Tungabhadra Dam Water Level Today | ತುಂಗಭದ್ರಾ ಅಣೆಕಟ್ಟು ಇಂದಿನ ನೀರಿನ ಮಟ್ಟ
ತುಂಗಭದ್ರಾ ಜಲಾಶಯ ಇತಿಹಾಸ
ಶಿವಮೊಗ್ಗ ಜಿಲ್ಲೆಯ ಕೂಡಲಿಯಲ್ಲಿ ಒಂದಾಗುವ ತುಂಗ ಮತ್ತು ಭದ್ರಾ ನದಿ ಒಟ್ಟಾಗಿ ಹರಿಯುತ್ತದೆ. ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ಈ ನದಿಗೆ ಅಣೆಕಟ್ಟು ಕಟ್ಟಲಾಗಿದೆ.
ತುಂಗಾಭದ್ರ ಜಲಾಶಯವನ್ನು 'ಪಂಪ ಸಾಗರ' ಎಂದು ಕರೆಯಲಾಗುತ್ತದೆ. 1953ರಲ್ಲಿ ಈ ಜಲಾಶಯವನ್ನು ನಿರ್ಮಾಣ ಮಾಡಲಾಯಿತು.
ತುಂಗಭದ್ರಾ ಜಲಾಶಯ ಉದ್ದೇಶ:
ವಿವಿಧ ಉದ್ದೇಶಗಳನ್ನು ಮುಂದಿಟ್ಟುಕೊಂಡು ನಿರ್ಮಾಣವಾಗಿದ್ದು ತುಂಗಭದ್ರಾ ಜಲಾಶಯ. ನೀರಾವರಿ, ವಿದ್ಯುತ್ ಉತ್ಪಾದನೆ, ಪ್ರವಾಹ ನಿಯಂತ್ರಣ ಸೇರಿದಂತೆ ವಿವಿಧ ಉದ್ದೇಶ ಹೊಂದಿದೆ. ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಗಳು ಈ ಜಲಾಶಯದ ಲಾಭ ಪಡೆಯುತ್ತವೆ. ಜಲಾಶಯ ಭರ್ತಿಯಾದಾಗ ಕರ್ನಾಟಕದ ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತೆಲಂಗಾಣ ಇದರ ಉಪಯೋಗ ಪಡೆದುಕೊಳ್ಳುತ್ತವೆ. ಬಳ್ಳಾರಿ ಜಿಲ್ಲೆಯಲ್ಲಿರುವ ವಿವಿಧ ಕೈಗಾರಿಕೆಗಳಿಗೆ ಸಹ ಈ ಜಲಾಶಯದ ನೀರನ್ನು ಬಳಕೆ ಮಾಡಲಾಗುತ್ತದೆ.
ತುಂಗಭದ್ರಾ ಜಲಾಶಯ ಸಾಮರ್ಥ್ಯ:
1633 ಅಡಿ ಎತ್ತರವಿರುವ ಜಲಾಶಯ ಭರ್ತಿಯಾದರೆ ನೀರನ್ನು ಹೊರಬಿಡಲಾಗುತ್ತದೆ. 49.50 ಮೀಟರ್ ಎತ್ತರವಿರುವ ಜಲಾಶಯ, ಸುಮಾರು 2,449 ಮೀಟರ್ ಉದ್ದವಿದೆ. ಜಲಾಶಯ ಸಂಪೂರ್ಣವಾಗಿ ಭರ್ತಿಯಾದರೆ 133 ಟಿಎಂಸಿ ಅಡಿ ನೀರನ್ನು ಸಂಗ್ರಹ ಮಾಡಬಹುದಾಗಿದೆ.
ತುಂಗಭದ್ರಾ ಜಲಾಶಯ ಎಲ್ಲಿದೆ?
ಬಳ್ಳಾರಿ ಜಿಲ್ಲೆಯ ಹೊಸಪೇಟೆಯಿಂದ 8 ಕಿ. ಮೀ. ದೂರದಲ್ಲಿರುವ ಜಲಾಶಯ ರಾಜ್ಯದ ಅತಿ ದೊಡ್ಡ ಅಣೆಕಟ್ಟು ಎಂಬ ಹೆಗ್ಗಳಿಕೆ ಪಡೆದಿದೆ. ಜಲಾಶಯದಲ್ಲಿ 33 ಕ್ರೆಸ್ಟ್ ಗೇಟ್ಗಳಿವೆ. ಆಂಧ್ರಪ್ರದೇಶದ ಕರ್ನೂಲ್, ಮೆಹಬೂಬ್ ನಗರ ಮುಂತಾದ ಜಿಲ್ಲೆಗಳಿಗೆ ನೀರಾವರಿಗೆ ಈ ಜಲಾಶಯ ಆಸರೆಯಾಗಿದೆ.
ಮಲೆನಾಡು ಭಾಗದಲ್ಲಿ ಭಾರಿ ಮಳೆಯಾಗಿ ತುಂಗ, ಭದ್ರಾ ನದಿಗಳು ತುಂಬಿ ಹರಿದರೆ ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತದೆ. ಶಿವಮೊಗ್ಗದಲ್ಲಿ ಒಂದಾಗುವ ತುಂಗ-ಭದ್ರಾ ನದಿ ದಾವಣಗೆರೆ, ಹರಿಹರ ಮೂಲಕ ಬಳ್ಳಾರಿಗೆ ಹರಿದು ಬರುತ್ತದೆ.
ತುಂಗಭದ್ರಾ ಜಲಾಶಯ ಸಮೀಪದ ಪ್ರವಾಸಿ ತಾಣ
ಬಳ್ಳಾರಿ ಜಿಲ್ಲೆಯಲ್ಲಿ ಹಲವಾರು ಪ್ರವಾಸಿ ತಾಣಗಳಿವೆ. ದೇಶದ ವಿವಿಧ ರಾಜ್ಯದ ಜನರು ಮಾತ್ರವಲ್ಲ ವರ್ಷದ ಎಲ್ಲಾ ಕಾಲದಲ್ಲಿ ವಿದೇಶಿಯರನ್ನು ಜಿಲ್ಲೆಯಲ್ಲಿ ಕಾಣಬಹುದು. ಯುನೆಸ್ಕೋ ವಿಶ್ವ ಪರಂಪರೆ ತಾಣ ಎಂದು ಘೋಷಣೆ ಮಾಡಿರುವ ಹಂಪಿ ಇದೇ ಜಿಲ್ಲೆಯಲ್ಲಿದೆ.
ವಾರದ ಎಲ್ಲಾ ದಿನಗಳಲ್ಲೂ ಸಹ ತುಂಗಭದ್ರಾ ಜಲಾಶಯ ವೀಕ್ಷಣೆ ಮಾಡಬಹುದಾಗಿದೆ. ಬೆಳಗ್ಗೆ 8.30ರಿಂದ ಸಂಜೆ 6.30ರ ತನಕ ಪ್ರವಾಸಿಗರು ಭೇಟಿ ಕೊಡಬಹುದು. ರಾಜಧಾನಿ ಬೆಂಗಳೂರಿನಿಂದ ಬಸ್, ರೈಲಿನ ಮೂಲಕ ಬಳ್ಳಾರಿಯನ್ನು ತಲುಪಬಹುದಾಗಿದೆ.