ಅಚ್ಚರಿಗೊಂಡ ಕಾಮೆಂಟೆಟರ್ಸ್
ಟಿವಿ ಕಾಮೆಂಟೆಟರ್ಸ್, ಫ್ಯಾನ್ಸ್ ಅಲ್ಲದೆ ಟ್ವಿಟ್ಟರ್ ನಲ್ಲಿ ಗೇಲ್ ಇಲ್ಲದ ಆರ್ ಸಿಬಿ ನೋಡುವ ಮನಸ್ಸಿಲ್ಲ ಎಂದು ಬಿಟ್ಟರು. ಗೇಲ್ ಅವರು ಫಿಟ್ ಆಗಿದ್ದು ಕೂಡಾ ತಂಡದಿಂದ ಹೊರಕ್ಕೆ ಇಟ್ಟಿದ್ದು ಏಕೆ ಎಂದು ಕಾಮೆಂಟೆಟರ್ ಪ್ರಶ್ನಿಸಿದರು.
ಇದೇನು ಶಿಕ್ಷೆಯೇ? ಅಥವಾ ಮೂರ್ಖತನವೇ?
ಮುಂಬೈ ವಿರುದ್ಧ 24 ಎಸೆತಗಳಲ್ಲಿ 10ರನ್ ಮಾತ್ರ ಗಳಿಸಿ ಔಟಾದ ಗೇಲ್ ಗೆ ಈ ರೀತಿ ಶಿಕ್ಷೆ ನೀಡುವುದೇ? ಅಥವಾ ಇದು ಮೂರ್ಖತನದ ನಿರ್ಣಯವೇ? ಎಂಬ ಪ್ರಶ್ನೆಗೆ ವಿಜಯ ಮಲ್ಯ ಆಗಲಿ, ವಿರಾಟ್ ಕೊಹ್ಲಿಯಾಗಲಿ ಎಂದೂ ಉತ್ತರಿಸುವ ಸಾಧ್ಯತೆಯಿಲ್ಲ.
|
ಕ್ರಿಕೆಟರ್ ರವಿ ಬೋಪಾರಗೂ ಅಚ್ಚರಿ
ಕ್ರಿಕೆಟರ್ ರವಿ ಬೋಪಾರಗೂ ಅಚ್ಚರಿ ಮೂಡಿಸಿದ ಆರ್ ಸಿಬಿ ನಿರ್ಣಯ.
|
ಗೇಲ್ ರಿಂದ ಕ್ರಿಕೆಟ್ ಟ್ವೀಟ್ ಇಲ್ಲ
ಮ್ಯಾಡ್ರಿಡ್ ತಂಡದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ, ಹೆರ್ನಾಂಡಿಸ್ ಫುಟ್ಬಾಲ್ ಆಟದ ಬಗ್ಗೆ ಟ್ವೀಟ್ ಮಾಡಿದ್ದಾರೆ. ಪಾರ್ಟಿ ಮಸ್ತಿ ಮೋಜು, ಸಂಗೀತ ಬಿಟ್ಟರೆ ಕ್ರಿಕೆಟ್ ಬಗ್ಗೆ ಟ್ವೀಟ್ ಮಾಡುವ ಗೇಲ್ ನಿನ್ನೆ ಪಂದ್ಯದ ಬಗ್ಗೆ ಒಂದೂ ಟ್ವೀಟ್ ಮಾಡಿಲ್ಲ.
|
ಸಿದ್ ಮಲ್ಯ ಮಾಡಿದ ಟ್ವೀಟ್ ಹೀಗಿತ್ತು
ತಂಡದ ಮಾಲೀಕರಲ್ಲಿ ಒಬ್ಬರಾದ ಸಿದಾರ್ಥ ಮಲ್ಯ ಮಾಡಿದ ಟ್ವೀಟ್ ಹೀಗಿತ್ತು.. ಬ್ಯಾಟಿಂಗ್ ಬಗ್ಗೆ ಮಾತೇ ಇಲ್ಲ. ನೆಹ್ರಾ ಬೌಲಿಂಗ್ ಸೂಪರ್ ಅಂತೆ!