ತಿರುವನಂತಪುರಂ, ಅಕ್ಟೋಬರ್ 17 : ಟೀಂ ಇಂಡಿಯಾ ಸೇರಿ ಕ್ರಿಕೆಟ್ ಆಡುವ ಬಯಕೆ ಇಟ್ಟುಕೊಂಡಿದ್ದ ವೇಗಿ ಎಸ್. ಶ್ರೀಶಾಂತ್ ಆಸೆ ಬಹುತೇಕ ಕಮರಿದಂತಾಗಿದೆ.
ಕ್ರಿಕೆಟರ್ ಶ್ರೀಶಾಂತ್ ಮೇಲಿನ ನಿಷೇಧ ರದ್ದು
ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಸ್ಪಾಟ್ ಫಿಕ್ಸಿಂಗ್, ಮ್ಯಾಚ್ ಫಿಕ್ಸಿಂಗ್ ನಲ್ಲಿ ತೊಡಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಿಕೆಟ್ ನಿಂದ ಅಜೀವ ನಿಷೇಧ ಹೇರುವಂತೆ ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಸಲ್ಲಿಸಿದ್ದ ಮೇಲ್ಮನವಿಯನ್ನು ಮಂಗಳವಾರ ಕೇರಳ ಹೈಕೋರ್ಟ್ ಪುರಸ್ಕರಿಸಿದೆ. ಇದರಿಂದ ಶ್ರೀಶಾಂತ್, ಕ್ರಿಕೆಟ್ ಆಡುವ ಕನಸು ಕಮರಿ ಹೋಗುವ ಸಾಧ್ಯತೆಗಳಿವೆ.
ಶ್ರೀಶಾಂತ್ ಮೇಲೆ ಬಿಸಿಸಿಐ ಅಜೀವ ಇಷೇಧ ಹೇರಿತ್ತು. ಆದರೆ, ಶ್ರೀಶಾಂತ್ ಮೇಲೆ ಹೇರಲಾಗಿದ್ದ ನಿಷೇಧವನ್ನು ಹಿಂಪಡೆಯುವಂತೆ ಕೇರಳದ ಹೈಕೋರ್ಟ್ ಇತ್ತೀಚೆಗೆ ಬಿಸಿಸಿಗೆ ಆದೇಶಿಸಿತ್ತು.
ಇದರ ವಿರುದ್ಧವಾಗಿ ಮತ್ತೆ ಬಿಸಿಸಿಐ ಶ್ರೀಶಾಂತ್ ಗೆ ಅಜೀವ ನಿಷೇಧ ಹೇರಬೇಕೆಂದು ಮೇಲ್ನನವಿ ಸಲ್ಲಿಸಿತ್ತು. ಈ ಮನವಿಯನ್ನು ಕೋರ್ಟ್ ಇಂದು ಪುರಸ್ಕರಿಸಿದೆ.