ರಾಜ್ಯದಲ್ಲಿ ಅಕ್ಕಿ ಬೆಲೆಯಲ್ಲಿ ಭಾರೀ ಹೆಚ್ಚಳ

ಪ್ರತಿ ಕಿ.ಗ್ರಾಂ. ಮೇಲೆ ಕನಿಷ್ಠವೆಂದರೂ 5 ರು. ಏರಿಸಲಾಗಿದ್ದು, ದಿನನಿತ್ಯದ ಊಟಕ್ಕಾಗಿ ಅನ್ನವನ್ನೇ ಅವಲಂಬಿಸಿರುವ ಬಡವರ ಹೊಟ್ಟೆಯ ಮೇಲೆ ಭಾರೀ ಹೊಡೆತ ನೀಡಲಾಗಿದೆ. ಬುಧವಾರದಿಂದಲೇ ಎಪಿಎಂಸಿಯಲ್ಲಿ ಅಕ್ಕಿಯ ಬೆಲೆಯಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಇದು ದಲ್ಲಾಳಿಗಳನ್ನು ದಾಟಿ ವ್ಯಾಪಾರಿಗಳನ್ನು ಸೇರಿ, ಜನರ ಚೀಲ ಸೇರುವ ಹೊತ್ತಿಗೆ ಎಷ್ಟಾಗಿರುತ್ತದೋ?
ಅಕ್ಕಿಯ ಉತ್ಪಾದನೆ ಕಡಿಮೆಯಾಗಿ, ರಫ್ತು ಹೆಚ್ಚಾಗಿರುವುದರಿಂದ ಅಕ್ಕಿ ಬೆಲೆಯಲ್ಲಿ ಏರಿಕೆಯುಂಟಾಗಿದೆ. ಅಕ್ಕಿ ರಫ್ತನ್ನು ಕೂಡಲೆ ನಿಲ್ಲಿಸಿ ನಮಗೇ ಅಕ್ಕಿ ದಕ್ಕುವಂತೆ ಮಾಡಬೇಕು. ಆಗ ಮಾತ್ರ ಅಕ್ಕಿ ಬೆಲೆ ಇಳಿಯಲು ಸಾಧ್ಯ. ಇಲ್ಲದಿದ್ದರೆ ಬೆಲೆ ಇನ್ನಷ್ಟು ಏರುವ ಸಾಧ್ಯತೆಯಿದೆ ಎಂಬುದು ವರ್ತಕರ ಕಿಡಿನುಡಿ.
ಅಕ್ಕಿ ಬೆಲೆ ಏರಿಕೆಯಿಂದಾಗಿ ಮನೆಗೆ ಬರುವ ಅತಿಥಿಗಳನ್ನು ಊಟಕ್ಕೆ ಕೂಡಿಸಲು ಹಿಂದೆ ಮುಂದೆ ನೋಡುವಂತಾಗಿದೆ. ಹಾಗೆಯೆ, ಅಕ್ಕಿ ಯಾವುದೇ ರೀತಿಯಲ್ಲಿ ಹಾಳಾಗದಂತೆ ನೋಡುವ ಜವಾಬ್ದಾರಿಯೂ ನಾಗರಿಕರ ಮೇಲಿದೆ. ಅದೇ ರೀತಿ, ಸರಕಾರ ಕೂಡ ಈ ನಿಟ್ಟಿನಲ್ಲಿ ಚಿಂತಿಸಬೇಕಾಗಿದೆ. ಇಲ್ಲದಿದ್ದರೆ, ಮೃಷ್ಟಾನ್ನದ ಬದಲು ಚಿತ್ರಾನ್ನವೇ ಗತಿ.
ಅಕ್ಕಿ ಹಾಳಾಗದಂತೆ, ದುಂದಾಗದಂತೆ, ಮಣ್ಣು ಪಾಲಾಗದಂತೆ, 'ಹೆಗ್ಗಣ'ಗಳ ಹೊಟ್ಟೆ ಸೇರದಂತೆ ಮಾಡುವುದು ಹೇಗೆ? ನಮಗೆ ಬರೆದು ತಿಳಿಸಿ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications