IRCTC: ಧಾರ್ಮಿಕ ಸ್ಥಳಗಳಿಗೆ 11-ದಿನಗಳ ಪ್ರವಾಸದ ಪ್ಯಾಕೇಜ್
ಭಾರತೀಯ ರೈಲ್ವೆಯು ಮಧ್ಯ ಭಾರತದಾದ್ಯಂತ ಪ್ರಮುಖ ಧಾರ್ಮಿಕ ಸ್ಥಳಗಳಿಗೆ ಹೊಸ ಪ್ರವಾಸ ಪ್ಯಾಕೇಜ್ ಅನ್ನು ಘೋಷಿಸಿದೆ. IRCTC ಧಾರ್ಮಿಕ ಸ್ಥಳಗಳಿಗಾಗಿ 11-ದಿನಗಳ ಪ್ರವಾಸದ ಪ್ಯಾಕೇಜ್ ಅನ್ನು ನೀಡುತ್ತದೆ. ಈ ಶಿರಡಿ ಮತ್ತು ಜ್ಯೋತಿರ್ಲಿಂಗ ಪ್ರವಾಸಕ್ಕೆ ಪ್ರತಿ ವ್ಯಕ್ತಿಗೆ 18,450 ರೂ. ಮತ್ತು ಸೌಕರ್ಯಕ್ಕೆ 29,620 ರೂ. ವೆಚ್ಚವಾಗುತ್ತದೆ. ಇದು ಉಜ್ಜಯಿನಿಯ ಮಹಾಕಾಳೇಶ್ವರ, ಓಂಕಾರೇಶ್ವರ ಜ್ಯೋತಿರ್ಲಿಂಗ, ದ್ವಾರಕಾಧೀಶ ಮಂದಿರ, ನಾಗೇಶ್ವರ ಜ್ಯೋತಿರ್ಲಿಂಗ ಮತ್ತು ದ್ವಾರಿಕಾದಲ್ಲಿ ಸೋಮನಾಥ ಜ್ಯೋತಿರ್ಲಿಂಗವನ್ನು ವೀಕ್ಷಿಸುವ 11 ದಿನಗಳ ಪ್ರವಾಸವಾಗಿದೆ. ಈ ಪ್ರವಾಸ 10 ರಾತ್ರಿಗಳ ತಂಗುವಿಕೆಯನ್ನು ಒಳಗೊಂಡಿರುತ್ತದೆ. ಮೂರು ಊಟ ಮತ್ತು ರಾತ್ರಿಯ ತಂಗುವಿಕೆಯನ್ನು ಪ್ಯಾಕೇಜ್ನಲ್ಲಿ ಸೇರಿಸಲಾಗಿದೆ.
ಅಕ್ಟೋಬರ್ 10 ರಿಂದ 20 ರವರೆಗೆ ದರ್ಭನಾಗದಿಂದ ಪ್ರಾರಂಭವಾಗುವ ಪ್ರಯಾಣಕ್ಕಾಗಿ ಎಸಿ ಮತ್ತು ನಾನ್ ಎಸಿ ಕೋಚ್ಗಳನ್ನು ಹೊಂದಿರುವ ಸ್ವದೇಶ್ ದರ್ಶನ್ ರೈಲು ಅನ್ನು ಗುರುತಿಸಲಾಗಿದೆ. ಆನ್ಲೈನ್ ಮತ್ತು ಆಫ್ಲೈನ್ ಮೋಡ್ ಮೂಲಕ ಬುಕ್ಕಿಂಗ್ ಮಾಡಬಹುದು.
IRCTC ಮೂಲಕ ರೈಲು ಟಿಕೆಟ್ ಕಾಯ್ದಿರಿಸುವ ಮುನ್ನ ಈ ಸುದ್ದಿ ಓದಿ
ಎಲ್ಲೆಲ್ಲಿ ತಂಗಬಹುದು?
ಪ್ರಯಾಣದ ಪ್ರಕಾರ, ಅಕ್ಟೋಬರ್ 12 ರಿಂದ 14 ರವರೆಗೆ ಉಜ್ಜಯಿನಿಯಲ್ಲಿ ಎರಡು ದಿನ, 15 ರಂದು ಸೋಮನಾಥದಲ್ಲಿ ಒಂದು ದಿನ, 16 ರಿಂದ 17 ರವರೆಗೆ ದ್ವಾರಕಾದಲ್ಲಿ ಎರಡು ದಿನ ಮತ್ತು ಅಕ್ಟೋಬರ್ 18 ಮತ್ತು 19 ರಂದು ಶಿರಡಿ ಮತ್ತು ನಾಸಿಕ್ನಲ್ಲಿ ತಲಾ ಒಂದು ದಿನ ತಂಗಬಹುದು.
ವಿಶೇಷ ಭಾರತ ಗೌರವ್ ಪ್ರವಾಸಿ ರೈಲು
ಕಳೆದ ತಿಂಗಳು IRCTC ಜೂನ್ 21 ರಂದು "ವಿಶೇಷ ಭಾರತ ಗೌರವ್" ಪ್ರವಾಸಿ ರೈಲಿನ ಮೂಲಕ ಮತ್ತೊಂದು 18 ದಿನಗಳ 'ಶ್ರೀ ರಾಮಾಯಣ ಯಾತ್ರೆ' ಘೋಷಿಸಿತ್ತು. ಇದು ಭಗವಾನ್ ರಾಮನ ಜೀವನಕ್ಕೆ ಸಂಬಂಧಿಸಿದ ಸ್ಥಳಗಳನ್ನು ಒಳಗೊಂಡಿತ್ತು. ಇದು ಭಾರತ ಮತ್ತು ನೇಪಾಳವನ್ನು ಸಂಪರ್ಕಿಸುತ್ತದೆ. ಇದು ಅಯೋಧ್ಯೆ, ನಂದಿಗ್ರಾಮ, ವಾರಣಾಸಿ, ಪ್ರಯಾಗ್ರಾಜ್, ಶೃಂಗವೇರಪುರ, ಚಿತ್ರಕೂಟ, ನಾಸಿಕ್, ಹಂಪಿ, ರಾಮೇಶ್ವರಂ, ಕಾಂಚೀಪುರಂ ಮತ್ತು ಭದ್ರಾಚಲಂ ಅನ್ನು ಒಳಗೊಂಡಿದೆ. ಕಳೆದ ಕೆಲವು ವರ್ಷಗಳಿಂದ ರೈಲ್ವೆಯು ದೇಶದ ಸಾಂಸ್ಕೃತಿಕ ಮತ್ತು ಧಾರ್ಮಿಕ ಸ್ಥಳಗಳನ್ನು ಉತ್ತೇಜಿಸಲು ಧಾರ್ಮಿಕ ಪ್ರವಾಸಿ ಪ್ಯಾಕೇಜ್ಗಳನ್ನು ಹೊರತರುತ್ತಿದೆ.
IRCTC: ರದ್ದುಗೊಳಿಸಿದ ರೈಲುಗಳ ಮಾಹಿತಿ ಪರಿಶೀಲನೆ ಹೇಗೆ?
ಟಿಕೆಟ್ ಬೆಲೆ ಎಷ್ಟು?
ಜೂನ್ 21 ರಂದು ದೆಹಲಿಯ ಸಫ್ದರ್ಜಂಗ್ ರೈಲ್ವೇ ನಿಲ್ದಾಣದಿಂದ ಈ ರೈಲು ಹೊರಟಿದೆ. ಈ ರೈಲಿನಲ್ಲಿ 14 ಕೋಚ್ಗಳಿದ್ದು, 11 ಥರ್ಡ್ ಏಸಿ ಕೋಚ್ಗಳು, ಪ್ಯಾಂಟ್ರಿ ಕಾರ್, ರೆಸ್ಟೊರೆಂಟ್ ಕಾರ್ ಮತ್ತು ರೈಲು ಸಿಬ್ಬಂದಿಯ ಬಳಕೆಗಾಗಿ ಪ್ರತ್ಯೇಕ ಕೋಚ್ ಅನ್ನು ಒಳಗೊಂಡಿದೆ. ಈ ರೈಲು 600 ಪ್ರಯಾಣಿಕರನ್ನು ಕೊಂಡೊಯ್ಯುವ ಸಾಮರ್ಥ್ಯ ಹೊಂದಿದೆ.
ಈ ರೈಲು ದೆಹಲಿ ಮಾತ್ರವಲ್ಲದೆ, ಅಲಿಘರ್, ತುಂಡ್ಲಾ, ಕಾನ್ಪುರ ಮತ್ತು ಲಕ್ನೋದಲ್ಲಿಯೂ ಬೋರ್ಡಿಂಗ್ ಪಾಯಿಂಟ್ಗಳನ್ನು ಹೊಂದಿದೆ. ಪ್ರಯಾಣಿಕರು ಯಾವ ನಿಲ್ದಾಣದಿಂದ ಹತ್ತಿದ್ದರೂ ಟಿಕೆಟ್ ಬೆಲೆ ಮಾತ್ರ 62, 370 ರೂಗಳೇ ಆಗಿರುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಪ್ಯಾಕೇಜ್, ಆಹಾರ, ವಸತಿ ಸೌಲಭ್ಯ ಮತ್ತು ವೀಕ್ಷಣೆಯ ಸ್ಥಳಗಳಲ್ಲಿ ಗೈಡ್ಗಳ ಸೇವೆ ಇತ್ಯಾದಿಗಳನ್ನು ಒಳಗೊಂಡಿರುತ್ತದೆ.
ಶಾಖಾಹಾರಿ ಊಟ
ಸುಮಾರು 8000 ಕಿಮೀಗಳ ದೂರವನ್ನು ಕ್ರಮಿಸಿ, ಪ್ರವಾಸದ 18ನೇಯ ದಿನ ದೆಹಲಿಗೆ ಮರಳುವ ಈ ಭಾರತ್ ಗೌರವ್ ಟೂರಿಸ್ಟ್ ಟ್ರೈನ್ನ ಒಳಾಂಗಣ ವಿನ್ಯಾಸವು ರಾಮಾಯಣ ಮಹಾಕಾವ್ಯವನ್ನು ಆಧರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ರೈಲಿನಲ್ಲಿ ಪ್ರವಾಸಿಗಳಿಗೆ, ರೈಲಿನೊಳಗೆ ತಾಜಾವಾಗಿ ತಯಾರಿಸಿದ ಕಟ್ಟುನಿಟ್ಟಾದ ಶಾಖಾಹಾರಿ ಊಟವನ್ನಷ್ಟೇ ನೀಡಲಾಗುವುದು. ರೈಲಿನಲ್ಲಿ ಮಾಹಿತಿ ಮತ್ತು ಮನರಂಜನೆ ವ್ಯವಸ್ಥೆ, ಸಿಸಿಟಿವಿ ಕ್ಯಾಮರಾಗಳು ಹಾಗೂ ಭದ್ರತಾ ಸಿಬ್ಬಂದಿಗಳ ವ್ಯವಸ್ಥೆ ಇರುತ್ತದೆ.