷ್ಣನ ಹೃದಯಕ್ಕೆ ಸಂಬಂಧಿಸಿದ ನಂಬಿಕೆ:

ಪೌರಾಣಿಕ ನಂಬಿಕೆಯ ಪ್ರಕಾರ, ಶ್ರೀ ಕೃಷ್ಣನು ತನ್ನ ದೇಹವನ್ನು ತೊರೆದಾಗ, ಅವನನ್ನು ದಹನ ಮಾಡಲಾಯಿತು. ಈ ಸಮಯದಲ್ಲಿ ಇಡೀ ದೇಹ ಸುಟ್ಟು ಹೋದರೂ ಹೃದಯ ಮಾತ್ರ ಹಾಗೆಯೇ ಉಳಿದಿತ್ತಂತೆ. ಇದನ್ನು ಭಗವಂತನ ಹೃದಯ ಅಥವಾ ಬ್ರಹ್ಮ ತತ್ವ ಎಂದು ಕರೆಯಲಾಗುತ್ತದೆ. ಈ ದೈವಿಕ ಅಂಶವು ನಂತರ ಪುರಿ ತಲುಪಿ ಜಗನ್ನಾಥನ ವಿಗ್ರಹದೊಳಗೆ ಪ್ರತಿಷ್ಠಾಪಿಸಲ್ಪಟ್ಟಿತು ಎಂದು ಹೇಳಲಾಗುತ್ತದೆ. ಈ ನಂಬಿಕೆಯನ್ನು ಜಾನಪದ ಕಥೆಗಳು ಮತ್ತು ಧಾರ್ಮಿಕ ಸಂಪ್ರದಾಯಗಳಲ್ಲಿ ಉಲ್ಲೇಖಿಸಲಾಗಿದೆ.

Advertisement

ಏನಿದು ಬ್ರಹ್ಮ ವಸ್ತು ?:

ಜಗನ್ನಾಥ ದೇವಾಲಯದ ಸಂಪ್ರದಾಯದಲ್ಲಿ, ಈ ದೈವಿಕ ಅಂಶವನ್ನು ಬ್ರಹ್ಮ ವಸ್ತು ಅಥವಾ ಬ್ರಹ್ಮ ತತ್ವ ಎಂದು ಕರೆಯಲಾಗುತ್ತದೆ. ಇದರ ನಿಜವಾದ ಸ್ವರೂಪ ಇಂದಿಗೂ ನಿಗೂಢವಾಗಿಯೇ ಉಳಿದಿದೆ. ಇದನ್ನು ಸಾರ್ವಜನಿಕವಾಗಿ ನೋಡಲು ಅಥವಾ ಪ್ರದರ್ಶಿಸಲು ಯಾರಿಗೂ ಅನುಮತಿ ಇಲ್ಲ. ದೇವಾಲಯ ಸಂಪ್ರದಾಯಗಳ ಪ್ರಕಾರ, ಇದು ಭಗವಂತನ ದೈವಿಕ ಶಕ್ತಿಯ ಸಂಕೇತವಾಗಿರುವುದರಿಂದ ಇದನ್ನು ಕಟ್ಟುನಿಟ್ಟಾಗಿ ಗೌಪ್ಯವಾಗಿಡಲಾಗುತ್ತದೆ.

ವಿಜ್ಞಾನಕ್ಕೂ ನಿಲುಕದ ಅದ್ಭುತ ಶಕ್ತಿ: ಎಲ್ಲಾ ತರ್ಕಗಳನ್ನು ಮೀರಿದೆ ಭಾರತದ ಈ ಶಕ್ತಿಪೀಠಗಳ ರಹಸ್ಯ

ವಿಶೇಷ ಸಂಪ್ರದಾಯದ ಆಚರಣೆ:

ನವಕಲೇವರ್ ಸಮಯದಲ್ಲಿ ಒಂದು ವಿಶೇಷ ಸಂಪ್ರದಾಯವನ್ನು ಆಚರಿಸಲಾಗುತ್ತದೆ.ಅಧಿಕ ಮಾಸದ ಕಾರಣದಿಂದಾಗಿ ನವಕಲೇವರ್ ಹಬ್ಬದ ಸಂದರ್ಭ ಬಂದಾಗ, ಭಗವಾನ್ ಜಗನ್ನಾಥ, ಬಲಭದ್ರ, ಸುಭದ್ರ ಮತ್ತು ಸುದರ್ಶನನ ಹೊಸ ವಿಗ್ರಹಗಳನ್ನು ಬೇವಿನ ಮರದಿಂದ ತಯಾರಿಸಲಾಗುತ್ತದೆ. ಈ ಸಮಯದಲ್ಲಿ, ಹಳೆಯ ವಿಗ್ರಹದಿಂದ ಬ್ರಹ್ಮ ವಸ್ತುವನ್ನು ಹೊಸ ವಿಗ್ರಹಕ್ಕೆ ವರ್ಗಾಯಿಸಲಾಗುತ್ತದೆ. ಈ ಪ್ರಕ್ರಿಯೆಯು ಬಹಳ ಗೌಪ್ಯವಾಗಿರುತ್ತದೆ. ಸಂಪ್ರದಾಯದ ಪ್ರಕಾರ, ಇದನ್ನು ರಾತ್ರಿಯ ವೇಳೆ ದೇವಾಲಯದ ಬಾಗಿಲುಗಳನ್ನು ಮುಚ್ಚಿ ನಡೆಸಲಾಗುತ್ತದೆ. ಆ ಸಮಯದಲ್ಲಿ ಇಡೀ ದೇವಾಲಯದ ದೀಪಗಳನ್ನು ಆಫ್ ಮಾಡಲಾಗುತ್ತದೆ. ಆಯ್ದ ಸೇವಾಯತ್‌ಗಳು ಮಾತ್ರ ಈ ಧಾರ್ಮಿಕ ಆಚರಣೆಯಲ್ಲಿ ಭಾಗವಹಿಸುತ್ತಾರೆ.

Advertisement

ಈ ಪ್ರಕ್ರಿಯೆಯಲ್ಲಿ ಯಾರೂ ಭಾಗಿಯಾಗುವಂತಿಲ್ಲ:

ದೇವಾಲಯದ ಶತಮಾನಗಳಷ್ಟು ಹಳೆಯದಾದ ಸಂಪ್ರದಾಯದ ಪ್ರಕಾರ, ಬ್ರಹ್ಮ ವಸ್ತುವನ್ನು ವರ್ಗಾಯಿಸುವ ಪ್ರಕ್ರಿಯೆ ಅತ್ಯಂತ ಪವಿತ್ರವಾಗಿದೆ. ಆದ್ದರಿಂದ, ಯಾವುದೇ ಸಾಮಾನ್ಯ ವ್ಯಕ್ತಿಗೆ ಇದನ್ನು ವೀಕ್ಷಿಸಲು ಅವಕಾಶವಿಲ್ಲ. ಇದು ದೇವರ ದೈವಿಕ ಇಚ್ಛೆ ಮತ್ತು ನಂಬಿಕೆಯ ವಿಷಯ. ಆದ್ದರಿಂದ, ಈ ಪ್ರಕ್ರಿಯೆಯ ಸಂಪೂರ್ಣ ವಿವರಗಳನ್ನು ಸಾರ್ವಜನಿಕಗೊಳಿಸಲಾಗಿಲ್ಲ. ಈ ರಹಸ್ಯವು ಇಂದಿಗೂ ಹಾಗೆಯೇ ಉಳಿದಿದೆ.

ದೇವಿಯ ಪೀರಿಯಡ್ಸ್‌ನಿಂದ ಕೆಂಪಾಗುತ್ತದೆ ನದಿ! ಕಾಮಾಖ್ಯದ ಅಂಬುಬಾಚಿ ಮೇಳದ ರಹಸ್ಯಗಳು

ನಂಬಿಕೆ ಮತ್ತು ನಿಗೂಢತೆಯ ವಿಶಿಷ್ಟ ಸಂಗಮವಾದ:

ಪುರಿ ಜಗನ್ನಾಥ ದೇವಾಲಯವು ಕೇವಲ ಧಾರ್ಮಿಕ ತಾಣವಲ್ಲ, ಬದಲಾಗಿ ಭಾರತದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯ ಪ್ರಮುಖ ಭಾಗವಾಗಿದೆ. ರಥಯಾತ್ರೆ, ಮಹಾಪ್ರಸಾದ ಮತ್ತು ನವಕಲೇಬರ್ ಆಚರಣೆಗಳು ಸೇರಿದಂತೆ ಇದರ ಸಂಪ್ರದಾಯಗಳು ದೇಶಾದ್ಯಂತ ಮತ್ತು ಪ್ರಪಂಚದಾದ್ಯಂತ ಜನರನ್ನು ಆಕರ್ಷಿಸುತ್ತವೆ. ಶ್ರೀಕೃಷ್ಣನ ಹೃದಯಕ್ಕೆ ಸಂಬಂಧಿಸಿದ ನಂಬಿಕೆಯು ದೇವಾಲಯದ ಅತ್ಯಂತ ಪ್ರಸಿದ್ಧ ಸಂಪ್ರದಾಯಗಳಲ್ಲಿ ಒಂದಾಗಿದೆ. ಇದು ವೈಜ್ಞಾನಿಕವಾಗಿ ಸಾಬೀತಾಗಿಲ್ಲದಿದ್ದರೂ, ಈ ವಿಚಾರವಾಗಿ ಭಕ್ರು ಮಾತ್ರ ಅಚಲ ನಂಬಿಕೆ ಹೊಂದಿದ್ದಾರೆ.

Advertisement

ಭಕ್ತರಿಗೆ ಇದರ ಮಹತ್ವವೇನು?:

ಜಗನ್ನಾಥ ದೇವಸ್ಥಾನಕ್ಕೆ ಭೇಟಿ ನೀಡುವವರಿಗೆ, ಇದು ಕೇವಲ ದರ್ಶನದ ಸ್ಥಳವಲ್ಲ, ಬದಲಾಗಿ ಭಗವಂತನ ಮೇಲಿನ ಅಚಲ ಭಕ್ತಿಯ ಕೇಂದ್ರವಾಗಿದೆ. ಇಲ್ಲಿಗೆ ಬರುವ ಲಕ್ಷಾಂತರ ಭಕ್ತರು ಭಗವಾನ್ ಜಗನ್ನಾಥನು ಶ್ರೀಕೃಷ್ಣನ ಅಭಿವ್ಯಕ್ತಿ ಎಂದೇ ನಂಬುತ್ತಾರೆ. ಆದ್ದರಿಂದ, ಬ್ರಹ್ಮ ವಸ್ತುವಿನೊಂದಿಗೆ ಸಂಬಂಧ ಹೊಂದಿರುವ ಈ ಸಂಪ್ರದಾಯ ಅವರ ನಂಬಿಕೆಯನ್ನು ಮತ್ತಷ್ಟು ಬಲಪಡಿಸುತ್ತದೆ.ಈ ಕಾರಣದಿಂದಲೇ ಪ್ರತಿ ವರ್ಷ, ವಿಶೇಷವಾಗಿ ರಥಯಾತ್ರೆಯ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.

(ಬರಹ: ರಂಜಿತಾ ಆರ್.ಕೆ.)

English Summary

Lord Krishnas: Lord krishnas heart inside puri jaganath statue mystry behind brahma tatva and navakalebara.