ಬೆಂಗಳೂರು, ಆಗಸ್ಟ್ 25: ಮುಂಬರುವ ರಣಜಿ ಋತುವಿನಲ್ಲಿ ಆಡುವ ಕರ್ನಾಟಕ ತಂಡಕ್ಕೆ ಸಂಭಾವ್ಯ ಆಟಗಾರರನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿ (ಕೆಎಸ್ ಸಿಎ) ಪ್ರಕಟಿಸಿದೆ.
ವಿನಯ್ ಕುಮಾರ್ ನೇತೃತ್ವದ ಕರ್ನಾಟಕ ತಂಡ ಮತ್ತೊಮ್ಮೆ ರಣಜಿಯಲ್ಲಿ ತಮ್ಮ ಪ್ರಾಬಲ್ಯ ಮೆರೆಯಲು ಸಿದ್ದವಾಗುತ್ತಿದೆ. ಕೆಎಸ್ಸಿಎ ಆಯ್ಕೆ ಸಮಿತಿ ಪ್ರಕಟಿಸಿದ ಸಂಭಾವ್ಯ 29 ಆಟಗಾರರು ಹಾಗೂ ನಾಲ್ವರು ವಿಶೇಷ ಬೌಲಿಂಗ್ ಪಡೆಗೆ ಜೆ ಅರುಣ್ ಕುಮಾರ್ ಮುಖ್ಯ ಕೋಚ್ ಆಗಿ ಮುಂದುವರೆಯಲಿದ್ದಾರೆ.[ಅಸ್ಸಾಂ ತಂಡಕ್ಕೆ ಕನ್ನಡಿಗ ಸುನಿಲ್ ಜೋಶಿ ಕೋಚ್]
ಸತತವಾಗಿ ರಣಜಿ ಟ್ರೋಫಿ, ವಿಜಯ್ ಹಜಾರೆ ಟ್ರೋಫಿ ಹಾಗೂ ಇರಾನಿ ಕಪ್ ಗೆದ್ದ ದಾಖಲೆ ಹೊಂದಿದ್ದ ವಿನಯ್ ಕುಮಾರ್ ಪಡೆ, ಕಳೆದ ಋತುವಿನಲ್ಲಿ ಉತ್ತಮ ಸಾಧನೆ ತೋರಿರಲಿಲ್ಲ. ಸಂಭಾವ್ಯ ತಂಡ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತನ್ನ ತರಬೇತಿ ನಡೆಸಲಿದೆ.
ವಿಶೇಷ ಬೌಲರ್ಸ್
* ಶರತ್ ಗೌಡ
* ಭವೇಶ್ ಗುಲೇಚ
* ಪ್ರತೀಕ್ ಜೈನ್
* ಮಿತ್ರಾಕಾಂತ್ ಯಾದವ್
ಕೋಚ್ : ಜೆ ಅರುಣ್ ಕುಮಾರ್
ಫಿಜಿಯೋ: ಜಬಾ ಪ್ರಭು
ತರಬೇತಿ: ಪ್ರಶಾಂತ್ ಪೂಜಾರ್
(ಒನ್ಇಂಡಿಯಾ ಸುದ್ದಿ)