ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ ಸೋತಿದ್ದು ಸಂತೋಷವಾಗಿದೆ ಎಂದ ಬಾಂಗ್ಲಾ ಕ್ರಿಕೆಟಿಗ

ಮುಂಬೈ, ಏಪ್ರಿಲ್, 01: ಈ ಬಾಂಗ್ಲಾದೇಶದವರಿಗೆ ಅದು ಏನಾಗಿದೆಯೋ ಗೊತ್ತಿಲ್ಲ. ಹಿಂದೆ ಎಂಎಸ್ ಧೋನಿಯನ್ನು ಅವಹೇಳನ ಮಾಡಿದ್ದ ಬಾಂಗ್ಲಾದೇಶಿಗರು ಕ್ರಿಕೆಟ್ ಅಭಿಮಾನಿಗಳಿಂದ ಟೀಕೆಗೆ ಒಳಗಾಗಿದ್ದರು. ಇದೀಗ ಉಗಿಸಿಕೊಳ್ಳುವ ಸರದಿ ಬಾಂಗ್ಲಾ ವಿಕೆಟ್ ಕೀಪರ್ ಮುಶ್ಫಿಕರ್ ರಹೀಮ್ ಅವರದ್ದು.

ಟಿ-20 ವಿಶ್ವಕಪ್ ಸೆಮಿಫೈನಲ್ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ ಸೋಲುತ್ತಿದ್ದಂತೆ ಬಾಂಗ್ಲಾ ವಿಕೆಟ್ ಕೀಪರ್ ಮುಶ್ಫಿಕರ್ ರಹೀಮ್ ವಿವಾದಾತ್ಮಕ ಟ್ವೀಟ್ ಮಾಡಿದ್ದಲ್ಲದೇ ಟೀಕೆ ತಡೆಯಲಾಗದೆ ನಂತರ ಡಿಲೀಟ್ ಮಾಡಿದ್ದಾರೆ.[ವಿಶ್ವ ಟಿ20: ಟೀಂ ಇಂಡಿಯಾ ಸೋಲಿಸಿ, ಫೈನಲಿಗೆ ವಿಂಡೀಸ್ ಲಗ್ಗೆ]

bangladesh

ಕ್ರೀಡಾ ಸ್ಫೂರ್ತಿಯನ್ನು ಸಂಪೂರ್ಣವಾಗಿ ಮರೆತ ಬಾಂಗ್ಲಾ ವಿಕೆಟ್ ಕೀಪರ್ " ನಿಜವಾದ ಸಂತೋಷ ಅಂದರೆ ಇದು....ಹಾ ಹಾ ಹಾ, ಭಾರತ ಸೆಮಿಫೈನಲ್ ನಲ್ಲಿ ಸೋತಿತು.." ಎಂದು ಟ್ವಿಟ್ ಮಾಡಿದ್ದರು. ಎಂಎಸ್ ಧೋನಿ ಪಂದ್ಯದ ನಂತರ ಮಾತನಾಡುತ್ತಿದ್ದ ಟಿವಿ ಇಮೇಜ್ ನ್ನು ಇದಕ್ಕೆ ಸೇರಿಸಿ ಟ್ವೀಟ್ ಮಾಡಿದ್ದರು.[ಧೋನಿ ರುಂಡ ಹಿಡಿದು ಹುಚ್ಚಾಟವಾಡಿದ್ದವರಿಗೆ ಮಂಗಳಾರತಿ]

ಇದು ಕ್ಷಣ ಮಾತ್ರದಲ್ಲಿ ವೈರಲ್ ಆಗಿದೆ. ಭಾರತೀಯ ಅಭಿಮಾನಿಗಳು ಮುಶ್ಫಿಕರ್ ರಹೀಮ್ ತಿರುಗೇಟು ನೀಡಲು ಆರಂಭಿಸಿದ್ದಾರೆ. ಇದಾದ ಮೇಲೆ ಕ್ಷಮೆ ಕೇಳಿದ ರಹೀಮ್, ನಾನು ವೆಸ್ಟ್ ಇಂಡೀಸ್ ನ ದೊಡ್ಡ ಅಭಿಮಾನಿ, ನನ್ನ ಶಬ್ದಗಳಿಂದ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ, ಆದರೆ ಅಷ್ಟು ಹೊತ್ತಿಗೆ ಎಲ್ಲವೂ ಆಗಿ ಹೋಗಿದೆ. ಬಾಂಗ್ಲಾ ವಿರುದ್ಧ ಭಾರತ ಗೆದ್ದಾಗ ಸುರೇಶ್ ರೈನಾ ರಹೀಮ್ ರನ್ನು ಉದ್ದೇಶಿಸಿ ಟ್ವೀಟ್ ಮಾಡಿದ್ದರು.

Story first published: Wednesday, January 3, 2018, 10:03 [IST]
Other articles published on Jan 3, 2018
Read in English: Rahim
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X