ರಾಂಚಿ, ಆಗಸ್ಟ್ 09 : ರಾಷ್ಟ್ರೀಯ ಮಟ್ಟದ ಕುಸ್ತಿ ಪಟು ವಿಶಾಲ್ ಕುಮಾರ್ ವರ್ಮಾ ಅವರು ರಾಂಚಿಯ ಜೈಪಾಲ್ ಸಿಂಗ್ ಸ್ಟೇಡಿಯಂನಲ್ಲಿ ದುರಂತ ಸಾವನ್ನಪ್ಪಿದ್ದಾರೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಗೆ ವಿಶಾಲ್ ಅವರು ತುತ್ತಾದರು.
ಜಾರ್ಖಂಡ್ ರಾಜ್ಯ ಕುಸ್ತಿ ಅಸೋಸಿಯೇಷನ್ ಕಚೇರಿಯಲ್ಲಿರುವ ಕ್ರೀಡಾಂಗಣ ಕಟ್ಟಡದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಅವರು ಸಾವನ್ನಪ್ಪಿರುವುದಾಗಿ ಟೆಲಿಗ್ರಾಫ್ ವರದಿ ಮಾಡಿದೆ.
ವಿಶಾಲ್ ಕುಮಾರ್ ವರ್ಮಾ ಅವರ ಕುಟುಂಬಕ್ಕೆ ಜಾರ್ಖಂಡ್ ರಾಜ್ಯ ಕುಸ್ತಿ ಸಂಸ್ಥೆಯಿಂದ ಒಂದು ಲಕ್ಷ ಮಧ್ಯಂತರ ಪರಿಹಾರವನ್ನು ಘೋಷಿಸಲಾಗಿದೆ. ಹೆಚ್ಚಿನ ಪರಿಹಾರಕ್ಕಾಗಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸುವುದಾಗಿ ತಿಳಿಸಿದೆ. ವಿಶಾಲ್ ಅವರು 2005 ರಲ್ಲಿ ಕುಸ್ತಿ ವೃತ್ತಿಜೀವನವನ್ನು ಪ್ರಾರಂಭಿಸಿದರು. ಇವರು ನಾಲ್ವರು ಸಹೋದರಿಯರನ್ನು ಹೊಂದಿದ್ದಾರೆ.