ಮುಂಬೈ, ಮಾರ್ಚ್ 30: ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟಿ20 ಪಂದ್ಯದಲ್ಲಿ ಗಾಯಗೊಂಡ ಯುವರಾಜ್ ಸಿಂಗ್ ಅವರು ಟೂರ್ನಿಯಿಂದ ಔಟ್ ಆಗಿದ್ದಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬುಧವಾರ(ಮಾರ್ಚ್ 30) ಮಧ್ಯಾಹ್ನ ಪ್ರಕಟಿಸಿದೆ.
ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ | ಟೂರ್ನಿಗೆ ಫುಲ್ ಗೈಡ್
ಯುವರಾಜ್ ಸಿಂಗ್ ಬದಲಿಗೆ ಟೀಂ ಇಂಡಿಯಾ ಸೇರಿಕೊಂಡಿದ್ದ ಕರ್ನಾಟಕದ ಮನೀಶ್ ಪಾಂಡೆ ಅವರು ಈಗ ಆಡುವ XI ನಲ್ಲಿ ಸ್ಥಾನ ಪಡೆಯುವ ಆಸೆ ಇರಿಸಿಕೊಳ್ಳಬಹುದಾಗಿದೆ.ಮನೀಶ್ ಗೆ ಪೈಪೋಟಿ ನೀಡಲು ಅಜಿಂಕ್ಯ ರಹಾನೆ ಕೂಡಾ ತಂಡದಲ್ಲಿದ್ದಾರೆ.[ವಿಶ್ವ ಟಿ20: ಸೆಮಿಫೈನಲ್ ಪಂದ್ಯ ಎಲ್ಲಿ? ಫುಲ್ ವೇಳಾಪಟ್ಟಿ]
34 ವರ್ಷದ ಎಡಗೈ ಆಲ್ ರೌಂಡರ್ ಯುವರಾಜ್ ಸಿಂಗ್ ಅವರು ಭಾನುವಾರ ನಡೆದ ಪಂದ್ಯದ ವೇಳೆಗೆ ಗಾಯಗೊಂಡಿದ್ದು, ಎಂಆರ್ಐ ಸ್ಕ್ಯಾನ್ ಮಾಡಲಾಗಿತ್ತು. [ಭಾರತ-ವಿಂಡೀಸ್ ಕದನ ಆರಂಭಕ್ಕೂ ಮುನ್ನ ಓದಿರಿ!]
ನಾಯಕ ಎಂಎಸ್ ಧೋನಿ ಅವರು ಯುವರಾಜ್ ಸಿಂಗ್ ಅವರ ಗಾಯದ ಬಗ್ಗೆ ಮಾತನಾಡುತ್ತಾ, ತಂಡದಲ್ಲಿ ಬೇರೆ ಬದಲಾವಣೆ ಮಾಡಬೇಕು ಎಂದು ನನಗೆ ಅನ್ನಿಸುತ್ತಿಲ್ಲ. ಯುವರಾಜ್ ಅವರು ಗುಣಮುಖರಾಗುತ್ತಾರೆ ಎಂಬ ನಂಬಿಕೆ ಇದೆ ಎಂದಿದ್ದರು.[ಮುನ್ನೋಟ: ಭಾರತ- ವೆಸ್ಟ್ ಇಂಡೀಸ್ ಕದನ ಸ್ವಾರಸ್ಯ]
ಸಿಡ್ನಿಯಲ್ಲಿ ಶತಕ ಬಾರಿಸುವುದಕ್ಕೂ ಮುನ್ನ ಪಾಂಡೆ ಅವರು ಜುಲೈ 2015ರಲ್ಲಿ ಜಿಂಬಾಬ್ವೆ ವಿರುದ್ಧ 2 ಟಿ20 ಪಂದ್ಯವನ್ನಾಡಿದ್ದರು.