ಬೆಂಗಳೂರು, ಜನವರಿ 20: 'ಟೀಂ ಇಂಡಿಯಾದಿಂದ ಯುವರಾಜ್ ಸಿಂಗ್ ಹೊರಗುಳಿಯಲು ಧೋನಿಯೇ ಕಾರಣ' ಎಂದು ಸದಾಕಾಲ ದೂಷಿಸುತ್ತಿದ್ದ ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಈಗ ಧೋನಿಯನ್ನು ಹಾಡಿ ಹೊಗಳಿದ್ದಾರೆ.
ಎಂಎಸ್ ಧೋನಿಯನ್ನು ನಾನು ಕ್ಷಮಿಸಿದ್ದೇನೆ, ಧೋನಿ ಇನ್ನಷ್ಟು ಶತಕ ಬಾರಿಸಲಿ, ದೇವರು ಅವರನ್ನು ಕಾಪಾಡಲಿ ಎಂದು ಯೋಗರಾಜ್ ಅವರು ಡೆಕ್ಕನ್ ಕ್ರಾನಿಕಲ್ ಜತೆ ಮಾತನಾಡುತ್ತಾ ಹೇಳಿದ್ದಾರೆ.[ಧೋನಿ ವಿರುದ್ಧ ಯುವಿ ಅಪ್ಪ ದೂರು ಕೊಡ್ತಾರಾ? ಗುಲ್ಲೋ ಗುಲ್ಲು]
ಕಟಕ್ ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಯುವರಾಜ್ ಸಿಂಗ್ ತಮ್ಮ ಗರಿಷ್ಠ ವೈಯಕ್ತಿಕ ಮೊತ್ತ ಉತ್ತಮಗೊಳಿಸಿ 150 ರನ್ ಚೆಚ್ಚಿದರೆ, ಧೋನಿ ಅವರು 10ನೇ ಶತಕ ಬಾರಿಸಿದರು ಇಬ್ಬರು 4ನೇ ವಿಕೆಟ್ ಗೆ 256 ರನ್ ಗಳ ಜೊತೆಯಾಟ ಕಂಡರು.