ಬೆಂಗಳೂರು, ಮೇ.3: ಮನದೀಪನ ಮನಮೋಹಕ ಆಟ, ವಿರಾಟ್ ಕೊಹ್ಲಿ ಬೊಂಬಾಟ, ಕೋಲ್ಕತ್ತಾ ವಿರುದ್ಧ ಮಲ್ಯ ಹುಡುಗರ ಭರ್ಜರಿ ಪ್ರದರ್ಶನದಿಂದ ಪ್ರೇಕ್ಷಕರಿಗೆ ಸಿಕ್ಕಿತು ಒಳ್ಳೆ ನೋಟ. ಐಪಿಎಲ್ 2015ರಲ್ಲಿ ಆರ್ ಸಿಬಿ ಮತ್ತೊಮ್ಮೆ ರೋಚಕ ಜಯ ಸಾಧಿಸಿದೆ.ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 7 ವಿಕೆಟ್ ಜಯ ಗಳಿಸಿ ವಿಜಯೋತ್ಸವ ಆಚರಿಸಿದೆ.
| ಐಪಿಎಲ್ ವಿಶೇಷ ಪುಟ
ಮತ್ತೆ ಲಯಕ್ಕೆ ಮರಳಿರುವ ನಾಯಕ ವಿರಾಟ್ ಕೊಹ್ಲಿ 34ರನ್(20ಎಸೆತ, 2X4, 3X6) ಮತ್ತು ಮನದೀಪ್ ಸಿಂಗ್ ಅಜೇಯ 45 ರನ್( 18ಎಸೆತ, 4x4, 3X6) ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಕೈತಪ್ಪುತ್ತಿದ್ದ ಪಂದ್ಯವನ್ನು ಕೈ ಚಾಚಿ ಗೆದ್ದುಕೊಂಡಿದ್ದಾರೆ.
ಮಳೆಗೆ ಸಿಲುಕಿ 10 ಓವರ್ ಗೆ ಸೀಮಿತವಾದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ನಿಗದಿತ 10 ಓವರ್ನಲ್ಲಿ 4 ವಿಕೆಟ್ ನಷ್ಟಕ್ಕೆ 111ರನ್ ಗಳಿಸಿತ್ತು. 9.4 ಓವರ್ನಲ್ಲಿ 3 ವಿಕೆಟ್ಗೆ 115ರನ್ ಗಳಿಸಿ ಜಯದ ನಗೆ ಬೀರಿತು.ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ರೋಚಕ ಗೆಲುವಿನ ಸಂಭ್ರಮದ ಚಿತ್ರಗಳು ಇಲ್ಲಿವೆ