ಸಿಡ್ನಿ, ಜನವರಿ, 23: ಕೊನೆ ಓವರ್ ನಲ್ಲಿ ಮಹೇಂದ್ರ ಸಿಂಗ್ ಧೋನಿ ಸಿಡಿಸಿದ ಸಿಕ್ಸ್ ಭಾರತದ ಮಾನ ಕಾಪಾಡಿದೆ. ಅಂತಿಮ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಜಯ ದಕ್ಕಿದ್ದು ಟೀಮ್ ಇಂಡಿಯಾ ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ.
ಕೊನೆ ಕ್ಷಣದವರೆಗೂ ಪಂದ್ರ ಕುತೂಹಲ ಹಿಡಿದುಕೊಂಡಿತ್ತು. ಕೊನೆ ಓವರ್ ನ ಆರು ಎಸೆತದಲ್ಲಿ ಭಾರತಕ್ಕೆ ಗೆಲ್ಲಲು ಬೇಕಿದ್ದದ್ದು 13 ರನ್ . ಈ ವೇಳೆ ಕ್ರೀಸ್ ನಲ್ಲಿ ಇದ್ದದ್ದು ನಾಯಕ ಮಹೇಂದ್ರ ಸಿಂಗ್ ಧೋನಿ.[ಮನೀಶ್ ಪಾಂಡೆ ಶತಕ, ಆಸೀಸ್ ನಲ್ಲಿ ಮೊದಲ ಗೆಲುವಿನ ಪುಳಕ]
ಮಾರ್ಶ್ ಅವರ ಕೊನೆಯ ಓವರ್ ನ ಮೊದಲ ಎಸೆತ ವೈಡ್, ಎರಡನೇ ಎಸೆತವನ್ನು ಮಹೇಂದ್ರ ಸಿಕ್ಸರ್ ಗೆರೆ ದಾಟಿಸಿದ್ದು ಪಂದ್ಯದ ಫಲಿತಾಂಶವನ್ನು ಭಾರತದ ಕಡೆ ವಾಲುವಂತೆ ಮಾಡಿತು. ಮುಂದಿನ ಎಸೆತದಲ್ಲೂ ದೊಡ್ಡ ಹೊಡೆತಕ್ಕೆ ಯತ್ನಿಸಿದ ಧೋನಿ ವಿಕೆಟ್ ಒಪ್ಪಿಸಬೇಕಾಯಿತು.[ಭಾರತವನ್ನು ಸೋಲಿಸಿದ ಆಸ್ಟ್ರೇಲಿಯಾದಿಂದ ವಿಶ್ವ ದಾಖಲೆ]
ನಂತರ ಕ್ರೀಸ್ ಗೆ ಬಂದ ಮನೀಶ್ ಮೂರನೇ ಎಸೆತವನ್ನು ಬೌಂಡರಿಗೆ ಅಟ್ಟುತ್ತಿದ್ದಂತೆ ಭಾರತಕ್ಕೆ ಗೆಲುವು ಪಕ್ಕಾ ಆಯಿತು. ಅಜೇಯ ಶತಕವನ್ನು ದಾಖಲಿಸಿದ ಮನೀಶ್ ಪಾಂಡೆ ಭಾರತದ ಪಾಳಿಗೆ ಹೀರೋ ಆದರು.