ನವದೆಹಲಿ, ಮೇ 11: ಕರ್ನಾಟಕದ ಹೆಮ್ಮೆಯ ಹಾಕಿ ಪಟು ವಿಆರ್ ರಘುನಾಥ್ ಅವರ ಹೆಸರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಿ, ಕೇಂದ್ರ ಸರ್ಕಾರಕ್ಕೆ ಪಟ್ಟಿಯನ್ನು ಹಾಕಿ ಇಂಡಿಯಾ ಕಳಿಸಿದೆ.
ವಿಆರ್ ರಘುನಾಥ್ ಅಲ್ಲದೆ ಭಾರತೀಯ ಮಹಿಳಾ ಹಾಕಿ ತಂಡದ ನಾಯಕಿ ರಿತು ರಾಣಿ, ಧರಮ್ ವೀರ್ ಸಿಂಗ್ ಅವರ ಹೆಸರು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. [ಕ್ರೀಡಾಪಟುಗಳಿಗೆ ಅಭಯ ನೀಡಿದ ಸಿಎಂ ಸಿದ್ದರಾಮಯ್ಯ]