ತ್ರಿಶತಕ ವೀರ ಕರುಣ್ ನಾಯರ್
ತ್ರಿಶತಕ ವೀರ ಕರುಣ್ ನಾಯರ್ ಅವರು ಆಡುವ XI ನಲ್ಲಿ ಸ್ಥಾನಕ್ಕಾಗಿ ಅಜಿಂಕ್ಯರಹಾನೆ ಜತೆ ಪೈಪೋಟಿ ನಡೆಸಿದ್ದಾರೆ. ಕರ್ನಾಟಕ ಪರ ಆಡುವ ಕರುಣ್ ಅವರಿಗೆ ಬೆಂಗಳೂರಿನ ಪಿಚ್ ಬಗ್ಗೆ ಅರಿವಿರುವುದರಿಂದ ಕರುಣ್ ಗೆ ಆದ್ಯತೆ ನೀಡುವ ಸಾಧ್ಯತೆಯಿದೆ.
ಕೊಹ್ಲಿಗೆ ತಂಡದ ಬಗ್ಗೆ ಚಿಂತೆ
ನಾಯಕ ವಿರಾಟ್ ಕೊಹ್ಲಿ ಅವರು ವೈಯಕ್ತಿಕ ಪ್ರದರ್ಶನದ ಜತೆಗೆ ತಂಡವನ್ನು ಮುನ್ನಡೆಸುವಲ್ಲಿ ಸ್ವಲ್ಪ ಎಡವಿದ್ದು ಪುಣೆ ಪಂದ್ಯದಲ್ಲಿ ಬಹಿರಂಗವಾಯಿತು. ಬ್ಯಾಟಿಂಗ್ ವೈಫಲ್ಯದ ಜತೆಗೆ ಬೌಲಿಂಗ್ ಕೂಡಾ ಮೊನಚು ಕಳೆದುಕೊಂಡಿತ್ತು. ವಿಶ್ವದ ನಂ.1 ತಂಡ ಎನಿಸಿಕೊಳ್ಳಲು ಇನ್ನಷ್ಟು ಶ್ರಮದ ಅಗತ್ಯವಿದೆ.
ಸಂಗೀತ ಕೇಳುತ್ತಿರುವ ಸ್ಮಿತ್
ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್ ಸ್ಮಿತ್ ಅವರು ಸಂಗೀತ ಕೇಳುತ್ತಾ ಹೊಟೆಲ್ ಕಡೆಗೆ ಬಸ್ ನಲ್ಲಿ ತೆರಳುತ್ತಿದ್ದಾರೆ. ಸ್ಮಿತ್ ಹಿಂಬದಿಯಲ್ಲಿ ಕೋಚ್ ಡರೇನ್ ಲೆಹ್ಮಾನ್ ಅವರನ್ನು ಕಾಣಬಹುದು.
ರಾಹುಲ್ ಬಗ್ಗೆ ನಿರೀಕ್ಷೆ
ಟೀಂ ಇಂಡಿಯಾ ಆರಂಭಿಕ ಆಟಗಾರರ ಸಮಸ್ಯೆ ಹೆಚ್ಚಾಗಿದ್ದು, ಇಬ್ಬರು ಪ್ರತಿಭಾವಂತರಿದ್ದರೂ ಉತ್ತಮ ಜೊತೆಯಾಟ ಕಾಣಲು ಸಾಧ್ಯವಾಗುತ್ತಿಲ್ಲ. ಮೇಲಾಗಿ ಕೆಎಲ್ ರಾಹುಲ್ ಅವರಿಗೆ ಭುಜನೋವು ಬೇರೆ ಮತ್ತೆ ಕಾಣಿಸಿಕೊಂಡಿದೆ. ಅಭಿನವ್ ಮುಕುಂದ್ ಅವರನ್ನು ಬದಲಿ ಆರಂಭಿಕ ಆಟಗಾರರಾಗಿ ತಂಡದಲ್ಲಿ ಉಳಿಸಿಕೊಳ್ಳಲಾಗಿದೆ.
ಬೆಟ್ಟ ಹತ್ತಿ ಇಳಿದ ಭಾರತ ತಂಡ
ಬೆಂಗಳೂರಿಗೆ ಬರುವುದಕ್ಕೂ ಮುನ್ನ ಪುಣೆಯ ಹಾದಿಯಲ್ಲಿ ಬೆಟ್ಟವನ್ನು ಹತ್ತಿಳಿದ ಟೀಂ ಇಂಡಿಯಾ ಸದಸ್ಯರು.