ದುಬೈ, ಏಪ್ರಿಲ್ 13 : 2017ರ ಚಾಂಪಿಯನ್ಸ್ ಟ್ರೋಫಿಗಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಎಂಟು ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರನ್ನು ರಾಯಭಾರಿಗಳನ್ನಾಗಿ ನೇಮಕ ಮಾಡಿದೆ.
ಇಂಗ್ಲೆಂಡ್ ಹಾಗೂ ವೇಲ್ಸ್ನಲ್ಲಿ ಜೂನ್ 1ರಿಂದ 18ರವರೆಗೆ ಚಾಂಪಿಯನ್ಸ್ ಟ್ರೋಫಿ ನಡೆಯಲಿದ್ದ ಈ ಟೂರ್ನಿಗೆ ಬುಧವಾರ ಐಸಿಸಿ
ಎಂಟು ರಾಯಭಾರಿಗಳಲ್ಲಿ ಭಾರತದ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರನ್ನು ಆಯ್ಕೆ ಮಾಡಿದೆ.[ಗಿಲ್ಲಿ ದಂಡಾ ಅಡುವುದು ಹೇಗೆ? ಹರ್ಭಜನ್ ಫ್ರೀ ಕೋಚಿಂಗ್]
ಭಾರತದ ಹರ್ಭಜನ್ ಸೇರಿದಂತೆ, ಪಾಕಿಸ್ತಾನದ ಶಾಹಿದ್ ಅಫ್ರಿದಿ, ಬಾಂಗ್ಲಾದೇಶದ ಹಬೀಬುಲ್ ಬಾಶರ್, ಇಂಗ್ಲೆಂಡ್ ನ ಇಯಾನ್ ಬೆಲ್, ನ್ಯೂಜಿಲೆಂಡ್ ತಂಡದ ಶೇನ್ ಬಾಂಡ್, ಆಸ್ಟ್ರೇಲಿಯಾದ ಮೈಕ್ ಹಸ್ಸಿ, ಶ್ರೀಲಂಕಾದ ಕುಮಾರ ಸಂಗಕ್ಕಾರ, ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್ ಅವರನ್ನು ರಾಯಭಾರಿಗಳನ್ನಾಗಿ ಆಯ್ಕೆ ಮಾಡಲಾಗಿದೆ.
'ವಿಶ್ವ ಮಟ್ಟದ ಟೂರ್ನಿಗೆ ರಾಯಭಾರಿಯಾಗಿ ಆಯ್ಕೆಯಾಗಿರುವುದು ನನಗೆ ಸಿಕ್ಕ ಅತ್ಯುತ್ತಮ ಗೌರವ. ಭಾರತದ ಎಲ್ಲಾ ಪಂದ್ಯಗಳನ್ನು ನೋಡಿ ಪ್ರೋತ್ಸಾಹ ನೀಡಲಿದ್ದೇನೆ. 2013ರಲ್ಲಿ ಗೆದ್ದ ಪ್ರಶಸ್ತಿಯನ್ನು ಭಾರತ ತಂಡ ಈ ಬಾರಿ ಉಳಿಸಿಕೊಳ್ಳಲಿದೆ' ಎಂದು ಹರ್ಭಜನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.