ಇನ್ಫೋಸಿಸ್ Q4: ನಿರೀಕ್ಷೆ ಮಟ್ಟ ಮುಟ್ಟದೆ ನಿರಾಶೆ
ಬೆಂಗಳೂರು, ಏ.24: ದೇಶದ ಪ್ರಮುಖ ಸಾಫ್ಟ್ ವೇರ್ ಸಂಸ್ಥೆ ಇನ್ಫೋಸಿಸ್ ಶುಕ್ರವಾರ ತನ್ನ ನಾಲ್ಕನೇ ತ್ರೈಮಾಸಿಕ ವರದಿ ಪ್ರಕಟಿಸಿದೆ. ನಿರೀಕ್ಷೆಯಂತೆ ಲಾಭದತ್ತ ಮುಖ ಮಾಡಿರುವ ಇನ್ಫೋಸಿಸ್ ಗೆ 3,097 ಕೋಟಿ ರು ನಿವ್ವಳ ಲಾಭ(ತೆರಿಗೆ ಕಡಿತ ನಂತರ) ಬಂದಿದೆ.
ಕಳೆದ ವರ್ಷ ಇದೇ ಅವಧಿಗೆ ಬಂದಿದ್ದ ನಿವ್ವಳ ಲಾಭಕ್ಕೆ ಹೋಲಿಸಿದರೆ ಈ ಬಾರಿ ಶೇ 3.5 ರಷ್ಟು ಪ್ರಗತಿ ಸಾಧಿಸಿದೆ. ಅದರೆ, ಮಾರುಕಟ್ಟೆ ತಜ್ಞರ ನಿರೀಕ್ಷೆ ಮಟ್ಟ ಮುಟ್ಟಲಾಗಿಲ್ಲ.[ಇನ್ಫೋಸಿಸ್ ಷೇರುಗಳು ನೆಲಕಚ್ಚುತ್ತಿವೆ ಏಕೆ?]
ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಒಟ್ಟಾರೆ 13,411 ಕೋಟಿ ರು ಆದಾಯ ಸಿಕ್ಕಿದೆ. ಇದೇ ಅವಧಿಗೆ ಹೋಲಿಸಿದರೆ ಶೇ 4.2ರಷ್ಟು ಪ್ರಗತಿ ಕಂಡಿದೆ.

ವರ್ಷದಿಂದ ವರ್ಷಕ್ಕೆ ಹೋಲಿಸಿದರೆ 2015 ಆರ್ಥಿಕ ವರ್ಷ 12,329 ರು ಶೇ 15.8 ರಷ್ಟು ಏರಿಕೆ ಬಂದಿದ್ದರೆ ಆದಾಯ 53,319 ರು ಶೇ 6.4ರಷ್ಟು ಪ್ರಗತಿ ಕಂಡಿದೆ.
Q4ರಲ್ಲಿ ಡಾಲರ್ ಆದಾಯ 498 ಮಿಲಿಯನ್ ಡಾಲರ್ ಇದ್ದು ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಶೇ 2.3ರಷ್ಟು ಏರಿಕೆ ಕಂಡಿದೆ. ಆದಾಯ 2,159 ಮಿಲಿಯನ್ ಡಾಲರ್ ಶೇ 3.2ರಷ್ಟು ಪ್ರಗತಿ ಬಂದಿದೆ.
ಷೇರುಪೇಟೆ: ಬಿಎಸ್ಇಯಲ್ಲಿ ಶುಕ್ರವಾರ 2,131 ರು ನಂತೆ ಆರಂಭಗೊಂಡ ಇನ್ಫೋಸಿಸ್ ಷೇರುಗಳು 2,081 ರು ನಿಂದ 2,150 ರು ನಂತೆ ಏರಿಳಿತ ಕಂಡಿದೆ.
ನೇಮಕಾತಿ: ಈ ಅವಧಿಯಲ್ಲಿ ಸುಮಾರು 50,000 ಹೆಚ್ಚುವರಿ ನೇಮಕಾತಿ ಆಟ್ರಿಷನ್ ದರ ಶೇ 13.4ಕ್ಕೆ ಇಳಿದಿದೆ. 2015 ಆರ್ಥಿಕ ವರ್ಷದಲ್ಲಿ ಅಂತಿಮ ಡಿವಿಡೆಂಡ್ 29.50 ಪ್ರತಿ ಷೇರಿನಂತೆ ಘೋಷಣೆ ಮಾಡಲಾಗಿದೆ. ಮುಂದಿನ ಆರ್ಥಿಕ ವರ್ಷದಲ್ಲಿ ಶೇ 10 ರಿಂದ 12ರಷ್ಟು ಪ್ರಗತಿ ನಿರೀಕ್ಷಿಸಲಾಗಿದೆ ಎಂದು ಸಿಒಒ ಯು.ಬಿ ಪ್ರವೀಣ್ ರಾವ್ ಹೇಳಿದ್ದಾರೆ.
ಬೋನಸ್ : ಡಿ.31ಕ್ಕೆ ಕೊನೆಗೊಂಡ ತ್ರೈಮಾಸಿಕದಂತೆ ಸುಮಾರು 5 ರು ಮುಖಬೆಲೆಯ 57,42,36,166 ಷೇರುಗಳನ್ನು ಪಾವತಿಸಲಾಗಿದೆ. 1:1 ಅನುಪಾತದಲ್ಲಿ ಎಲ್ಲರಿಗೂ ಬೋನಸ್ ಘೋಷಿಸಲಾಗಿದೆ.
ಉತ್ತರ ಅಮೆರಿಕದಲ್ಲಿ ಆದಾಯ ಶೇ 0.7, ಯುರೋಪಿನಲ್ಲಿ ಶೇ 6.1ರಷ್ಟು ಕುಂಠಿತಗೊಂಡಿದೆ. ಯುಎಸ್ ಮೂಲದ ಕಾಲಿಡಸ್ ಐಎನ್ ಸಿ ಸಂಸ್ಥೆ ಖರೀದಿ ಡೀಲ್ ಗೆ ಸಹಿ ಹಾಕಿದೆ. ಸುಮಾರು 120 ಮಿಲಿಯನ್ ಡಾಲರ್ ಡೀಲ್ ಇದಾಗಿದೆ. ಏರ್ ವಿಜ್ ನಲ್ಲಿ 2 ಮಿಲಿಯನ್ ಡಾಲರ್ ತೊಡಗಿಸುತ್ತಿದೆ. ಹೊಸ ತಂತ್ರಜ್ಞಾನ ಅಭಿವೃದ್ಧಿಗಾಗಿ ಸುಮಾರು 500 ಮಿಲಿಯನ್ ಡಾಲರ್ ಮೀಸಲಿಟ್ಟಿದೆ ಎಂದು ಪ್ರವೀಣ್ ರಾವ್ ವಿವರಿಸಿದರು.
-
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
IPL 2026: ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
KEA: ರಾಜ್ಯದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ, ಅಂತಿಮ ಅಂಕಪಟ್ಟಿ ಪ್ರಕಟ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ











Click it and Unblock the Notifications