ಸಿಂಗಾಪುರ, ಏಪ್ರಿಲ್ 11 : ಲಂಡನ್ ಒಲಿಂಪಿಕ್ ಕಂಚು ವಿಜೇತೆ ಭಾರತದ ಸ್ಟಾರ್ ಶೆಟ್ಲರ್ ಸೈನಾ ನೆಹ್ವಾಲ್ ಮಂಗಳವಾದಿಂದ (ಏಪ್ರಿಲ್ 11) ಆರಂಭಗೊಳ್ಳುತ್ತಿರುವ ಸಿಂಗಾಪುರ ಸೂಪರ್ ಸೀರಿಸ್ ಬ್ಯಾಡ್ಮಿಂಟನ್ ನಿಂದ ಹಿಂದೆ ಸರಿದಿದ್ದಾರೆ.
ಹೀಗಾಗಿ ರಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿ ವಿ ಸಿಂಧು ಮೇಲೆ ಈ ಟೂರ್ನಿಯಲ್ಲಿ ಅಪಾರ ನಿರೀಕ್ಷೆ ಇಡಲಾಗಿದೆ.[ಇಂಡಿಯನ್ ಓಪನ್ : ಸೈನಾ ನೆಹ್ವಾಲ್ ವಿರುದ್ಧ ಸಿಂಧುಗೆ ಭರ್ಜರಿ ಜಯ]
ಇಂಡಿಯಾ ಓಪನ್ನಲ್ಲಿ ಪ್ರಶಸ್ತಿ ಗೆದ್ದು ವೃತ್ತಿ ಬದುಕಿನಲ್ಲಿ ಮೊದಲ ಬಾರಿಗೆ ವಿಶ್ವ ಕ್ರಮಾಂಕಪಟ್ಟಿಯಲ್ಲಿ ಎರಡನೇ ಸ್ಥಾನ ಕ್ಕೇರಿರುವ ಸಿಂಧುಗೆ ಜಪಾನ್ನ ನೊಜೊಮಿ ಒಕುಹರಾ ಸವಾಲು ಎದುರಾಗಲಿದೆ.[ಶೈನಿಂಗ್ 'ಸಿಂಧು' ಇಂಡಿಯನ್ ಓಪನ್ ಫೈನಲ್]
ಬಿಡುವಿಲ್ಲದ ವೇಳಾಪಟ್ಟಿಯಿಂದ ಬಳಲಿರುವ ಸೈನಾ, ಮುಂಬರುವ ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್ ಷಿಪ್ ಗೆ ಸಿದ್ಧತೆ ಕೈಗೊಳ್ಳುವ ಉದ್ದೇಶದಿಂದ ಸೈನಾ ಈ ಟೂರ್ನಿಯಲ್ಲಿ ಆಡದಿರಲು ನಿರ್ಧರಿಸಿದ್ದಾರೆ.