ಕೋಲ್ಕತಾ, ಮಾರ್ಚ್.19: ಮಧ್ಯಾಹ್ನದಿಂದ ಸುರಿಯುತ್ತಿದ್ದ ಮಳೆ ಇದೀಗ ನಿಂತಿದ್ದು ಭಾರತ ಮತ್ತು ಪಾಕ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಬೆಳಗ್ಗೆಯಿಂದ ಆರಂಭವಾಗಿದ್ದ ಮಳೆ ಈಗ ಬಿಡುವು ನೀಡಿದ್ದು ಇನ್ನು ಕೆಲವೇ ಕ್ಷಣದಲ್ಲಿ ಪಂದ್ಯ ಆರಂಭವಾಗಿದೆ.
ಧರ್ಮಶಾಲಾದಲ್ಲಿ ನಡೆಯಬೇಕಿದ್ದ ವಿಶ್ವಕಪ್ ಟಿ-20 ಪಂದ್ಯ ಭದ್ರತೆಯ ಕಾರಣದಿಂದ ಕೋಲ್ಕತಾಗೆ ವರ್ಗಾವಣೆಯಾಗಿತ್ತು. ಮೈದಾನವನ್ನು ಸಿಬ್ಬಂದಿ ಟಾರ್ಪಲ್ ನಿಂದ ಮುಚ್ಚಿ ರಕ್ಷಣೆ ಮಾಡಿದ್ದರು. [ಭಾರತ-ಪಾಕ್ ಪಂದ್ಯಕ್ಕೂ ಮುನ್ನ ಇದೆಂಥ ಬೆತ್ತಲೆ ಆಫರ್!]
ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ
ಕೋಲ್ಕತಾದಲ್ಲಿ ಶನಿವಾರ ಬೆಳಗ್ಗೆ ಸಹ ಮಳೆ ಸುರಿದಿತ್ತು. ಸಂಪೂರ್ಣ ಪಂದ್ಯ ನಡೆಯುವ ಎಲ್ಲ ಸಾಧ್ಯತೆಗಳಿದ್ದು ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿದ್ದಾರೆ. ಅತ್ತ ನವದೆಹಲಿಯಲ್ಲಿ ನಡೆಯುತ್ತಿದ್ದ ಇಂಡಿಯಾ-ಪಾಕ್ ವನಿತೆಯರ ಪಂದ್ಯಕ್ಕೂ ಮಳೆ ಅಡ್ಡಿಮಾಡಿದೆ.