ಒನ್ ಇಂಡಿಯಾ ಪರಿಸರ ಕಾಳಜಿಗೆ ಎಂಎಲ್ಎ ಖುಷಿ
ಬೆಂಗಳೂರು, ಜೂ.5: ಪರಿಸರ ಕಾಳಜಿ, ಸಂರಕ್ಷಣೆಗಾಗಿ 'Go Green' ಅಭಿಯಾನದ ಅಡಿಯಲ್ಲಿ ಜನಪ್ರಿಯ ವೆಬ್ ತಾಣ ಒನ್ ಇಂಡಿಯಾ ತಂಡ ಆಯೋಜಿಸಿದ್ದ ಕಾಲ್ನಡಿಗೆ (walk-a-thon) ಜಾಥಾ ಹಾಗೂ ಸಸಿ ನೆಡುವ ಕಾರ್ಯಕ್ರಮವನ್ನು ಶಾಸಕ ಬಿಎನ್ ವಿಜಯ್ ಕುಮಾರ್ ಅವರು ಮುಕ್ತ ಕಂಠದಿಂದ ಹೊಗಳಿದರು.
ವಿಶ್ವ ಪರಿಸರ ದಿನಾಚರಣೆಯನ್ನು ಜೂ.5, 2012ರಂದು ಅರ್ಥಪೂರ್ಣವಾಗಿ ಆಚರಿಸುವ ಸಲುವಾಗಿ ಕಾಲ್ನಡಿಗೆ ಜಾಥಾ ಹಾಗೂ ಸಸಿ ನೆಡುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರೈಸಲಾಯಿತು.
ಕಾಲ್ನಡಿಗೆ ಜಾಥಾ: ಒನ್ ಇಂಡಿಯಾ (ಗ್ರೇನಿಯಂ ಇನ್ಫಾರ್ಮೇಷನ್ ಟೆಕ್ನಾಲಜಿಸ್ ಪ್ರೈ ಲಿ) ಬೆಂಗಳೂರಿನ ಜಯನಗರದಲ್ಲಿರುವ ಕಚೇರಿಯಿಂದ ಬೆಳಗ್ಗೆ 9 ಗಂಟೆಗೆ ಆರಂಭವಾದ ಕಾಲ್ನಡಿಗೆ ಜಾಥಾ ಕಿತ್ತೂರು ರಾಣಿ ಚೆನ್ನಮ್ಮ ವೃತ್ತ(ಮಾಧವನ್ ಪಾರ್ಕ್), ಕಾಸ್ಮೋಪಾಲಿಟನ್ ಕ್ಲಬ್ ರಸ್ತೆ, ಜಯನಗರ ನಾಲ್ಕನೇ ಬ್ಲಾಕ್, ಮಯ್ಯಾಸ್ ಹೋಟೆಲ್ ದಾಟಿ ಬಾವಿ ಪಾರ್ಕ್ ಬಳಿ ಕೊನೆಗೊಂಡಿತು.
ಪಟ್ಟಾಭಿರಾಮನಗರ ವಾರ್ಡ್ -168ನ ಕಾರ್ಪೋರೇಟರ್ ಸಿಕೆ ರಾಮಮೂರ್ತಿ, ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಶ್ರೀನಿವಾಸ ಜಿ ಕಪ್ಪಣ್ಣ, ಒನ್ ಇಂಡಿಯಾ ಸಿಇಒ ಶ್ರೀರಾಮ್ ಹೆಬ್ಬಾರ್, ಗ್ರೇನಿಯಂ ಇನ್ಫಾರ್ಮೇಷನ್ ಟೆಕ್ನಾಲಜಿಸ್ ಪ್ರೈ ಲಿ ಸಂಸ್ಥೆ ಸಹ ಸ್ಥಾಪಕ, ಮುಖ್ಯಸ್ಥ ಬಿ.ಜಿ. ಮಹೇಶ್ ಹಾಗೂ ಶಾಸಕ ವಿಜಯ್ ಕುಮಾರ್ ಅವರು ಒನ್ ಇಂಡಿಯಾ ಹಸಿರು ಅಭಿಯಾನದಲ್ಲಿ ಪಾಲ್ಗೊಂಡು, ಪಾರ್ಕ್ ನಲ್ಲಿ ಅಲ್ಲಲ್ಲಿ ಸಸಿ ನೆಡವುದರ ಮೂಲಕ ಮುಂದಿನ ಪೀಳಿಗೆಗೆ ಹಸಿರು ಜಗತ್ತನ್ನು ಉಳಿಸುವ ಸಂಕಲ್ಪ ಕೈಗೊಂಡರು.
ವಿಜಯ್ ಕುಮಾರ್: ಪರಿಸರ ಸಂರಕ್ಷಣೆ ಕಾರ್ಯಕ್ರಮ ಎಂದರೆ 10 ರಿಂದ 20 ಜನ ಬಂದರೆ ಹೆಚ್ಚು. ಆದರೆ, ನಿಮ್ಮ ಕಂಪನಿಯ ಕಾಳಜಿ ಕಂಡು ಖುಷಿಯಾಗುತ್ತದೆ. ಮುಖ್ಯವಾಗಿ ಜಯನಗರದಲ್ಲಿ ಮೂರು ಪ್ರಮುಖ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ.
* ಮಳೆ ನೀರು ಕೊಯ್ಲು ಅಳವಡಿಕೆ
* ಸೈಕಲ್ ಟ್ರ್ಯಾಕ್, ಬಳಕೆ ಬಗ್ಗೆ ಪ್ರಚಾರ
* ಪ್ಲಾಸ್ಟಿಕ್ ನಿರ್ಮೂಲನೆ
ಮುಂಗಾರಿನಲ್ಲಿ ಸಸಿ ನೆಡುವ ಯೋಜನೆ : ಸಸಿ ನೆಡುವ ಜಾಗ ತೋರಿಸಿದರೆ ನಾವು ಉಚಿತವಾಗಿ ಬಂದು ಸಸಿ ನೆಟ್ಟು ಸೂಕ್ತ ಮಾರ್ಗದರ್ಶನ ನೀಡುತ್ತೇವೆ. ಬೆಂಗಳೂರು ಸೈಕಲ್ ಪಥ ಯೋಜನೆಯ ಮೊದಲ ಹಂತವು ಶೀಘ್ರದಲ್ಲಿ ಜಯನಗರದಿಂದಲೇ ಆರಂಭವಾಗಲಿದೆ ಇದಕ್ಕೆ ಒನ್ ಇಂಡಿಯಾ ಸಂಸ್ಥೆ ಸಹಕಾರ ಬೇಕು ಎಂದು ಶಾಸಕ ವಿಜಯ್ ಕುಮಾರ್ ಕೇಳಿಕೊಂಡರು.
ಶ್ರೀನಿವಾಸ ಕಪ್ಪಣ್ಣ: ಸಸಿ ನೆಟ್ಟು ಮರೆತುಬಿಡಬಾರದು. ಗಿಡ ಮರ ಬೆಳಸುವುದು ನಮ್ಮ ಸಂಸ್ಕೃತಿಯನ್ನು ಉಳಿಸಿದಂತೆ. ಸಂಸ್ಕೃತಿಯನ್ನು ಉಳಿಸಿ ಬೆಳೆಸಿದಂತೆ ಪರಿಸರ ಸಂರಕ್ಷಣೆಯೂ ಮುಖ್ಯ. ಮರಗಳನ್ನು ಬೆಳೆಸುವುದರ ಜೊತೆಗೆ ನಮ್ಮ ಸಂಸ್ಕೃತಿ ಬೆಳೆಯುತ್ತದೆ ಎಂದರು.
ಒನ್ ಇಂಡಿಯಾ.ಇನ್ ಬಗ್ಗೆ: ಒನ್ ಇಂಡಿಯಾ ಭಾರತದ ಆನ್ ಲೈನ್ ವೆಬ್ ಪೋರ್ಟಲ್ ಆಗಿದೆ. ನೆಟ್ ಕೋರ್ ಇಂಡಿಯಾ ಪ್ರೈ.ಲಿ ಸ್ವಾಮ್ಯದ ಸಂಸ್ಥೆ ಒಡೆತನದಲ್ಲಿರುವ ಈ ವೆಬ್ ಪೋರ್ಟಲ್ ಸುದ್ದಿ ವಿಶ್ಲೇಷಣೆ, ಕ್ರೀಡೆ, ಮನರಂಜನೆ, ವಿಡಿಯೋ ಹಾಗೂ ವರ್ಗೀಕೃತ ಜಾಹೀರಾತು ನೀಡುತ್ತದೆ.
Comscore ಜೂನ್ 2011ರ ವರದಿ ಪ್ರಕಾರ ಭಾರತದ ಸುದ್ದಿ ವಿಭಾಗದಲ್ಲಿ ಒನ್ ಇಂಡಿಯಾ 4ನೇ ಸ್ಥಾನದಲ್ಲಿದೆ. ಎನ್ನಾರೈಗಳಿಗೆ ಒನ್ ಇಂಡಿಯಾ ಎರಡನೇ ಅತಿ ಹೆಚ್ಚು ಇಷ್ಟವಾಗುವ ವೆಬ್ ತಾಣ ಎನಿಸಿದೆ. ಪ್ರತಿದಿನ 500ಕ್ಕೂ ಹೆಚ್ಚು ಲೇಖನಗಳು 70 ಮಿಲಿಯನ್ ಜನರನ್ನು ಜಾಗತಿಕವಾಗಿ ಪ್ರತಿ ತಿಂಗಳು ತಲುಪುವ ಜನಪ್ರಿಯ ತಾಣವಾಗಿದೆ.
ಒನ್ ಇಂಡಿಯಾ ಭಾರತದ ಹಲವು ಭಾಷೆಗಳಲ್ಲಿ ವೆಬ್ ತಾಣಗಳನ್ನು ಹೊಂದಿದೆ. ಅವುಗಳಲ್ಲಿ ಒನ್ ಇಂಡಿಯಾ ಹಿಂದಿ, ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ, ಒನ್ ಇಂಡಿಯಾ ತಮಿಳು,ಒನ್ ಇಂಡಿಯಾ ಕನ್ನಡ,ಒನ್ ಇಂಡಿಯಾ ತೆಲುಗು,ಒನ್ ಇಂಡಿಯಾ ಮಲೆಯಾಳಂ,
ಒನ್ ಇಂಡಿಯಾ.ಇನ್ ಸಮೂಹದಲ್ಲಿ ಆನ್ ಲೈನ್ ಜಾಹೀರಾತು ಪೋರ್ಟಲ್ ಕ್ಲಿಕ್.ಇನ್ ಪ್ರಮುಖವಾಗಿದೆ. ಸಮುದಾಯ ಆಧಾರಿತ ಕ್ಲಿಕ್.ಇನ್ ವೆಬ್ ತಾಣದಲ್ಲಿ ಆನ್ ಲೈನ್ ವರ್ಗೀಕೃತ ಜಾಹೀರಾತುಗಳು, ಉದ್ಯೋಗ, ಮಾರಾಟ, ಸೇವೆಗಳು, ಸ್ಥಳೀಯ ಸಮುದಾಯ, ಕಾರ್ಯಕ್ರಮಗಳ ವಿವರಗಳು ಲಭ್ಯವಿರುತ್ತದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications