ಕೋಲ್ಕತ್ತ, ಏಪ್ರಿಲ್ 16 : ಇಲ್ಲಿನ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಐಪಿಎಲ್ 10ನೇ ಆವೃತ್ತಿಯ 14ನೇ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಶಿಖರ್ ಧವನ್ ಬಾರಿಸಿದ ಬೌಂಡರಿಗೆ ಹೈದರಾಬಾದ್ ತಂಡದ ಸಲಹೆಗಾರ ವಿವಿಎಸ್ ಲಕ್ಷ್ಮಣ್ ಅವರ ಲ್ಯಾಪ್ ಟಾಪ್ ಛಿದ್ರವಾಗಿದೆ.
ಟ್ರೆಂಟ್ ಬೊಲ್ಟ್ ಎಸೆದ ಎರಡನೇ ಓವರ್ ನ ಮೊದಲ ಎಸೆತದಲ್ಲಿ ಶಿಖರ್ ಧವನ್ ಬೌಂಡರಿ ಪಾಯಿಂಟ್ ನಲ್ಲಿ ಬಾರಿಸಿದ ಚೆಂಡು ನೇರವಾಗಿ ವಿವಿ ಎಸ್ ಲಕ್ಷ್ಮಣ್ ಅವರು ಬೌಂಡರಿ ಲೈನ್ ಆಚೆ ಕುಳಿತು ವೀಕ್ಷಿಸುತ್ತಿದ್ದ ವೇಳೆ ಚೆಂಡು ನೇರವಾಗಿ ಲ್ಯಾಪ್ ಟಾಪ್ ಹಿಂಬದಿಗೆ ಬಡಿದು ಲ್ಯಾಪ್ ಟಾಪ್ ಸ್ಕ್ರೀನ್ ಪುಡಿಪುಡಿಯಾಗಿದೆ.[ಕೋಲ್ಕತ್ತಾಗೆ ಮಣಿದ ಹೈದರಾಬಾದ್ ಸನ್ ರೈಸರ್ಸ್]
ಈ ಪಂದ್ಯದಲ್ಲಿ ಗೌತಮ್ ಗಂಭೀರ್ ಸಾರಥ್ಯದ ನೈಟ್ ರೈಡರ್ಸ್ ತಂಡ ಹಾಲಿ ಚಾಂಪಿಯನ್ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು 17 ರನ್ ಅಂತರದಿಂದ ಮಣಿಸಿತ್ತು.