ಕರ್ನಾಟಕದ ರಾಜಕೀಯದ ಬಗ್ಗೆ ಅತ್ಯಂತ ನಿಖರವಾಗಿ, ಅಧಿಕಾರಯುತವಾಗಿ ಬರೆಯಬಲ್ಲಂಥ ಕೆಲವೇ ಪತ್ರಕರ್ತರಲ್ಲಿ ಆರ್ ಟಿ ವಿಠ್ಠಲಮೂರ್ತಿ ಒಬ್ಬರು. ಅವರ ಲೇಖನಗಳನ್ನು ಓದುಗರು ಮಾತ್ರ ಅತ್ಯಂತ ಆಸಕ್ತಿಯಿಂದ ಓದುವುದಿಲ್ಲ, ರಾಜಕಾರಣಿಗಳು ಕೂಡ ಅತ್ಯಂತ ಕೂತೂಹಲಭರಿತ ಎಚ್ಚರಿಕೆಯಿಂದ ಓದುತ್ತಾರೆ. ಕರ್ನಾಟಕ ರಾಜಕೀಯದ ಆಳಅಗಲವನ್ನು ಬಲ್ಲ ವಿಠ್ಠಲಮೂರ್ತಿ ಅವರ ಅಂಕಣ ಒನ್ಇಂಡಿಯಾ ಕನ್ನಡದಲ್ಲಿ ಆರಂಭವಾಗಿದೆ. ರಾಜಕೀಯ ಲೇಖನಗಳ ಸಮೃದ್ಧ ಭೋಜನವನ್ನು ಆಸ್ವಾದಿಸಿರಿ.