ಕಾರ್ತಿಕ ಸೋಮವಾರ ವಿಶೇಷ: ಎಲ್ಲೂರು ವಿಶ್ವೇಶ್ವರ ದೇಗುಲ
ಸ್ಥಳ ಪುರಾಣ:ಉದ್ಭವ ಮಹಾದೇವನು ಮೊದಲು ಬುಡಕಟ್ಟು ವರ್ಗದ ವೃದ್ದ ಮಹಿಳೆಗೆ ಗೋಚರಿಸಿದ್ದು. ಮಹಿಳೆ ಅಣಬೆ ತೆಗೆಯಲು ಕತ್ತಿಯನ್ನು ಉಪಯೋಗಿಸಿದಾಗ ಆ ಕತ್ತಿ, ಉದ್ಭವ ಲಿಂಗಕ್ಕೆ ತಾಗಿ ರಕ್ತ ಒಸರಿಸಲಾರಂಭಿಸಿತಂತೆ. ವಿಷಯ ತಿಳಿದ ಅರಸ ಮತ್ತು ಆತನ ಗುರುಗಳು ಆಗಮಿಸಿ ಎಳನೀರು ಸುರಿದಾಗ ಮಹಾದೇವ ಗೋಚರಿಸಿದನು. ಕುಂದ ಹೆಗ್ಗಡೆ ಅರಸು ಮನೆತನದ ಭೂರಿ ಕೀರ್ತಿ ಎಂಬ ಅರಸನು ಸಂತಾನ ಅಪೇಕ್ಷೆಯಿಂದ ಮತ್ತು ತನ್ನ ರಾಜ್ಯದಲ್ಲಿ ದೇವಾಲಯವಿಲ್ಲವೆಂಬ ಕಾರಣಕ್ಕೆ ಕಾಶಿಗೆ ಹೋಗಿ ತಪಸ್ಸನ್ನು ಆಚರಿಸಿ ದೇವರನ್ನು ಕರೆತಂದನೆಂದು ಕೂಡ ಇತಿಹಾಸ ಪುಟದಲ್ಲಿ ಗುರುತಿಸಲ್ಪಟ್ಟಿದ್ದಾನೆ.
ಅರಸು ತಪಸ್ಸನ್ನು ಆಚರಿಸಿದರೂ ಮಹಾದೇವ ಮೊದಲು ಗೋಚರಿಸಿದ್ದು ಮಣ್ಣಿನಮಗಳಿಗೆ, ಆಕೆಯಿಂದ "ಎಲ್ಲು" ಎಂದು ಮೊದಲು ಕರೆಯಲ್ಪಟ್ಟಿತು. ಅಂದಿನಿಂದ ಆಕೆಯ ನೆನಪಿಗಾಗಿ ಕ್ಷೇತ್ರಕ್ಕೆ ಎಲ್ಲೂರು ಎಂದಾಯಿತು.
ಎಳನೀರು ಸೇವೆ ವಿಶೇಷ:ಎಲ್ಲೂರು ಸೀಮೆ ವ್ಯಾಪ್ತಿಯಲ್ಲಿ ನಂದಿಕೂರು, ಕುಂಜೂರು, ಕಳತ್ತೂರುಗಳಲ್ಲಿ ಅನುಕ್ರಮವಾಗಿ ದುರ್ಗಾಪರಮೇಶ್ವರಿ, ದುರ್ಗಾ ಮತ್ತು ಮಹಾಲಿಂಗೇಶ್ವರ ದೇವಾಲಯಗಳಿವೆ. ಸೋದೆ ಮಠದ ಶ್ರೀ ವಾದಿರಾಜ ಸ್ವಾಮೀಜಿಯವರು ತಮ್ಮ ತೀರ್ಥ ಪ್ರಬಂಧ ಕಥನದಲ್ಲಿ ಕ್ಷೇತ್ರಕ್ಕೆ ಆಗಮಿಸಿ ಐದು ಶ್ಲೋಕಗಳಿಂದ ಎಲ್ಲೂರು ವಿಶ್ವೇಶ್ವರನನ್ನು ಸ್ತುತಿಸಿದ ಉಲ್ಲೇಖವಿದೆ.
ಕ್ಷೇತ್ರದಲ್ಲಿ ಎಳನೀರು ಸೇವೆ ಬಹಳ ವಿಶೇಷ. ಎಳ್ಳೆಣ್ಣೆ ಸೇವೆ ನೀಡಿದರೆ ಸಕಲ ಗ್ರಹದೋಷ, ದುಷ್ಟಾರಿಷ್ಟ, ಅಪತ್ತು ದೂರವಾಗುತ್ತದೆ ಎನ್ನುವುದು ಭಕ್ತರ ನಂಬಿಕೆ. ರೋಗಭಾದೆ, ಬಾಲಗ್ರಹ ನಿವಾರಣೆಗೆ ತುಲಾಭಾರ ಸೇವೆ ಕೂಡ ಸ್ವಾಮಿಗೆ ಅರ್ಪಣೆಯಾಗುತ್ತಿದೆ.
ಬಿಲ್ಲವ, ಮೊಗವೀರ, ಮಡಿವಾಳ, ದೇವಾಡಿಗ ವಿಶ್ವಕರ್ಮ , ಬಂಟ್ಸ್, ಬ್ರಾಹ್ಮಣ ಸಮಾಜದವರ ಸಹಭಾಗಿತ್ವ ಕ್ಷೇತ್ರದ ವೈಶಿಷ್ಟ್ಯ. ಇತ್ತೀಚಿಗೆ ಕ್ಷೇತ್ರದ ಜೀರ್ಣೋದ್ದಾರ ಹೆಚ್ಚುಕಮ್ಮಿ ಆರು ಕೋಟಿ ರುಪಾಯಿ ವೆಚ್ಚದಲ್ಲಿ 2009 ಮಾರ್ಚ್ ತಿಂಗಳಲ್ಲಿ ವಿಜೃಂಭಣೆಯಿಂದ ನಡೆದಿತ್ತು.
ಕ್ಷೇತ್ರದ
ವಿಳಾಸ:
ಮಹತೋಭಾರ
ವಿಶ್ವೇಶ್ವರ
ದೇವಾಲಯ,
ಎಲ್ಲೂರು
ಅಂಚೆ,
ತಾಲೂಕು
ಮತ್ತು
ಜಿಲ್ಲೆ
-
ಉಡುಪಿ
ದೂ.
ಸ.
0820
-2550365
ಮಾರ್ಗ:
ಉಡುಪಿಯಿಂದ
:
ರಾ.ಹೆ
17
ರಲ್ಲಿ
ಬಂದು
ಕಟಪಾಡಿ,
ಕಾಪು,
ಉಚ್ಚಿಲ
ಬಳಿ
ಎಡಕ್ಕೆ
ತಿರುಗಬೇಕು(ಮದರಂಗಡಿಗೆ
ಹೋಗುವ
ರಸ್ತೆ)
ಮಂಗಳೂರಿನಿಂದ
:
ರಾ.ಹೆ
17
ರಲ್ಲಿ
ಬಂದು
ಸುರತ್ಕಲ್
,
ಮೂಲ್ಕಿ,
ಪಡುಬಿದ್ರೆ
,
ಉಚ್ಚಿಲ
ಬಳಿ
ಬಲಕ್ಕೆ
ತಿರುಗಬೇಕು
(ಮುದರಂಗಡಿಗೆ
ಹೋಗುವ
ರಸ್ತೆ)