ಬೆಂಗಳೂರು ಬ್ಲೂಸ್ಟರ್ ಟೀಮ್ ಗೆ ಆಯ್ಕೆ
DPL ಬೆಂಗಳೂರು ಬ್ಲೂಸ್ಟರ್ ಟೀಮ್ ನಲ್ಲಿ ಆಯ್ಕೆಯಾಗಿದ್ದು, ಡಿಸೆಂಬರ್ 1 ರಿಂದ ಜನವರಿ 3 ರವರಿಗೆ ದೆಹಲಿಯಲ್ಲಿ ನಡೆಯುವ DPL ಟಿ20 ಪಂದ್ಯಾವಳಿಗಳಲ್ಲಿ ಆಟವನ್ನು ಆಡಲಿದ್ದಾನೆ. ತನ್ನ ಮಗ ಸಾಕಷ್ಟು ಕಷ್ಟ ಹಾಗೂ ಸವಾಲನ್ನು ಎದುರಿಸಿ ಇಂಥದೊಂದು ಸಾಧನೆ ಮಾಡಿದ್ದಾನೆ.
ಅಪ್ಪನ ಆರೈಕೆಯಲ್ಲಿ ಬೆಳದ ಮಂಜುನಾಥ್
ಇನ್ನೂ ಮಂಜುನಾಥ ಬಹಳ ಕಷ್ಟ ಪಟ್ಟು ಬೆಳದಿದ್ದು, 8 ತಿಂಗಳ ಕೂಸು ಇರುವಾಗಲೇ ತಾಯಿ ಸಾವನ್ನಪ್ಪಿದ್ದು, ತಂದೆ ಈತನನ್ನು ಕಷ್ಟ ಪಟ್ಟು ಬೆಳಸಿದ್ದಾರೆ. ಮಗ ಅಂಗವಿಕಲ ಎನ್ನುವ ಚಿಂತೆಯೊಂದಿಗೆ ಮಗನ ಸಾಧನೆಗೆ ಪ್ರೋತ್ಸಾಹ ನೀಡಿದ್ದಾರೆ ಆ ಹೆತ್ತಪ್ಪ.
ಶಿವಾನಂದ ಗುಂಚಾಳ ಅವರ ಮಾರ್ಗದರ್ಶನ
ಈತನ ಕ್ರಿಕೆಟ್ ಆಟವನ್ನು ನೋಡಿದ ಶಿವಾನಂದ ಗುಂಚಾಳ ಇವರಿಗೆ ಪ್ರೋತ್ಸಾಹ ಹಾಗೂ ಮಾರ್ಗದರ್ಶನ ಮಾಡಿ ಇವತ್ತು ಅಂಗವಿಕಲ ಕ್ರಿಕೆಟ್ ಟೀಮ್ ನಲ್ಲಿ ಸ್ಥಾನ ಸಿಗೋದಕ್ಕೆ ಕಾರಣವಾಗಿದ್ದಾರೆ. ಆದರೆ, ಈ ಮಂಜುನಾಥ ಕ್ರಿಕೆಟ್ ನಲ್ಲಿ ದೊಡ್ಡ ಸಾಧನೆ ಮಾಡಿ ವಿಕಲಚೇತನರಿಗೆ ಸಹಾಯ ಮಾಡಬೇಕು ಎನ್ನುವ ಅಭಿಲಾಷೆಯನ್ನು ವ್ಯಕ್ತಪಡಿಸುತ್ತಾರೆ.
ಮಂಜುನಾಥನಿಗೆ ಶುಭಹಾರೈಕೆ
ಓರ್ವ ಅಂಗವಿಕಲನಾಗಿ ಕ್ರಿಕೆಟ್ ನಲ್ಲಿ ದೊಡ್ಡ ಸಾಧನೆ ಮಾಡಿ, ಆ ಹಣದಿಂದ ವಿಕಲಚೇತನರಿಗೆ ಕಲ್ಯಾಣ ಮಾಡಬೇಕು ಎನ್ನುವ ಈ ಮಂಜುನಾಥ ಅವರ ಕನಸು ನನಸಾಗಲಿ ಎಂದು ಉಣಕಲ್ ನ ಮಂದಿ ಶುಭಹಾರೈಸಿದ್ದಾರೆ.