ಮುಂಬೈ, ಜುಲೈ 19: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರನ್ನು ಟೀಂ ಇಂಡಿಯಾದ ಮಾರ್ಗದರ್ಶಕರಾಗಿ ಹೊಂದಲು ಮುಖ್ಯ ಕೋಚ್ ರವಿಶಾಸ್ತ್ರಿ ಬಯಸಿದ್ದಾರೆ.
ಬೌಲಿಂಗ್ ಕೋಚ್ ಆಗಿ ಭರತ್ ಅರುಣ್ ಹಾಗೂ ಫೀಲ್ಡಿಂಗ್ ಕೋಚ್ ಆಗಿ ಶ್ರೀಧರ್ ಅವರನ್ನು ಪಡೆದ ಬಳಿಕ ಶಾಸ್ತ್ರಿ ಅವರು ತಮ್ಮ ತಂಡಕ್ಕೆ ಬಲ ನೀಡಲು ಮಾಸ್ಟರ್ ಬ್ಲಾಸ್ಟರ್ ಬೇಕು ಎಂದು ಬಿಸಿಸಿಐ ಮುಂದೆ ಬೇಡಿಕೆ ಇಟ್ಟಿದ್ದಾರೆ ಎಂಬ ಸುದ್ದಿ ಬಂದಿದೆ.