ಶುಕ್ರವಾರ ಒನ್ಇಂಡಿಯಾ ಕನ್ನಡದಲ್ಲಿ ವೈನ್ ಪಾರ್ಟಿ

ಜೀವಮಾನದಲ್ಲಿ ಒಂದೇ ಒಂದು ವೈನ್ ಗುಟುಕರಿಸದ, ವೈನ್ ಹೆಸರು ಕೇಳಿಯೇ ವಾಕರಿಸುವ, ವೈನ್ ಕುಡಿಯುವುದೆಂದರೆ ದಾಸ್ಯದ ಸಂಕೇತ ಅಂತ ತಿಳಿದ ಕೋಟೆ ಕಟ್ಟಿ ಮೆರೆದಾಡಿದವರ ಮನೆಯ ಕಪಾಟಿನಲ್ಲಿ ವೈನ್ ಬೆಚ್ಚಗೆ ಕುಳಿತಿರುತ್ತದೆ. ತಾವೇ ಸ್ವತಃ ಕೊಂಡುಕೊಂಡಿರದಿದ್ದರೂ ಉಡುಗೊರೆ ಕೊಟ್ಟಾಗ ಅತ್ಯಂತ ಹೆಮ್ಮೆಯಿಂದ ವೈನ್ ಬಾಟಲಿಯನ್ನು ಸ್ವೀಕರಿಸಿರುತ್ತಾರೆ. 'ನಮ್ಮನೇಲಿ ಓಲ್ಡ್ ವೈನ್ ಇದೆ' ಅಭಿಮಾನದಿಂದ ತೋರಿಸುವವರೂ ಇದ್ದಾರೆ.
ದ್ರಾಕ್ಷಾರಸಕ್ಕೆ ಶತಮಾನಗಳ ಇತಿಹಾಸವಿದೆ. ಸುಮಾರು 8 ಸಾವಿರ ವರ್ಷಗಳ ಹಿಂದೆಯೇ ವೈನ್ ತಯಾರಿಸಲು ಪ್ರಾರಂಭಿಸಲಾಗಿತ್ತಂತೆ. ಸಾವಿರಾರು ವರ್ಷಗಳ ಹಿಂದೆ ರಾಜನೊಬ್ಬನಿಂದ ಅವಮಾನಕ್ಕೊಳಗಾದ ಸುಂದರ ತರುಣಿಯೊಬ್ಬಳು ಆತ್ಮಹತ್ಯೆ ಮಾಡಿಕೊಳ್ಳಲೆಂದು ವಿಷ ಎಂದು ತಿಳಿದಿದ್ದ ದ್ರಾಕ್ಷಾರಸದ ದ್ರಾವಣವನ್ನು ಸೇವಿಸಿ, ಸಾಯುವ ಬದಲಾಗಿ ಅನಿರ್ವಚನೀಯ ಆನಂದವನ್ನು ಅನುಭವಿಸಿದಳಂತೆ. ಇದೇ ಮುಂದೆ ವೈನ್ ಆಗಿ ತಲತಲಾಂತರಗಳಿಂದ ತನ್ನ ಸ್ಥಾನವನ್ನು ಕಾಪಾಡಿಕೊಂಡು ಬಂದಿದೆ.
ಅದರಲ್ಲೂ ಹಳೆ ಮದ್ಯ ಅಥವಾ ಓಲ್ಡ್ ವೈನ್ಗೆ ಎಲ್ಲಿಲ್ಲದ ಬೇಡಿಕೆ. ಅದರಲ್ಲೇನೋ ವಿಶೇಷವಿದೆ. ಹಾಗಾಗಿಯೇ ಸಂತೋಷಗಳಲ್ಲಿ ಮಾತ್ರವಲ್ಲ ದುಃಖದಲ್ಲಿಯೂ ವೈನ್ ತನ್ನ ಸ್ವಂತಿಕೆಯನ್ನು ಉಳಿಸಿಕೊಂಡು ಬಂದಿದೆ. 1787ರಲ್ಲಿ ಸುಮಾರು ಒಂದೂವರೆ ಲಕ್ಷ ಡಾಲರ್ ಬೆಲೆಗೆ ವೈನ್ ಹರಾಜಾಗಿತ್ತಂತೆ. ತಮಾಷೆಯ ಸಂಗತಿಯೆಂದರೆ, ಕಪ್ಪನೆಯ ಬಾಟಲಿಯಲ್ಲಿ ತಣ್ಣಗೆ ಕುಳಿತಿರುವ ವೈನ್ಗಿರುವ ಬೆಲೆ ಬಾಟಲಿಯನ್ನು ಭದ್ರವಾಗಿಸಿದ ಬಿರಡೆಗೂ ಇರುತ್ತದೆ. ಬಿರಡೆ ಜಾರಿ ಬಾಟಲಿಯಲ್ಲಿ ಬಿದ್ದರೆ, ವೈನ್ ಪ್ರತಿಷ್ಠೆಯೂ ಮಣ್ಣುಪಾಲು!
ಜಾಲಿ ಬಾರಿನಲ್ಲಿ ಕುಳಿತ ಪೋಲಿ ಹುಡುಗರಿಗೆ ದ್ರಾಕ್ಷಾರಸದ ಮೇಲೆ ಯಾಕಿಷ್ಟು ಮಮಕಾರ? ಅದನ್ನು ಹನಿಹನಿಯಾಗಿ ಗಂಟಲಿಗಿಳಿಸುವ ಸುಂದರ ತರುಣಿಯರಿಗೇಕಿಷ್ಟು ದುರಹಂಕಾರ? ವೈನ್ನಿಂದ ಆರೋಗ್ಯದ ಮೇಲೆ ಆಗುವ ಪರಿಣಾಮವನ್ನು ತಿಳಿಯದೆ ಕುಡಿತದ ದಾಸರಾಗುವ ಜನರ ಜೀವಕ್ಕೆ ವೈನ್ ಯಾಕೆ ತರುತ್ತದೆ ಸಂಚಕಾರ? ಈ ಮೂರು ಪ್ರಶ್ನೆಗಳಿಗೆ ಉತ್ತರ ಹುಡುಕುವುದು ಬಲು ಕಷ್ಟಕರ.
ಆದರೆ, ಇದೇ ದ್ರಾಕ್ಷಾರಸ ನಮ್ಮ ಜೀವನದಲ್ಲಿ ಹಾಲಿನಲ್ಲಿ ಜೇನು ಬೆರೆತಂತೆ ಬೆರೆತುಬಿಟ್ಟಿದೆ. ಮಡಿಕೇರಿಯಲ್ಲಿ ತಾವೇ ತಯಾರಿಸಿದ ದ್ರಾಕ್ಷಾರಸವನ್ನು ಗಂಡುಹೆಣ್ಣೆನ್ನದೆ ಮನೆಮಂದಿಯೆಲ್ಲ ಕುಳಿತು ಜಠರಕ್ಕಿಳಿಸುತ್ತಾರೆ. ಇನ್ನು ಕ್ರಿಸ್ಮಸ್ ಸಂದರ್ಭದಲ್ಲಿ ಮನೆಗೆ ಬರುವ ಅತಿಥಿಗಳಿಗೆ, ಇಗರ್ಜಿಗೆ ಭೇಟಿ ನೀಡುವ ಯೇಸು ಭಕ್ತಾದಿಗಳಿಗೆ ಹೆಬ್ಬೆಟ್ಟಿನಷ್ಟು ಗಾತ್ರದ ವೈನ್ ಅನ್ನು ಪ್ರಸಾದವೆಂಬಂತೆ ನೀಡುವುದು ಸಂಪ್ರದಾಯ. ಇಷ್ಟಿಷ್ಟೇ ಕುಡಿದರೆ ವೈನ್ ಹೃದಯಕ್ಕೂ ಒಳ್ಳೇದು ಅಂತಾರೆ.
ಇದು ಹೇಗೂ ಇರಲಿ. Old books, old friends and Old wine ಯಾವತ್ತಿಗೂ ಅಮೂಲ್ಯ ಎಂದು ಬಲ್ಲವರು ಹೇಳುತ್ತಲೇ ಇರುತ್ತಾರೆ. ಸ್ನೇಹಿತರ ಮತ್ತು ಪುಸ್ತಕಗಳ ಗೊಡವೆಯನ್ನು ಸದ್ಯಕ್ಕೆ ಬದಿಗಿಟ್ಟು ಒಳ್ಳೆ ಒಳ್ಳೆ ದ್ರಾಕ್ಷಾರಸದ ಬಗ್ಗೆ ಮಾತನಾಡುವುದಕ್ಕೆ ಶುರು ಹಚ್ಚಿಕೊಳ್ಳೋಣ. ಈ ಕ್ರಿಸ್ಮಸ್ ನೆಪದಲ್ಲಿ... ಅಮೃತಕ್ಕೆ ಸಮಾನವಾದ ಐದು ಅದ್ಭುತ ದ್ರಾಕ್ಷಾರಸಗಳ ಬಗೆಗಿನ ಪರಿಚಯಾತ್ಮಕ ಲೇಖನ ಶುಕ್ರವಾರದಿಂದ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications