ಬೆಂಗಳೂರು, ಏಪ್ರಿಲ್ 21 : ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ಗಾಯಾಳು ಸರ್ಫರಾಜ್ ಖಾನ್ ಬದಲಿಗೆ ಬ್ಯಾಟ್ಸ್ ಮನ್ ಹರ್ ಪ್ರೀತ್ ಸಿಂಗ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.
ಮಧ್ಯಪ್ರದೇಶದ ಎಡಗೈ ಬ್ಯಾಟ್ಸ್ ಮನ್ ಆಗಿರುವ ಹರ್ ಪ್ರೀತ್ ಸಿಂಗ್ 2010ರ ಐಪಿಎಲ್ ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಒಂದು, 2013ರ ಐಪಿಎಲ್ ನಲ್ಲಿ ಪುಣೆ ವಾರಿಯರ್ಸ್ ತಂಡದಲ್ಲಿ ಮೂರು ಪಂದ್ಯದಲ್ಲಿ ಆಡಿದ್ದಾರೆ.[ಸರ್ಫರಾಜ್ ಖಾನ್ ಕೂಡಾ ಔಟ್, ಆರ್ ಸಿಬಿಗೆ ಆಘಾತವೋ ಆಘಾತ!]
ಈ ಬಾರಿಯ 2017 ಐಪಿಎಲ್ ಹರಾಜಿನ ವೇಳೆ ತಪ್ಪು ವರದಿಗಳಿಂದಾಗಿ ಹರ್ ಪ್ರೀತ್ ಅವಕಾಶ ವಂಚಿತರಾಗಿದ್ದರು. ಮುಂಬೈನ ರೈಲ್ವೆ ನಿಲ್ದಾಣದೊಳಕ್ಕೆ ಕಾರು ಚಲಾಯಿಸಿ ಪೊಲೀಸರ ಬಲೆಗೆ ಬಿದ್ದಿದ್ದ ಆರೋಪಕ್ಕೆ ಅವರು ಗುರಿಯಾಗಿದ್ದರು.
ಆದರೆ, ಕೆಲ ಹೊತ್ತಿನ ಬಳಿಕ ಅದು ಹರ್ ಪ್ರೀತ್ ಅಲ್ಲ ಬದಲಿಗೆ 201ರ 19 ವರ್ಷದೊಳಗಿನವರ ತಂಡದ ಸಹ ಆಟಗಾರ ಹರ್ಮೀತ್ ಸಿಂಗ್ ಎಂದು ತಿಳಿದುಬಂದಿತ್ತು.
ಸಯ್ಯದ್ ಮುಷ್ತಾಕ್ ಅಲಿ ವಲಯ ಮಟ್ಟದ ಟಿ20 ಪಂದ್ಯಾವಳಿಯಲ್ಲಿ 4 ಪಂದ್ಯಗಳಿಂದ 211 ರನ್ ಗಳಿಸಿ ಹರ್ ಪ್ರೀತ್ ಮಿಂಚಿದ್ದರು. ಇದೇ ವೇಳೆ ವಿಜಯ್ ಹಜಾರೆ ಟ್ರೋಫಿಯಲ್ಲಿ 5 ಪಂದ್ಯಗಳಲ್ಲಿ 271 ರನ್ ಕಲೆಹಾಕಿದ್ದರು.