ಗುಜರಾತ್ ಅರ್ಥಿಕ ಜಪ: ಜಪಾನಿಗೆ ಹೊರಟ ಮೋದಿ

ಜಪಾನ್ ಸರಕಾರವೇ ಮೋದಿಗೆ ಆಹ್ವಾನ ನೀಡಿದ್ದು, ಇದೇ ಜುಲೈ 24ರಂದು ನಾಲ್ಕು ದಿನಗಳ ಭೇಟಿಗಾಗಿ ತೆರಳಲಿದ್ದಾರೆ. ನಾನಾ ಕ್ಷೇತ್ರಗಳ ಉದ್ಯಮಿಗಳೂ ಮೋದಿಗೆ ಸಾಥ್ ನೀಡಲಿದ್ದಾರೆ. ಹಲವಾರು ಉದ್ಯಮ ರಂಗಗಳ ಮುಖಂಡರೊಂದಿಗೆ ಮೋದಿ ನಿಯೋಗ ಮಾತುಕತೆ ನಡೆಸಲಿದೆ.
ಚುನಾವಣೆಗೆ ಮುನ್ನ ಉದ್ಯಮಿಗಳನ್ನು ಜಪಾನಿಗೆ ಕೊಂಡೊಯ್ಯುತ್ತಿರುವ ಮೋದಿಗೆ ವರವಾಗಿ ಪರಿಣಮಿಸಲಿದೆ ಎಂದು ವಿಶ್ಲೇಷಿಸಲಾಗಿದೆ. ಗಮನಾರ್ಹವೆಂದರೆ ಭಾರತದ ಯಾವುದೇ ರಾಜ್ಯವೊಂದರ ಮುಖ್ಯಮಂತ್ರಿಯನ್ನು ತನ್ನ ದೇಶಕ್ಕೆ ಆಮಂತ್ರಿಸುತ್ತಿರುವುದು ಬಹುಶಃ ಇದೇ ಮೊದಲು.
ಪ್ರತಿ ವರ್ಷ ಗುಜರಾತಿನಲ್ಲಿ ವಾಡಿಕೆಯಂತೆ ನಡೆಸುತ್ತಿರುವ Vibrant Gujarat Global Investors' Summitನಲ್ಲಿ ಜಪಾನ್ ಪಾಲುದಾರ ರಾಷ್ಟ್ರವಾಗಿ ಪಾಲ್ಗೊಂಡಿತ್ತು. ಆ ಸಂದರ್ಭದಲ್ಲಿ ಗುಜರಾತಿನ ಸರ್ವಾಂಗೀಣ ಅಭಿವೃದ್ಧಿಯನ್ನು ಮೆಚ್ಚಿಕೊಂಡು ಜಪಾನ್ ಈಗ ಖುದ್ದು ಮುಖ್ಯಮಂತ್ರಿಯನ್ನೇ ತನ್ನ ರಾಷ್ಟ್ರಕ್ಕೆ ಆಹ್ವಾನಿಸಿದೆ ಎನ್ನಲಾಗಿದೆ.
ಪ್ರಸ್ತುತ, ಜಪಾನ್ ಸಹಯೋಗದಲ್ಲಿ ಭಾರತ ಸರಕಾರ ಮಹತ್ವಾಕಾಂಕ್ಷಿ Delhi-Mumbai Industrial Corridor (DMIC) ಅಂತಾರಾಜ್ಯ ಯೋಜನೆ ಕಾಮಗಾರಿ ಆರಂಭಿಸಿದೆ. ಯೋಜನೆಯಲ್ಲಿ ಗುಜರಾತ್ ಹೆಚ್ಚಿನ ಭೂಭಾಗವನ್ನು ಹೊಂದಿದೆ.
ಮೋದಿ ಅವರು ಟೋಕಿಯೋ, ಹಮಾಮತ್ಸು, ನಗೋಯಾ, ಒಸಾಕಾ ಮತ್ತೊ ಕೋಬ್ ಪ್ರಾಂತ್ಯಗಳಲ್ಲಿ ಒಟ್ಟು 44 ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಮಾರುತಿ ಸುಜುಕಿ ವ್ಯವಸ್ಥಾಪಕ ನಿರ್ದೇಶಕ ಶಿನ್ಜೋ ನಕಾನಿಷಿ ಅವರನ್ನು ಭೇಟಿ ಮಾಡಲಿದ್ದಾರೆ.
ಟೋಕಿಯೋದಲ್ಲಿ ನಕಾನಿಷಿ ಅವರನ್ನು ಭೇಟಿ ಮಾಡಿದ ನಂತರ ಬುಲ್ಲೆಟ್ ಟ್ರೈನಿನಲ್ಲಿ ನಗೋಯಾಗೆ ಪ್ರಯಾಣಿಸಲಿರುವ ಮೋದಿ, ಹೈಸ್ಪೀಡ್ ಟ್ರೈನಿನ ಬಗ್ಗೆ ಸ್ವಾನುಭವ ಪಡೆಯಲಿದ್ದಾರೆ. ಇದರಿಂದ ಬಹುನಿರೀಕ್ಷಿತ ಅಹಮದಾಬಾದ್-ಮುಂಬೈ-ಪುಣೆ ಮಾರ್ಗ ಮತ್ತು ಅಹಮದಾಬಾದ್-ಧೋಲೆರಾ ಮೆಟ್ರೋ ಬುಲ್ಲೆಟ್ ಟ್ರೈನ್ ಯೋಜನೆಗಳಿಗೆ ಜೀವತುಂಬಿದಂತಾಗುತ್ತದೆ.
ವಾಪಸ್ ಬರುವಾಗ ಗುಜರಾತಿನಲ್ಲಿ 2 ಜಪಾನಿ ಇಂಡಸ್ಟ್ರಿಯಲ್ ಪಾರ್ಕ್ ಗಳ ಸ್ಥಾಪನೆಗೆ ಮೋದಿ ಅನುಮೋದನೆ ಪಡೆಯುವ ಸಾಧ್ಯತೆಗಳು ಹೆಚ್ಚಾಗಿವೆ. ಅಷ್ಟೇ ಅಲ್ಲ. ಬಂದರು ರಾಜ್ಯ ಗುಜರಾತಿನಲ್ಲಿ ಅಗತ್ಯವಾಗಿರುವ ಬಂದರು ಅಭಿವೃದ್ಧಿಗಾಗಿ ಕೋಬ್ ಅತ್ಯಾಧುನಿಕ ಬಂದರು ಪ್ರದೇಶಕ್ಕೆ ಮೋದಿ ಭೇಟಿ ನೀಡಲಿದ್ದಾರೆ. ಜತೆಗೆ, ಭೂಕಂಪ ರಾಜ್ಯವೂ ಆದ ಗುಜರಾತಿಗೆ ಸುನಾಮಿ ರಾಷ್ಟ್ರವಾದ ಜಪಾನಿನಿಂದ ನೈಸರ್ಗಿಕ ವಿಕೋಪಗಳ ನಿರ್ವಹಣೆ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲಿದ್ದಾರೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications