ವಾಹನ ಸವಾರರೇ ಎಚ್ಚರ ಇಂದು ಹಾರ್ನ್ ಮಾಡಬೇಡಿ
ಬೆಂಗಳೂರು, ನ.19: ರಾಜಧಾನಿಯಲ್ಲಿ ಇತ್ತೀಚಿನ ದಿನಗಳಲ್ಲಿ ಅತ್ಯಪರೂಪವಾಗಿರುವ 'No Horn Please' ಎಂಬ ಸೂಚನಾ ಫಲಕಕ್ಕೆ ಮತ್ತೆ ಶುಕ್ರದೆಸೆ ಬಂದಿದೆ. ಹೌದು ವಾಮನ ಆಚಾರ್ಯ ಎಂಬ ವೈದ್ಯರು ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದೇ ತಡ ಒಂದಷ್ಟು ಜನಪರ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ.
ಹಾರ್ನ್ ರಹಿತ ಸೋಮವಾರ: ಮೊನ್ನೆ ದೀಪಾವಳಿ ಸಂದರ್ಭದಲ್ಲಿ ಪಟಾಕಿಗಳ ಸದ್ದಡಗಿಸುವಲ್ಲಿ ಯಶಸ್ವಿಯಾದ ಡಾ. ಆಚಾರ್ಯರು ಈಗ ವಾಹನಗಳು ಬಳಸುವ ಕರ್ಕಶ ಹಾರ್ನ್ ಗಳ ಸದ್ದಡಗಿಸಲು 'ಎಚ್ಚರಿಕೆಯ ಹಾರ್ನ್' ಮೊಳಗಿಸಿದ್ದಾರೆ. ಹಾಗಾಗಿ ಇಂದು ಸೋಮವಾರ ಹಾರ್ನ್ ಮಾಡಲೇಬೇಡಿ ಎಂದು ವಾಹನ ಸವಾರರಿಗೆ ಅಧಿಕೃತವಾಗಿ ಆದೇಶ ಹೊರಡಿಸಿದ್ದಾರೆ.

ಪ್ರಾಯೋಗಿಕವಾಗಿ ಇನ್ನು ಮುಂದೆ ಪ್ರತಿ ಸೋಮವಾರವನ್ನು ಹಾರ್ನ್ ರಹಿತ ದಿನವನ್ನಾಗಿ ಆಚರಿಸಲು ನಿರ್ಧರಿಸಲಾಗಿದೆ. ಕೋರಮಂಗಲ, ಯಶವಂತಪುರ, ಜಯನಗರ ಸೇರಿದಂತೆ ಆರಂಭದಲ್ಲಿ ಕೆಲವು ಆಯ್ದ ಪ್ರದೇಶಗಳಲ್ಲಿ ಈ ನೀತಿ ಜಾರಿಗೆ ಬಂದಿದೆ. ಓದುಗರೇ, ನಿಮ್ಮ reaction ಏನು ಎಂಬುದನ್ನು silent ಆಗಿ ತಿಳಿಸಿ.
ಮುಂದಿನ ದಿನಗಳಲ್ಲಿ ಬೆಂಗಳೂರಿನ ಎಲ್ಲೆಡೆ ಎಲ್ಲ ದಿನಗಳಿಗೂ ಇದನ್ನು ವಿಸ್ತರಿಸುವ ಯೋಜನೆಯಿದೆ. ಸಿಗ್ನಲ್ಗಳಲ್ಲಿ ಡೆಸಿಬಲ್ ಮೀಟರ್ಗಳನ್ನು ಅಳವಡಿಸಲಾಗಿದ್ದು, ಇದರಿಂದ ಡೆಸಿಬಲ್ ಪ್ರಮಾಣ ತಿಳಿಯಬಹುದಾಗಿದೆ. ಕೋರಮಂಗಲ ಪ್ರದೇಶವು ಬೆಂಗಳೂರಿನಲ್ಲೇ ಅತ್ಯಂತ ಶಬ್ದ ಹೊಂದಿರುವ ನಗರ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. 95 ಡೆಸಿಬಲ್ಗಿಂತ ಹೆಚ್ಚು ಡೆಸಿಬಲ್ ಹೊಂದಿದೆ. ಆರೋಗ್ಯಕರ ಶಬ್ದದ ಮಟ್ಟವೆಂದರೆ 55 ಡೆಸಿಬಲ್ಗಿಂತ ಕಡಿಮೆ ಇರಬೇಕು.
'ಅನಗತ್ಯ ಸ್ಥಳಗಳಲ್ಲಿ ವಾಹನ ಸವಾರರು ಹಾರ್ನ್ ಮಾಡಿ ಜನರಿಗೆ ಕಿರಿಕಿರಿ ಉಂಟು ಮಾಡುತ್ತಾರೆ. ಅಲ್ಲದೆ, ಚಿತ್ರ-ವಿಚಿತ್ರ ಶಬ್ದಗಳಿಂದ ನಗರದ ಜನತೆ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಹೀಗಾಗಿ ಅನವಶ್ಯಕವಾಗಿ ಹಾರ್ನ್ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವ ಕಾನೂನು ಜಾರಿ ಮಾಡುವುದರಿಂದ ಎಲ್ಲೆಂದರಲ್ಲಿ ಹಾರ್ನ್ ಮಾಡುವುದು ನಿಯಂತ್ರಣಕ್ಕೆ ಬರಲಿದೆ' ಎಂದು ಡಾ. ಆಚಾರ್ಯರು ಹೇಳಿದ್ದಾರೆ.
'ಶಾಲೆ, ಆಸ್ಪತ್ರೆ, ಬಸ್ ನಿಲ್ದಾಣ ಹಾಗೂ ನ್ಯಾಯಾಲಯದ 100 ಅಡಿ ಸುತ್ತಮುತ್ತ ಹಾರ್ನ್ ಮಾಡುವುದನ್ನು ಸಂಪೂರ್ಣವಾಗಿ ಸ್ಥಗಿತಗೊಳಸಬೇಕು. ರಾತ್ರಿ ವೇಳೆ ಸಂಚಾರ ದಟ್ಟಣೆಯಿಲ್ಲದಿದ್ದರೂ, ಯುವಕರು ಹಾರ್ನ್ ಮಾಡಿ ಕಿರಿಕಿರಿ ಉಂಟು ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ರಾತ್ರಿ ವೇಳೆ ಹಾರ್ನ್ ಮಾಡುವುದನ್ನು ನಿಷೇಧಿಸಬೇಕು. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೂ ಕೆಲವು ಕಾನೂನು ಕ್ರಮ ಕೈಗೊಳ್ಳುವ ಅಧಿಕಾರವಿದ್ದು, ಮುಂದಿನ ದಿನಗಳಲ್ಲಿ ಆ ಅಸ್ತ್ರವನ್ನು ಬಳಸಲಾಗುವುದು' ಎಂದು ಡಾ. ಆಚಾರ್ಯರು ಎಚ್ಚರಿಸಿದ್ದಾರೆ.
'ಆರ್ಟಿಓ ಅಧಿಕಾರಿಗಳಿಗೆ ಹಾರ್ನ್ ಮಾಡುವವರ ವಿರುದ್ಧ ದಂಡ ವಸೂಲಿ ಮಾಡುವಂತೆ ಸಾರಿಗೆ ಇಲಾಖೆಯು ಸೂಚನೆ ನೀಡಿದ್ದು, ತಿಂಗಳಿಗೆ ಇಂತಿಷ್ಟು ದಂಡ ವಸೂಲಿಯ ಟಾರ್ಗೆಟ್ ನೀಡಿದೆ. ದಂಡ ವಸೂಲಿಯಿಂದ ಜನರಿಗೆ ಭಯ ಬಂದು ಹಾರ್ನ್ ಮಾಡುವುದು ಕಡಿಮೆ ಮಾಡಲಿದ್ದಾರೆ' ಎಂದು ತಿಳಿಸಿದ ಅವರು, 'ಹಾರ್ನ್ ಕಡಿಮೆ ಮಾಡುವ ಬಗ್ಗೆ ಜನರಿಗೆ ಅರಿವು ಮೂಡಿಸಲು ಜಾಗೃತಿ ಜಾಥಾ ಹಮ್ಮಿಕೊಂಡಿದ್ದು, ನ. 31ರವರೆಗೆ ಜಾಥಾ ಮುಂದುವರಿಯಲಿದೆ' ಎಂದಿದ್ದಾರೆ.
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ












Click it and Unblock the Notifications