ಬೆಂಗಳೂರು, ಮಾರ್ಚ್ 24: ಹತ್ತು ಹಲವು ರೋಚಕ ಪಂದ್ಯಗಳಿಗೆ ಸಾಕ್ಷಿಯಾಗಿರುವ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಮತ್ತೊಂದು ರೋಚಕ ಪಂದ್ಯವನ್ನು ಕ್ರಿಕೆಟ್ ಅಭಿಮಾನಿಗಳು ಕಣ್ತುಂಬಿಕೊಂಡರು.
ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ | ಟೂರ್ನಿಗೆ ಫುಲ್ ಗೈಡ್
ವಿಶ್ವ ಟಿ20 ಸೂಪರ್ 10ರ ಹಂತದ ಲೀಗ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ 1 ರನ್ ಗಳ ರೋಚಕ ಜಯ ದಾಖಲಿಸಿತು. ಎಲ್ಲರೂ ಹಾರ್ದಿಕ್ ಪಾಂಡ್ಯ ಎಸೆದ ಕೊನೆ ಓವರ್ ಬಗ್ಗೆಯೇ ಚರ್ಚಿಸುತ್ತಿದ್ದಾರೆ. ಈ ಓವರ್ ನ ವಿಡಿಯೋ, ನಂತರ ವಿಜಯೋತ್ಸವದ ಚಿತ್ರಗಳು ಇಲ್ಲಿವೆ.['ಕ್ಯಾಪ್ಟನ್ ಕೂಲ್' ಧೋನಿಗೆ ಸಿಟ್ಟು ಬಂದಿದ್ದು ಏಕೆ?]
2007ರ ವಿಶ್ವ ಕಪ್ ಟಿ20ಯ ಕೊನೆ ಓವರ್ ನಲ್ಲಿ ಪಾಕಿಸ್ತಾನ ವಿರುದ್ಧ ಗೆಲುವು ತಂದುಕೊಟ್ಟ ಜೋಗಿಂದರ್ ಶರ್ಮ ಅವರನ್ನು ನೆನಪಿಸಿದ ಹಾರ್ದಿಕ್ ಪಾಂಡ್ಯ ಹೊಸ ಹೀರೋ ಎಂದು ಅನೇಕರು ಕೊಂಡಾಡಿದ್ದಾರೆ. [ಪಾಂಡ್ಯಾಗೆ ಧೋನಿ ನೀಡಿದ್ದ ಸಲಹೆ ಏನು?]
ಯಾರು ಏನೇ ಹೇಳಲಿ ಬೆಂಗಳೂರಿನಲ್ಲಿ ಪಾಂಡ್ಯ ಎಸೆದ 20ನೇ ಓವರ್ ಸಕತ್ ರೋಚಕವಾಗಿದ್ದಂತೂ ಸತ್ಯ. ಈ ಓವರ್ ನ ರೀವೆಂಡ್ ಇಲ್ಲಿದೆ. [ಗವಾಸ್ಕರ್ ವಿರುದ್ಧ ಧೋನಿ, ಬಿಗ್ ಬಿ ಕಿಡಿಕಾರಿದ್ದೇಕೆ?]
* ಪಂದ್ಯ ಗೆಲ್ಲಲು 147 ರನ್ ಗುರಿ ಪಡೆದಿದ್ದ ಬಾಂಗ್ಲಾದೇಶ ಕೊನೆ ಓವರ್ ನಲ್ಲಿ 11 ರನ್ ಗಳಿಸಲು ಗುರಿ ಪಡೆದಿತ್ತು.
* ಹಾರ್ದಿಕ್ ಪಾಂಡ್ಯ ಕೊನೆ ಓವರ್ ನಲ್ಲಿ ನೀಡಿದ ರನ್: 1,4,4, ವಿಕೆಟ್, ವಿಕೆಟ್, ವಿಕೆಟ್.
* ಬಾಂಗ್ಲಾದೇಶ 145/9 ಕ್ಕೆ ನಿಯಂತ್ರಿಸಿದ ಭಾರತದಿಂದ ವಿಜಯೋತ್ಸವ.[ಗೆಲ್ಲುವುದಕ್ಕೆ ಮುಂಚೆ ಸಂಭ್ರಮಿಸಿದ ರಹೀಮ್ಗೆ ರೈನಾ ಪಂಚ್]
19.1: ಮಹಮದುಲ್ಲಾಗೆ ಪಾಂಡ್ಯ ನೇರವಾದ ಎಸೆತ,ಕವರ್ಸ್ ವಿಭಾಗಕ್ಕೆ ತಳ್ಳಿ 1ರನ್ ಗಳಿಕೆ.
19.2: ಮುಷ್ಫಿಕರ್ ಗೆ ಪಾಂಡ್ಯರಿಂದ ನಿಧಾನಗತಿಯ ಶಾರ್ಟ್ ಆಫ್ ಲೆನ್ತ್ ಎಸೆತ, ಕವರ್ಸ್ ಮೇಲೆ ಬಾರಿಸಿದ ಮುಷ್ಫಿಕರ್ ಗೆ 4 ರನ್. ಬಾಂಗ್ಲಾಕ್ಕೆ ಗೆಲ್ಲಲು 4 ಎಸೆತಗಳಲ್ಲಿ 6ರನ್ ಬೇಕಿತ್ತು.
19.3: ಮುಷ್ಫಿಕರ್ ಗೆ ಪಾಂಡ್ಯರಿಂದ ಎಸೆತ, ಸ್ಕೂಪ್ ಹೊಡೆತ ಬಾರಿಸಿ ಧೋನಿ ಹಿಂಬದಿಯಲ್ಲಿ ಸಾಗಿದ ಚೆಂಡು ಬೌಂಡರಿ ಗೆರೆ ದಾಟಿತು.
19.4: ಈ ಬಾರಿ ನಿಧಾನಗತಿಯ ಶಾರ್ಟ್ ಲೆನ್ತ್ ಎಸೆತ ಹಾಕಿದ ಪಾಂಡ್ಯಗೆ ಯಶಸ್ಸು, ಡೀಪ್ ಮಿಡ್ ವಿಕೆಟ್ ಕ್ಷೇತ್ರದಲ್ಲಿ ಸಿಕ್ಸ್ ಎತ್ತಲು ಹೋದ ಮುಷ್ಫಿಕರ್ ಅವರು ಶಿಖರ್ ಧವನ್ ಗೆ ಕ್ಯಾಚಿತ್ತು ಔಟ್.
19.5: ಈ ನಡುವೆ ಕ್ರೀಸ್ ಬದಲಾಯಿಸಿದ್ದ ಮಹಮದ್ದುಲ್ಲಾ ಬ್ಯಾಟಿಂಗ್, ಫುಲ್ ಟಾಸ್ ಎಸೆತವನ್ನು ಸ್ಕ್ವೇರ್ ಲೆಗ್ ಕ್ಷೇತ್ರದಲ್ಲಿ ಬಾರಿಸಲು ಹೋಗಿ ಜಡೇಜ ಹಿಡಿದ ಉತ್ತಮ ಕ್ಯಾಚಿಗೆ ಬಲಿ.
19.6 : ಕೊನೆ ಎಸೆತದಲ್ಲಿ 2 ರನ್ ಬೇಕಿತ್ತು. ಯಾರ್ಕರ್ ಹಾಕಬೇಡ ಎಂದು ಧೋನಿಯಿಂದ ಪಾಂಡ್ಯಗೆ ಸಲಹೆ. ಬೌನ್ಸರ್ ಹಾಕುವ ಬಗ್ಗೆ ಚಿಂತನೆ ನಡೆದಿತ್ತು ಎಂದು ಅಶ್ವಿನ್ ಹೇಳಿಕೆ. ಪಾಂಡ್ಯ ಎಸೆತವನ್ನು ಚೆಚ್ಚಲು ಆಗದೆ ರನ್ ಕದಿಯಲು ಯತ್ನಿಸಿದ ಮುಷ್ತಫಿಜುರ್ ರಹಮಾನ್ ರನೌಟ್. ಭಾರತಕ್ಕೆ 1 ರನ್ ಜಯ. [ಕೊನೆ ಓವರ್ ವಿಡಿಯೋ ನೋಡಿ]