ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಲಕಾಡು ಪಂಚಲಿಂಗ ದರ್ಶನಕ್ಕೆ ದಾರಿ

|
Google Oneindia Kannada News

P Manivannan
ಮೈಸೂರು, ನ.12 :ಟಿ. ನರಸೀಪುರ ತಾಲ್ಲೂಕಿನ ತಲಕಾಡಿನಲ್ಲಿ ನಡೆಯಲಿರುವ ಪಂಚಲಿಂಗದರ್ಶನದಲ್ಲಿ ಭಾಗವಹಿಸುವ ಭಕ್ತಾದಿಗಳು ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ನವೆಂಬರ್ 13 ರಿಂದ 27ರವರೆಗೆ ಈ ಕೆಳಕಂಡ ಮಾರ್ಗಗಳಲ್ಲಿ ಏಕಮುಖ ಸಂಚಾರವನ್ನು ಹಾಗೂ ಎಲ್ಲಾ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ಮೈಸೂರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಪಿ ಮಣಿವಣ್ಣನ್ ಅವರು ಆದೇಶ ಹೊರಡಿಸಿದ್ದಾರೆ.

ಏಕಮುಖ ಸಂಚಾರದ ಮಾರ್ಗಗಳು:
ಮೈಸೂರು - ಟಿ. ನರಸೀಪುರ ರಸ್ತೆ ಮಾರ್ಗವಾಗಿ ಬರುವ ವಾಹನಗಳು ವಡೆಯಾಂದಳ್ಳಿಯಲ್ಲಿರುವ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಿಂದ ತಲಕಾಡು - ಪೋಲೀಸ್ ಠಾಣೆ - ಅರ್ಕೇಶ್ವರ ದೇವಸ್ಥಾನ - ವಿಜಾಪುರ - ಟಿ. ಮೇಗಡಹಳ್ಳಿ - ಕಾಳಬಸವನಹುಂಡಿ ಗ್ರಾಮ ಮಾರ್ಗವಾಗಿ ಮುಡುಕುತೊರೆ ಮಲ್ಲಿಕಾರ್ಜುನ ದೇವಸ್ಥಾನದವರೆಗೆ ಏಕಮುಖವಾಗಿ ಸಂಚರಿಸುವುದು.

ಬೆಳಕವಾಡಿ ಮಾರ್ಗವಾಗಿ ಬರುವ ವಾಹನಗಳು ಅರ್ಕೇಶ್ವರ ದೇವಸ್ಥಾನದ ಕಡೆಯಿಂದ ಬಲಕ್ಕೆ ತಿರುಗಿ ವಿಜಾಪುರ ಗ್ರಾಮದ ಮುಖಾಂತರ ಮುಡುಕುತೊರೆಗೆ ಹೋಗುವಂತೆ ಏಕಮುಖವಾಗಿ ಸಂಚರಿಸುವುದು.

ಎಲ್ಲಾ ವಾಹನಗಳ ಸಂಚಾರ ನಿರ್ಬಂದ ಮಾರ್ಗಗಳು:
ತಲಕಾಡು ಪೋಲೀಸ್ ಠಾಣಾ ವೃತ್ತದಿಂದ ಹಳೇಬೀದಿ, ವೈದ್ಯನಾಥೇಶ್ವರ ದೇವಸ್ಥಾನದ ಸುತ್ತಮುತ್ತ ಮತ್ತು ತಲಕಾಡು ಕಾವೇರಿ ಸ್ನಾನಘಟ್ಟದವರೆಗೆ ಹಾಗೂ ತಲಕಾಡು ಪೋಲೀಸ್ ಠಾಣಾ ವೃತ್ತದಿಂದ ಕೆ.ಇ.ಬಿ. ವೃತ್ತದವರೆಗೆ (ತಲಕಾಡು ಮುಖ್ಯ ರಸ್ತೆಯಿಂದ).

(ದಟ್ಸ್ ಕನ್ನಡವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X