ಅಣ್ಣಗಳಿರಾ ಅಕ್ಕಗಳಿರಾ ಇರುವುದೊಂದೇ ಭೂಮಿ

ಪರಿಸರ ಅಂದ್ರೆ ನಮ್ಮ ಸುತ್ತಲೂ ಇರುವ ವಾತಾವರಣ. ಗಿಡ, ಪ್ರಾಣಿ, ಮನುಷ್ಯರು, ಕ್ರಿಮಿ ಕೀಟಗಳು, ಗಾಳಿ, ನೀರು , ಭೂಮಿ...ಹೀಗೆ! ಪರಿಸರ ಪ್ರಕೃತಿಯಲ್ಲಿನ ಚರಾಚರ ಜೀವಿಗಳನ್ನು ಅದ್ಭುತವಾಗಿ ಒಂದಕ್ಕೊಂದು ಬೆಸೆದುಕೊಂಡಿವೆ . ಗಿಡಕ್ಕೊಂದು ಪರಿಸರ ವ್ಯವಸ್ಥೆಯಿರುತ್ತದೆ. ಮನುಷ್ಯನಿಗೊಂದು ಪರಿಸರವಿರುತ್ತದೆ. ಹಾಗೆಯೇ ಉಳಿದ ಜೀವಜಾಲಕ್ಕೆ, ಅದರ ವ್ಯಾಪ್ತಿಯಲ್ಲಿ ಅದು ಬದುಕುತ್ತದೆ. ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಒಂದರ ಮೇಲೆ ಮತ್ತೊಂದು ಆಧಾರ ಪಟ್ಟಿವೆ. ಒಂದು ವ್ಯವಸ್ಥೆಯಲ್ಲಿ ವ್ಯತ್ಯಾಸವಾದರೂ ಅದರ ಪರಿಣಾಮ ಉಳಿದ ಎಲ್ಲ ವ್ಯವಸ್ಥೆಗಳ ಮೇಲೂ ಆಗುತ್ತದೆ.
ಈ ಮನುಷ್ಯ ಎಂಬ ಪ್ರಾಣಿ ಪರಮ ನೀಚ ಕೃತ್ಯಗಳನ್ನು ಮಾಡಿದ್ದಾನೆ. ಮಹಾಸ್ವಾರ್ಥಿ. ಯಾವುದು ಏನಾದರೂ ಸರಿ ತಾನು ಚೆನ್ನಾಗಿದ್ದರೆ ಸಾಕು ಎಂಬ ಮನೋಭಾವ. ತನ್ನ ಹೊಟ್ಟೆ ತುಂಬಿದರೆ ಸಾಕು, ನಾಲ್ಕು ತಲೆಮಾರಿಗೆ ಸರಿಹೋಗುವಷ್ಟು ಸಂಪಾದಿಸಿದರೆ ಅಷ್ಟೇ ಸಾಕು...ಎನ್ನುವ ಸ್ವಾರ್ಥಿ. ದುಷ್ಟ ಆಲೋಚನೆಯಿಂದ ಯುಗ ಯುಗಗಳ ಸ್ಕ್ಲೀನ್ ಪ್ಲೇಯನ್ನು ಮನಬಂದಂತೆ ಬದಲಾಯಿಸಿದ್ದಾನೆ. ಭೂಮಿಯನ್ನು ಭೂಮಾತೆಯಂತೆ ಕಾಣಲೇ ಇಲ್ಲ. ನದಿಗಳನ್ನು ಮುಕ್ತವಾಗಿ ಹರಿಯಲು ಬಿಡಲಿಲ್ಲ. ಚಿಗುರುವ ಗಿಡಗಳನ್ನು ಆರಂಭದಲ್ಲೆ ಚಿವುಟಿ ಹಾಕಿದ್ದಾನೆ.
ಮನುಷ್ಯ ಪ್ರಕೃತಿಯೊಂದಿಗೆ ಯುದ್ಧಕ್ಕೆ ಇಳಿಯಬಾರದು. ಸಹಜೀವನ ಮಾಡಬೇಕು. ತಾನು ಈ ಭೂಮಿಗೆ ಬಂದಿದ್ದು ದೋಚಿಕೊಂಡು ಹೋಗಲು ಅಲ್ಲ. ಕೆಲ ಕಾಲ ಬದುಕಲು. ತಾನು ಬದುಕುತ್ತಾ ತನ್ನ ಸುತ್ತಲೂ ಇರುವ ಜೀವಜಾಲವನ್ನು ಉಳಿಸಲು. ಈ ಸೂಕ್ಷ್ಮವನ್ನು ಅರ್ಥ ಮಾಡಿಕೊಂಡರೆ ಸಾಕು. ಯಾವ ಕಾನೂನು ಬೇಕಾಗಿಲ್ಲ.ಮನಸ್ಸಿರುವ ಪ್ರತಿಯೊಬ್ಬರು ಪರಿಸರವನ್ನು ಕಾಪಾಡುವ ಜವಾಬ್ದಾರಿಯಿಂದ ಮುಂದೆ ಬರಬೇಕು.
ಪರಿಸರದ ಬಗ್ಗೆ ಗಂಭೀರವಾಗಿ ಚಿಂತಿಸುವುದನ್ನು ಬಿಟ್ಟು 'ಭೂಮಿಯ ಉಳಿವಿಗಾಗಿ ಪಣತೊಡೋಣ?' ಇರುವುದೊಂದೇ ಭೂಮಿ ಅದರ ಒಳಿತಿಗೆ ಶ್ರಮಿಸೋಣ. ಇಲ್ಲದಿದ್ದರೆ ನಮ್ಮ ಸಾವಿಗೆ ನಾವೇ ಷರಾ ಬರೆದುಕೊಂಡಂತಾಗುತ್ತದೆ. ಬನ್ನಿ ಭೂಮಿಗೀತ ಹಾಡೋಣ.
ನಿಮ್ಮಿಂದ ಈ ಅಳಿಲು ಸೇವೆ ಸಾಧ್ಯವೆ?
*ಪ್ಲಾಸ್ಟಿಕ್ ಗೆ ಬದಲಾಗಿ ಬಟ್ಟೆ ಚೀಲ ಬಳಸಿ
*ಗಿಡ ನೆಡಿ ಗಿಡ ನೆಡಿ ಮನೆಯ ಮುಂದೊಂದು ಗಿಡ ನೆಡಿ
*ನೀರನು ಹಿತಮಿತವಾಗಿ ಬಳಸಿ
*ಸೈಕಲ್ ಬಳಕೆ ಜನಪ್ರಿಯಗೊಳಿಸಿ
* ಟಿಶ್ಯೂ ಪೇಪರ್ ಬಳಕೆಯನ್ನು ಕಡಿಮೆ ಮಾಡಿ
*ಷವರ್ ಬಾತ್ ಗೆ ಇತಿಶ್ರೀ ಹಾಡಿ ಬಕೆಟ್ ನೀರಿಗೆ ಪ್ರಾಮುಖ್ಯತೆ ಕೊಡಿ
*ಭಾರತೀಯ ಪದ್ಧತಿಯ ಶೌಚಾಲಯದಿಂದ ನೀರಿನ ಉಳಿತಾಯ ಸಾಧ್ಯ
*ರೀಚಾರ್ಚ್ ಮಾಡಿಕೊಳ್ಳಲು ಸಾಧ್ಯವಿರುವ ಬ್ಯಾಟರಿಗಳನ್ನೇ ಬಳಸೋಣ
*ಜಲಚರಗಳಿಗೆ ಹಾನಿಯನ್ನುಂಟು ಮಾಡುವ ಶಾಂಪು ಬಳಕೆಯನ್ನು ನಿಲ್ಲಿಸಿ, ಸೀಗೇಕಾಯಿ, ಅಂಟುವಾಳಕಾಯಿ ಬಳಕೆ ಹೆಚ್ಚಿಸೋಣ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications