46ನೇ ಓವರ್ ನಲ್ಲಿ ಕರೆ
ನನಗೆ ಪಂದ್ಯದ 46ನೇ ಓವರ್ ನಡೆಯುವಾಗ ಕೋಚ್ ಕುಂಬ್ಳೆಯಿಂದ ಕರೆ ಬಂತು, ಪ್ಯಾಡ್ ಧರಿಸಿ ಮೈದಾನಕ್ಕಿಳಿಯುವಂತೆ ಸೂಚಿಸಿದರು. ನಾನು ಅಷ್ಟು ತ್ವರಿತವಾಗಿ ಎಂದೂ ಪ್ಯಾಡ್, ಗ್ಲೋವ್ಸ್ ಹಾಕಿಕೊಂಡಿರಲಿಲ್ಲ. ಯುವಿ ಔಟಾದ ಬಳಿಕ ನಾನು ಅದೇ ರೀತಿ ಬಿರುಸಿನ ಬ್ಯಾಟಿಂಗ್ ಮಾಡುವಂತೆ ಸೂಚಿಸಲಾಗಿತ್ತು ಎಂದು ಪಾಂಡ್ಯ ಅವರು ಪಂದ್ಯದ ನಂತರದ ಸಂದರ್ಶನದಲ್ಲಿ ಹೇಳಿದರು.[ಭಾರತ- ಪಾಕ್ ಕ್ರಿಕೆಟ್ ಕದನ ಟಾಪ್ 5 ಪಂದ್ಯಗಳು]
ಪಂದ್ಯದ ಬಗ್ಗೆ ಪಾಂಡ್ಯ
' ನಿಜ ಹೇಳಬೇಕೆಂದರೆ ನಾನು ಕ್ರೀಸ್ ಗೆ ಹೋಗುವ ತನಕ ನನ್ನ ಎದೆ ಜೋರಾಗಿ ಬಡಿದುಕೊಳ್ಳುತ್ತಿತ್ತು. ಒತ್ತಡದಲ್ಲೇ ಕಣಕ್ಕಿಳಿದೆ. ಆದರೆ, ಅನಗತ್ಯ ಒತ್ತಡ ಏಕೆ., ಇರುವ ಕೆಲ ಓವರ್ ಗಳಲ್ಲಿ ಎಂಜಾಯ್ ಮಾಡುತ್ತಾ ಬ್ಯಾಟ್ ಬೀಸುವ ಎಂದೆನಿಸಿ ಬ್ಯಾಟಿಂಗ್ ಶುರು ಮಾಡಿದೆ'. ಕೊಹ್ಲಿ ಅವರಿಂದ ಉತ್ತಮ ಬೆಂಬಲ ಸಿಕ್ಕಿತು. ಯುವಿ ಅವರು ಹಾಕಿಕೊಟ್ಟ ಅಡಿಪಾಯಕ್ಕೆ ತಕ್ಕಂತೆ ಇನ್ನಿಂಗ್ಸ್ ಬೆಳೆಸಲು ಸಹಕಾರಿಯಾಯಿತು.
ಕುಂಬ್ಳೆ ಇಟ್ಟ ಭರವಸೆ ಹುಸಿಯಾಗಲಿಲ್ಲ
ಪಾಂಡ್ಯ ಅವರ ಮೇಲೆ ಕುಂಬ್ಳೆ ಇಟ್ಟ ಭರವಸೆ ಹುಸಿಯಾಗಲಿಲ್ಲ. ಪಂದ್ಯದ ಕೊನೆ ಓವರ್ ನಲ್ಲಿ ಪಾಂಡ್ಯ ಸತತ ಮೂರು ಸಿಕ್ಸರ್ ಸಿಡಿಸಿದರು. 8 ಎಸೆತಗಳಲ್ಲಿ 20ರನ್ ಚೆಚ್ಚಿದ ಪಾಂಡ್ಯ ಭಾರತದ ಮೊತ್ತವನ್ನು 48 ಓವರ್ ಗಳಲ್ಲಿ 319/3 ಸ್ಕೋರ್ ಮಾಡಿತು. ಪಾಕಿಸ್ತಾನ ತಂಡ 164ಸ್ಕೋರಿಗೆ ಆಲೌಟ್ ಆಗಿ ಭಾರತಕ್ಕೆ 124ರನ್ ಜಯ ಸಿಕ್ಕಿತು.ಮಳೆಯ ಕಾರಣ ಅನೇಕ ಬಾರಿ ಪಂದ್ಯ ನಿಲ್ಲಿಸಬೇಕಾಯಿತು.
ಧೋನಿ ಬ್ಯಾಟಿಂಗ್
ಅನಿಲ್ ಕುಂಬ್ಳೆ ಅವರ ನಿರ್ಣಯವನ್ನು ಪಾಂಡ್ಯ ಅವರು ಸಮರ್ಥಿಸಿಕೊಂಡಿದ್ದಾರೆ. ಪಾಂಡ್ಯ ಅವರು ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಪರ ಬ್ಯಾಟ್ ಬೀಸುವುದನ್ನು ಕಂಡಿರಬಹುದು. ಮುಂಬೈ ತಂಡ ಕೋಚ್ ಆಗಿ ಕುಂಬ್ಳೆ ಅವರು ಪಾಂಡ್ಯ ಅವರ ಸಾಮರ್ಥ್ಯದ ಬಗ್ಗೆ ಅರಿವಿದ್ದರಿಂದ ಧೋನಿಗೂ ಮುನ್ನ ಪಾಂಡ್ಯರನ್ನು ಕಣಕ್ಕಿಳಿಸಿ, ಯಶಸ್ಸು ಕಂಡಿದ್ದಾರೆ.