ನಿಪಾಹ್ ವೈರಸ್ ದಕ್ಷಿಣ ಭಾರತಕ್ಕೆ ದಾಂಗುಡಿಯಿಟ್ಟಿದ್ದು, ಮಿದುಳಿಗೆ ದಾಳಿಯಿಡುವ ಈ ರೋಗ ಕೇರಳದಲ್ಲಿ ಹಲವರನ್ನು ಬಲಿ ತೆಗೆದುಕೊಂಡಿದೆ. ಹಣ್ಣು ತಿನ್ನುವ ಬಾವಲಿಯಿಂದ ಹರಡುವ ಈ ರೋಗ ಕರ್ನಾಟಕಕ್ಕೂ ಕಾಲಿಟ್ಟಿದ್ದು, ಮಣಿಪಾಲ್ ಆಸ್ಪತ್ರೆಯ ವೈದ್ಯರು ಔಷಧಿಯನ್ನು ಕಂಡುಹಿಡಿದಿದ್ದಾರೆ. ಆದರೂ, ರೋಗ ಬಂದ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತ, ರೋಗ ಬರುವ ಮುನ್ನವೇ ಎಚ್ಚರಿಕೆ ತೆಗೆದುಕೊಳ್ಳುವುದು ಉತ್ತಮ.