ಅಹ್ಮದಾಬಾದ್, ಅಕ್ಟೋಬರ್ 22 : ಕಬಡ್ಡಿ ವಿಶ್ವಕಪ್ ನಲ್ಲಿ ಭಾರತ ಹ್ಯಾಟ್ರಿಕ್ ಸಾಧಿಸಿದೆ. ಬಲಿಷ್ಠ ತಂಡವಾದ ಇರಾನ್ ಅನ್ನು ಸದೆಬಡಿದು ಕಬಡ್ಡಿ ವಿಶ್ವಕಪ್ಪನ್ನು ಮೂರನೇ ಬಾರಿ ಭಾರತ ಎತ್ತಿಹಿಡಿದಿದೆ.
ವಿಶ್ವ ಕಬಡ್ಡಿಯಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರಿಸಿರುವ ಭಾರತ, ಮಧ್ಯದಲ್ಲಿ ಹಿನ್ನಡೆ ಕಂಡರೂ ಅದ್ಭುತವಾಗಿ ಚೇತರಿಸಿಕೊಂಡು 38-29 ಅಂಕಗಳಿಂದ ಇರಾನ್ ತಂಡದ ವಿರುದ್ಧ ಜಯಭೇರಿ ಬಾರಿಸಿದೆ.
ಭಾರತಕ್ಕೆ 12 ಅಂಕಗಳನ್ನು ಗಳಿಸಿಕೊಟ್ಟು ಅಜಯ್ ಠಾಕೂರ್ ಅವರು ಈ ಫೈನಲ್ ಪಂದ್ಯದ ಸ್ಟಾರ್ ಪರ್ಫಾರ್ಮರ್ ಆಗಿದ್ದಾರೆ. ಮಧ್ಯಾಂತರದಲ್ಲಿ ಇರಾನ್ 18-13 ಅಂಕಗಳ ಅಂತರದಿಂದ ಮುನ್ನಡೆ ಸಾಧಿಸಿ ಅಚ್ಚರಿ ಮೂಡಿಸಿತ್ತು.
"ಕಬಡ್ಡಿಯಲ್ಲಿ ಭಾರತ ಯಾವತ್ತಿದ್ದರೂ ನಂಬರ್ 1. ಈ ಗೆಲುವು ನನಗೆ ವೈಯಕ್ತಿಕವಾದಿ ಭಾರೀ ಸಂತಸ ತಂದುಕೊಟ್ಟಿದೆ" ಎಂದು ಅಜಯ್ ಠಾಕೂರ್ ವಿಶ್ವಕಪ್ ಎತ್ತಿಹಿಡಿದ ನಂತರ ಅನಿಸಿಕೆಗಳನ್ನು ಹಂಚಿಕೊಂಡರು.