ಫೋಟೋಶಾಪ್ ಮಾಡಿದ ಚಿತ್ರ
ಫೋಟೋಶಾಪ್ ಬಳಸಿ ವಿರೂಪಗೊಳಿಸಿದ ಚಿತ್ರಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹೆಚ್ಚಾಗುತ್ತಿವೆ. ತ್ರಿವರ್ಣ ಧ್ವಜಕ್ಕೆ ಅವಮಾನ ಮಾಡುವ ಚಿತ್ರಕ್ಕೆ ಒಳ್ಳೆ ಗ್ರೇಟ್ ಮ್ಯಾಚ್ ನಿರೀಕ್ಷೆಯಿದೆ ಎಂದು ಹಾಕಲಾಗಿದೆ.
ಏಷ್ಯಾಕಪ್ ಫೈನಲ್
2016ರ ಏಷ್ಯಾಕಪ್ ಫೈನಲ್ ಗೂ ಮುನ್ನ ಬಾಂಗ್ಲಾ ವೇಗಿ ತಸ್ಕಿನ್ ಅಹಮದ್ ಕೈಯಲ್ಲಿ ಅಂದಿನ ನಾಯಕ ಎಂಎಸ್ ಧೋನಿ ರುಂಡವನ್ನು ಹಿಡಿದಂತೆ ಚಿತ್ರಿಸಲಾಗಿತ್ತು. ಈ ಗ್ರಾಫಿಕ್ ಇಮೇಜ್ ಸಾಮಾಜಿಕ ತಾಣಗಳಲ್ಲೂ ಓಡಾಡಿತ್ತು. ನಂತರ ಬಾಂಗ್ಲಾ ಸೋಲಿನ ನಂತರ ಇದಕ್ಕೆ ವಿರುದ್ಧವಾದ ಚಿತ್ರಗಳು ಹರಿದಾಡತೊಡಗಿತು.
ಅರ್ಧ ತಲೆ ಬೋಳಿಸಿದ ಚಿತ್ರ
ಬಾಂಗ್ಲಾದೇಶದ ಪ್ರತಿಕೆಯೊಂದು ಎಂಎಸ್ ಧೋನಿ ಹಾಗೂ ಟೀಂ ಇಂಡಿಯಾದ ಪ್ರಮುಖ ಆಟಗಾರರ ಅರ್ಧ ತಲೆ ಬೋಳಿಸಿದ ಚಿತ್ರವನ್ನು ಹಾಕಿ ವಿವಾದ ಎಬ್ಬಿಸಿತ್ತು. ಮುಸ್ತಫಿಜುರ್ ಅವರು 3 ಪಂದ್ಯಗಳಿಂದ 13 ವಿಕೆಟ್ ಕಿತ್ತು ಭಾರತದ ಬ್ಯಾಟಿಂಗ್ ಬೆನ್ನಲುಬು ಮುರಿದಿದ್ದರು. ಇದನ್ನು ಬಳಸಿಕೊಂಡು ಜಾಹೀರಾತು ವಿನ್ಯಾಸಗೊಳಿಸುವ ಪತ್ರಿಕೆ ಮುಸ್ತಫಿಜುರ್ ಕೈಲಿ ಕಟರ್ ನೀಡಿದ ಚಿತ್ರವಿತ್ತು.
ಸಚಿನ್ ಅಭಿಮಾನಿ ಮೇಲೂ ಹಲ್ಲೆ
ಬಾಂಗ್ಲಾದಲ್ಲಿ ಭಾರತ ಸರಣಿ ಸೋತಾಗ ಬ್ಯಾಟಿಂಗ್ ದಿಗ್ಗಜ ಸಚಿನ್ ಅಭಿಮಾಣಿ ಸುಧೀರ್ ಗೌತಮ್ ಮೇಲೆ ಬಾಂಗ್ಲಾದೇಶದಲ್ಲಿ ಹಲ್ಲೆಯಾಗಿತ್ತು. ಸ್ಟೇಡಿಯಂ ಬಿಟ್ಟು ಹೊರ ನಡೆಯುತ್ತಿದ್ದಂತೆ ಅವರ ಮೇಲೆ ಬಾಂಗ್ಲಾದ ಕಿಡಿಗೇಡಿ ಅಭಿಮಾನಿಗಳು ದಾಳಿ ಮಾಡಿದ್ದರು.